'ಗೋಡೆಗೆ ಗುದ್ದು ಎಂದರೂ ಗುದ್ದುವ ಬೌಲರ್‌ ಈತ', ಯವ ವೇಗಿಯನ್ನು ಹೊಗಳಿದ ಚೋಪ್ರಾ!

ಮುಂಬೈ: ಇದೀಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಭಾಗವಾಗಿ ನಡೆಯಲಿರುವ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ಸಲುವಾಗಿ ಬಿಸಿಸಿಐ 18 ಸದಸ್ಯರ ಭಾರತ ತಂಡವನ್ನು ಬುಧವಾರ ಪ್ರಕಟ ಮಾಡಿದೆ. ಈ ಬಗ್ಗೆ ಮಾತನಾಡಿರುವ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ , ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗದ ಆಯ್ಕೆ ವಿಚಾರದಲ್ಲಿ ಅನುಭವಿ ವೇಗದ ಬೌಲರ್‌ ಇಶಾಂತ್‌ ಶಾರ್ಮಾ ಬದಲು ಯುವ ವೇಗಿ ಮೊಹಮ್ಮದ್‌ ಸಿರಾಜ್‌ಗೆ ಆದ್ಯತೆ ನೀಡಬೇಕು ಎಂದು ಅಫ್ರಿಪ್ರಾಯ ಪಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೂ ಸಿರಾಜ್‌ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಅಂತ್ಯಗೊಂಡ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಸಿರಾಜ್‌ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ್ದರು. ಈ ಬಗ್ಗೆ ಮಾತನಾಡಿರುವ ಆಕಾಶ್‌, ಯುವ ವೇಗಿ ಭಾರತ ತಂಡದ ಬೌಲಿಂಗ್‌ ವಿಭಾಗದಲ್ಲಿ ಹೊಸ ಹುರುಪನ್ನು ತರುತ್ತಾರೆ ಎಂದಿದ್ದಾರೆ. ದಕ್ಷಿಣ ಆಫ್ರಿಕಾದ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಹೀಗಾಗಿ ಅಲ್ಲಿ ಇಶಾಂತ್‌ ಶರ್ಮಾ ಅವರಿಗಿಂತಲೂ ಹೆಚ್ಚು ಪರಿಣಾಮಕಾರಿ ಬೌಲರ್‌ ಆಗಬಲ್ಲರು ಎಂದು ಆಕಾಶ್‌ ಅಭಿಪ್ರಾಯ ಹೊರಹಾಕಿದ್ದಾರೆ. ಸಿರಾಜ್‌ಗೆ ಮೊದಲ ಆದ್ಯತೆ ನೀಡಿ!"ಸಿರಾಜ್‌ ಬಗ್ಗೆ ಮಾತನಾಡೋಣ. ಆತ ತಂಡದ ಬೌಲಿಂಗ್‌ ವಿಭಾಗದಲ್ಲಿ ಹೊಸ ಹುರುಪನ್ನು ತರುತ್ತಾನೆ. ಪ್ರತಿಬಾರಿ ಕಣಕ್ಕಿಳಿದಾಗಲೂ ತನ್ನ ಸಾಮರಥ್ಯದ ಶೇ.120 ರಷ್ಟು ಪ್ರಯತ್ನ ಹೊರತರುತ್ತಾನೆ. ನಾಯಕ ಆತನಿಗೆ ಗೋಡೆಗೆ ಗುದ್ದು ಎಂದರೂ ಗುದ್ದುವಂತಹ ಬೌಲರ್‌ ಆತ. ದಕ್ಷಿಣ ಆಫ್ರಿಕಾದಲ್ಲಿ ಸ್ವಿಂಗ್‌ ಬೌಲರ್‌ಗಳ ಅಗತ್ಯವಿಲ್ಲ. ಪಿಚ್‌ಗೆ ವೇಗವಾಗಿ ಎಸೆದು ನಂತರ ತಿರುವು ತರಬಲ್ಲ ಬೌಲರ್‌ಗಳು ಬೇಕು. ಸಿರಾಜ್‌ ಈ ರೀತಿ ಮಾಡಬಲ್ಲರು. ನನ್ನ ಪ್ರಕಾರ ಆತ ಪರಿಣಾಮಕಾರಿ ಬೌಲರ್‌. ಸಿರಾಜ್‌ ತಂಡದ ಮೂರನೇ ಆಯ್ಕೆಯ ವೇಗಿಯಾಗಬೇಕು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಬುಮ್ರಾ, ಶಮಿ ಮತ್ತು ಸಿರಾಜ್‌ ನನ್ನ ಆಯ್ಕೆಯ ವೇಗಿಗಳು," ಎಂದು ಆಕಾಶ್ ತಮ್ಮ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇಶಾಂತ್‌ ಕೂಡ ಉತ್ತಮ ಆಯ್ಕೆ!