ಒಂದೂವರೆ ಎಕರೆಯಲ್ಲಿ ಟೊಮೇಟೊ, 15 ಲಕ್ಷ ಆದಾಯ; ಹುಚ್ಚವ್ವನಹಳ್ಳಿ ಸಹೋದರರ ಸಕ್ಸಸ್ ಸ್ಟೋರಿ ಇಲ್ಲಿದೆ!

ಪಿ. ಕೃಷ್ಣಮೂರ್ತಿ ಮಾಯಕೊಂಡ ದಾವಣಗೆರೆ: ಅವರಿಬ್ಬರು ಸಹೋದರರು ವಿದ್ಯಾವಂತರು, ದೊಡ್ಡ-ದೊಡ್ಡ ಕಂಪನಿಗಳಿಗೆ ಹೋಗಿ ದುಡಿಯದು ಸಂಬಳ ಪಡೆಯಬೇಕೆಂಬ ಈ ಕಾಲದಲ್ಲಿ ಈ ಸಹೋದರರು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ತಮ್ಮ ಒಂದೂವರೆ ಎಕರೆಯಲ್ಲಿ 15 ಲಕ್ಷ ರೂ. ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಹೌದು, ಮಾಯಕೊಂಡದ ಯಲ್ಲಿ ಹರೀಶ್‌ ಮತ್ತು ಗಿರೀಶ್‌ ಸಹೋದರರು ಟೊಮೇಟೊ ಬೆಳೆದು ಈ ಸಾಧನೆ ಮಾಡಿದ್ದಾರೆ. ಇವರಿಬ್ಬರು ವಿದ್ಯಾವಂತರಾಗಿದ್ದು, ಪದವಿ ಓದಿದ್ದಾರೆ. ಮೊದಲು ಟೊಮೇಟೊ ಸಸಿ ಹಾಕಿದಾಗ ಬೆಲೆ ಇರಲಿಲ್ಲ. ಅಲ್ಲದೇ ಕಳೆದ ವರ್ಷ ಟೊಮೇಟೊ ಬೆಳೆದು ಈ ಸಹೋದರರು ಕೈ ಸುಟ್ಟುಕೊಂಡಿದ್ದರು. ಅಲ್ಲದೇ ಹಲವರು ಟೊಮೇಟೊ ಬಿಟ್ಟು ಬೇರೆ ಸಸಿ ಬೆಳೆಯಿರಿ ಎಂದಿದ್ದರು. ಆದರೂ ಛಲ ಬಿಡದ ಸಹೋದರರು ಸಾಲ ಮಾಡಿ ಟೊಮೇಟೊಸಸಿ ನೆಟ್ಟರು. ಅವುಗಳನ್ನು ನೆರವಾಗಿ ನಿಲ್ಲಿಸಲು ಕೋಲು, ಪ್ಲ್ಯಾಸ್ಟಿಕ್‌ ವೈರ್‌ಗಾಗಿ ಸಾಕಷ್ಟು ಹಣ ಖರ್ಚು ಮಾಡಿದರು. ಅಂದಾಜು ತನ್ನ ಒಂದೂವರೆ ಎಕರೆಗೆ ಎರಡೂವರೆ ಲಕ್ಷ ಖರ್ಚು ಮಾಡಿದರು. ಖರ್ಚು ಮಾಡಿದಂತೆ ಗಿಡದ ತುಂಬ ಟೊಮೇಟೊ ಬೆಳೆ ಬಂದಿತು. ಈ ವೇಳೆ ಅಕಾಲಿಕ ಮಳೆ ಅವರನ್ನು ವ್ಯಾಪಿಸಿತು. ಆಗ ಭೀತಿಯಲ್ಲಿದ್ದ ರೈತರಿಗೆ ಒಂದಿಷ್ಟು ನಷ್ಟವಾದರೂ ಟೊಮೇಟೊ ಕೈ ಬಿಡಲಿಲ್ಲ. ರೈತನ ತೋಟಕ್ಕೆ ಖರೀದಿದಾರರು ಬಂದರು, ಬಾಕ್ಸ್‌ ಟೊಮೇಟೊಗೆ 1100ರಿಂದ 1200 ರೂ.ತನಕ ಕೊಟ್ಟು ಖರೀದಿಸಿದರು. ಇದರಿಂದ ಮಾರುಕಟ್ಟೆ ವೆಚ್ಚವೂ ಉಳಿಯಿತು. ಸಾಮಾನ್ಯವಾಗಿ ಜೂನ್‌ ಮೊದಲ ವಾರದಿಂದ ಟೊಮೇಟೊ ಬೆಲೆಯಲ್ಲಿ ಏರಿಕೆಯಾಗುತ್ತದೆ, ಜೂನ್‌ ತಿಂಗಳಿಂದ ಆಗಸ್ಟ್‌ ತಿಂಗಳವರೆಗೆ ಉತ್ತಮ ಬೆಲೆ ಇದ್ದು, ಮಧ್ಯಾವಧಿಯಲ್ಲಿ ಒಂದಿಷ್ಟು ದರ ಏರಿತ್ತು. ಬಳಿಕ ಅಕಾಲಿಕ ಮಳೆ ಕಾರಣ ಟೊಮೇಟೊ ದಿಢೀರ್‌ ಏರಿತು. ಸದ್ಯ ಟೊಮೇಟೊ ಬೆಳೆ ಏರಿಕೆಯಾಗಿದ್ದು ರೈತರ ಮೊಗದಲ್ಲಿ ಸಂತಸ ಕಂಡಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿವಸಗಳ ಹಿಂದೆ 15 ಕೆಜಿ ತೂಕದ ಒಂದು ಬಾಕ್ಸ್‌ ಟೊಮೇಟೊ ಬೆಲೆ 200 ರೂ.