'ರೋಹಿತ್‌ ಒಬ್ಬ ಕ್ಯಾಪ್ಟನ್‌ ಎಂದು ಮೊದಲು ಗುರುತಿಸಿದ್ದು ಗಿಲ್‌ಕ್ರಿಸ್ಟ್‌': ಓಜಾ!

ಮುಂಬೈ: ಭಾರತ ತಂಡ ಈದ ಪ್ರವಾಸ ಕೈಗೊಳ್ಳಲಿದ್ದು, ಈ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ 18 ಸದಸ್ಯರ ಟೆಸ್ಟ್‌ ತಂಡವನ್ನು ಪ್ರಕಟ ಮಾಡಿ ಅನುಭವಿ ಓಪನರ್‌ ಅವರನ್ನು ನೂತನ ಉಪನಾಯಕನ್ನಾಗಿ ನೇಮಿಸಿದೆ. ಇದರ ಬೆನ್ನಲ್ಲೇ ಒಡಿಐನಲ್ಲಿ ನೂತನ ಕ್ಯಾಪ್ಟನ್‌ ರೋಹಿತ್‌ ಎಂದು ಅಚ್ಚರಿಯ ಘೋಷಣೆ ಮಾಡಿದೆ. ಕಳೆದ ತಿಂಗಳು ನಡೆದ ನ್ಯೂಜಿಲೆಂಡ್‌ ವಿರುದ್ಧ ಟಿ20 ಕ್ರಿಕೆಟ್‌ ಸರಣಿಯಲ್ಲಿ ರೋಹಿತ್‌ ಭಾರತ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಆಡಿ ಸರಣಿ ಜಯ (2-1) ತಂದಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಯಲ್ಲಿ ಏಕದಿನ ಕ್ರಿಕೆಟ್‌ ಕ್ಯಾಪ್ಟನ್ಸಿ ಅಭಿಯಾನ ಆರಂಭಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಎಡಗೈ ಸ್ಪಿನ್ನರ್‌ , ಯುವ ಆಟಗಾರನಾಗಿದ್ದಾಗಲೇ ರೋಹಿತ್‌ ಒಳಗಿನ ಪ್ರಚಂಡ ನಾಯಕನನ್ನು ಆಸ್ಟ್ರೇಲಿಯಾದ ಗುರುತಿಸಿದ್ದರು ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಮ್‌ ಗಿಲ್‌ಕ್ರಿಸ್ಟ್‌ ಡೆಕನ್‌ ಚಾರ್ಜರ್ಸ್‌ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ರೋಹಿತ್‌ ಶರ್ಮಾ ಅವರನ್ನು ತಂಡದ ಉಪನಾಯಕನ್ನಾಗಿ ನೇಮಕ ಮಾಡುವಂತೆ ಸೂಚಿಸಿದ್ದರು ಎಂಬ ಸಂಗತಿಯನ್ನು ಇದೀಗ ತಿಳಿಸಿದ್ದಾರೆ. "ರೋಹಿತ್‌ ಶರ್ಮಾ ಮುಂಬೈ ತಂಡಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಾಗಿರಲಿಲ್ಲ. ಆದರೆ, ಡೆಕನ್ ಚಾರ್ಜರ್ಸ್‌ ತಂಡದ ಪರ ಆಡುವಾಗ ಅವರನ್ನು ನಾಯಕತ್ವದ ಗುಂಪಿನಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ ನಂತರ ನಿಧಾನವಾಗಿ ಬದಲಾವಣೆ ತಂದುಕೊಂಡರು. ಆಗ ಡಿಸಿ ನಾಯಕ ಆಡಮ್‌ ಗಿಲ್‌ಕ್ರಿಸ್ಟ್‌ ಖುದ್ದಾಗಿ ರೋಹಿತ್‌ ಶರ್ಮಾ ಉಪನಾಯಕ ಆಗಬೇಕು ಎಂದು ಬಯಸಿದ್ದರು," ಎಂದು ಕ್ರಿಕ್‌ಬಝ್‌ ಕಾರ್ಯಕ್ರಮದಲ್ಲಿ ಓಜಾ ಹೇಳಿದ್ದಾರೆ. ಗೇಮ್‌ಪ್ಲಾನ್‌ ತಿಳಿಸುತ್ತಿದ್ದ ರೋಹಿತ್‌!