ಇದೇ ವೇಳೆ ಇಶಾಂತ್‌ ಶರ್ಮಾ ಕೂಡ ಉತ್ತಮ ಆಯ್ಕೆ ಎಂದು ಆಕಾಶ್‌ ಹೇಳಿದ್ದಾರೆ. ಅವರಲ್ಲಿನ ಅಪಾರ ಅನುಭವ ತಂಡಕ್ಕೆ ಲಾಭದಾಯಕ ಎಂದಿದ್ದಾರೆ. ಆದರೆ, ಇತ್ತೀಚಿನ ಗಾಯದ ಸಮಸ್ಯೆಗಳಿಂದಾಗಿ ಇಶಾಂತ್‌ ತಮ್ಮ ಶ್ರೇಷ್ಠ ಪ್ರದರ್ಶನ ನೀಡುವುದು ಕೊಂಚ ಅನುಮಾನವಾಗಿದೆ ಎಂದು ಆಕಾಶ್‌ ಹೇಳಿದ್ದಾರೆ. "ಇಶಾಂತ್‌ ಶರ್ಮಾ ಕೂಡ ಉತ್ತಮ ಆಯ್ಕೆ, ಇದರಲ್ಲಿ ಅನುಮಾನವೇ ಬೇಡ. ಏಕೆಂದರೆ ಅವರು 100ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ವೇಗದ ಬೌಲರ್‌ಗಳು ಅಷ್ಟು ಪಂದ್ಯಗಳನ್ನು ಆಡುವುದು ನಿಜಕ್ಕೂ ದೊಡ್ಡ ಸಾಧನೆ. ಆದರೆ, ಇತ್ತೀಚಿನ ಅವರ ಗಾಯದ ಸಮಸ್ಯೆಗಳ ಕಾರಣ ಅವರಿಂದ ಶ್ರೇಷ್ಠ ಪ್ರದರ್ಶನ ಬರುವುದು ಕೊಂಚ ಅನುಮಾನವಾಗಿದೆ," ಎಂದಿದ್ದಾರೆ. ಡಿ.26ರಿಂದ ಪ್ರಥಮ ಟೆಸ್ಟ್‌ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಭಾಗವಾಗಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ಡಿ.26ರಂದು ಸೆಂಚೂರಿಯನ್‌ನಲ್ಲಿ ಶುರುವಾಗಲಿದೆ. ಭಾರತ ತಂಡ ಡಿ.16ರಂದು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡ ಸ್ಟಾರ್‌ಗಳ ನಿವೃತ್ತಿ ನಂತರ ಕಳೆಗುಂದಿದ್ದು, ಈ ಬಾರಿ ಭಾರತ ತಂಡಕ್ಕೆ ಹರಿಣಗಳ ನಾಡಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿದೆ. ಟೆಸ್ಟ್‌ ಸರಣಿ ವೇಳಾಪಟ್ಟಿ ಹೀಗಿದೆಪ್ರಥಮ ಟೆಸ್ಟ್‌: ಡಿಸೆಂಬರ್‌ 26-30, ಸೆಂಚೂರಿಯನ್‌ ದ್ವಿತೀಯ ಟೆಸ್ಟ್‌: ಜನವರಿ 03-07, ಜೊಹಾನ್ಸ್‌ಬರ್ಗ್‌ ತೃತೀಯ ಟೆಸ್ಟ್‌: ಜನವರಿ 11-15, ಕೇಪ್‌ ಟೌನ್‌ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್‌ ತಂಡವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಕೆಎಲ್‌ ರಾಹುಲ್, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Gqu2Wi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...