ಗಳಿಂದ 400 ರೂ. ಇತ್ತು. ಅಂಗಡಿಗಳಲ್ಲಿಒಂದು ಕೆ.ಜಿ. ಟೊಮೇಟೊ ಬೆಲೆ 15 ರಿಂದ 25 ರೂಪಾಯಿಗಳಾಗಿತ್ತು. ಸದ್ಯ ಈಗಿನ ದರ ಕೆಜಿಗೆ 50ರಿಂದ 70 ರೂ.ಇದೆ. ಇನ್ನಷ್ಟು ದಿನ ಇದೇ ದರ ಇರಲಿದೆ ಸದ್ಯ ಈಗ ಮತ್ತಷ್ಟು ಜನ ಟೊಮೇಟೊ ಸಸಿ ನೆಟ್ಟಿದ್ದಾರೆ. ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಟೊಮೇಟೊ ಬೆಳೆಯಲು ಕಷ್ಟವಾಗುತ್ತದೆ. ಈ ರಾಜ್ಯಗಳಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಟೊಮೇಟೊ ಬೆಳೆಯಲು ಪೂರಕ ವಾತಾವರಣ ಇರುವುದಿಲ್ಲ. ಇದರ ಜತೆಗೆ ಜೂನ್‌ ತಿಂಗಳಿನಿಂದ ಬೇರೆ ಬೇರೆ ರಾಜ್ಯಗಳಲ್ಲಿ ಮುಂಗಾರು ಮಳೆ ಬೀಳುವುದರಿಂದ ಮಳೆಯಿಂದ ಬೆಳೆಗಳಿಗೆ ಹಾನಿ ಆಗುತ್ತದೆ. ಇದರಿಂದಲೂ ಟೊಮೇಟೊಗೆ ಹೆಚ್ಚಿನ ಬೆಲೆ ಸಿಗುತ್ತದೆ ಎನ್ನುತ್ತಾರೆ ಟೊಮೇಟೊ ವ್ಯಾಪಾರಿಗಳು. ದರ ಏತಕ್ಕೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಮುಂತಾದ ರಾಜ್ಯಗಳಲ್ಲಿ ಮಳೆ ಹೆಚ್ಚಾದ ಕಾರಣ ಅಲ್ಲಿ ನೆರೆಯಿಂದ ತರಕಾರಿ ಬೆಳೆ ಹಾಳಾಯಿತು. ಅಲ್ಲದೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಗೆ ಟೊಮೇಟೊ ಬೇಕಿದೆ. ಪರಿಣಾಮ ದರದಲ್ಲಿ ಏರಿಕೆ ಆಯಿತು. ಕಳೆದ ಬಾರಿ ಟೊಮೇಟೊ ಬೆಳೆದು ನಷ್ಟವಾಗಿತ್ತು. ಆದರೆ ಈ ಭರ್ಜರಿ ಟೊಮೇಟೊ ಬೆಳೆದಿದ್ದೇವೆ. ದರವೂ ಉತ್ತಮವಾಗಿದೆ. ಎಲ್ಲರೂ ಟೊಮೇಟೊ ಹಾಕಿದರೆ ಬೆಲೆ ಸಿಗುವುದಿಲ್ಲ. ಮಿಶ್ರ ಬೆಳೆ ಬೆಳೆದರೆ ಒಂದು ಬೆಳೆ ಹಾಳಾದರೆ, ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ಹರೀಶ್‌, ಗಿರೀಶ್‌, ಟೊಮೆಟೋ ಬೆಳೆದ ರೈತರು, ಹುಚ್ಚವ್ವನಹಳ್ಳಿ


from India & World News in Kannada | VK Polls https://ift.tt/3oLmpUg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...