ಮನುಂಬೈ ಮೂಲದ ಬಲಗೈ ಬ್ಯಾಟ್ಸ್‌ಮನ್‌ ತಮ್ಮ 20ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಆಡಿ ಭಾರಿ ಸದ್ದು ಮಾಡಿದ್ದರು. ಬಳಿಕ ಅವರನ್ನು ಡೆಕನ್‌ ಚಾರ್ಜರ್ಸ್‌ ತಂಡ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಖರೀದಿ ಮಾಡಿತ್ತು. 2011ರಲ್ಲಿ ಮುಂಬೈ ಇಂಡಿಯನ್ಸ್‌ ಸೇರಿದ ರೋಹಿತ್‌, 2013ರಲ್ಲಿ ತಂಡದ ನಾಯಕತ್ವ ಪಡೆದು ದಾಖಲೆಯ 5 ಬಾರಿ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಟ್ಟಿದ್ದಾರೆ. "ಆಗ ಆತ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಶುರುಮಾಡಿ ಕೇವಲ 2 ವರ್ಷಗಳು ಕಳೆದಿತ್ತಷ್ಟೆ. ಆಗಲೇ ಕೆಲ ಆಟಗಾರರ ವಿರುದ್ಧ ಅಥವಾ ಕೆಲ ಪಂದ್ಯಗಳ ಬಗ್ಗೆ ಗೇಮ್‌ಪ್ಲಾನ್‌ಗಳ ಸಲಹೆ ಮುಂದಿಡುತ್ತಿದ್ದರು. ಇದೇ ಕಾರಣಕ್ಕೆ ಡೆಕನ್‌ ಚಾರ್ಜರ್ಸ್‌ ತಂಡ ಅವರನ್ನು ನಾಯಕತ್ವದ ಗುಂಪಿಗೆ ಸೇರ್ಪಡೆ ಮಾಡಿತ್ತು. ಆಗ ಡೆಕನ್‌ ಚಾರ್ಜರ್ಸ್‌ ತಂಡದಲ್ಲಿ ಆಡಮ್‌ ಗಿಲ್‌ಕ್ರಿಸ್ಟ್‌ ಬಳಿಕ ರೋಹಿತ್‌ ಶರ್ಮಾ ತಂಡದ ನಾಯಕ ಎಂದೇ ಗುರುತಿಸಲಾಗಿತ್ತು. ಬಳಿಕ ರೋಹಿತ್‌ ಕೇವಲ ಬ್ಯಾಟ್ಸ್‌ಮನ್‌ ಅಲ್ಲ ಒಬ್ಬ ಅದ್ಭುತ ನಾಯಕ ಕೂಡ ಎಂಬ ದೃಷ್ಟಿಕೊನ ಜನರಲ್ಲಿ ಬಂದಿತ್ತು," ಎಂದು ಓಜಾ ಹೇಳಿದ್ದಾರೆ. ಅಂದಹಾಗೆ ರೋಹಿತ್‌ ಶರ್ಮಾಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ಕಡಿಮೆ. ಈವರೆಗೆ 10 ಒಡಿಐ ಪಂದ್ಯಗಳಲ್ಲಿ ನಾಯಕನಾಗಿ 8 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇದರಲ್ಲಿ 2018ರ ಏಷ್ಯಾ ಕಪ್‌ ಟ್ರೋಫಿ ಗೆಲುವು ಕೂಡ ಸೇರಿದೆ. ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ 22 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ತಂಡದ ನಾಯಕನಾಗಿ ಆಡಿ 18 ಪಂದ್ಯಗಳನ್ನು ಗೆದ್ದುಕೊಟ್ಟ ದಾಖಲೆ ಅವರದ್ದು. ಇತ್ತೀಚೆಗೆ ಪೂರ್ಣ ಪ್ರಮಾಣದ ನಾಯಕನಾಗಿ ನ್ಯೂಜಿಲೆಂಡ್‌ ಎದುರು ಆಡುವ ಮೂಲಕ ತಂಡಕ್ಕೆ 2-1 ಅಂತರದ ಸರಣಿ ಜಯ ತಂದುಕೊಟ್ಟಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dEl3UU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...