'ನಮ್ಮ ಬೆಂಬಲ ಸದಾ ಬೆಂಗಳೂರಿಗೆ' ಸೋಲಿನ ಬೆನ್ನಲ್ಲೆ ಆರ್‌ಸಿಬಿಗೆ ಸುದೀಪ್‌ ಸಂದೇಶ!

ಹೊಸದಿಲ್ಲಿ: ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 35ನೇ ಪಂದ್ಯದಲ್ಲಿ ತಂಡ 6 ವಿಕೆಟ್‌ಗಳ ಸೋಲು ಅನುಭವಿಸಿದ ಬಗ್ಗೆ ಸ್ಯಾಂಡಲ್‌ವುಡ್‌ ನಟ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ಇಲ್ಲಿನ ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ, ವಿರಾಟ್‌ ಕೊಹ್ಲಿ (53) ಹಾಗೂ ದೇವದತ್‌ ಪಡಿಕ್ಕಲ್‌(70) ಅವರ ಅರ್ಧಶತಕಗಳ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 156 ರನ್‌ಗಳಿಗೆ ಸೀಮಿತವಾಯಿತು. ಬಳಿಕ ಗುರಿ ಹಿಂಬಾಲಿಸಿದ್ದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್‌ಗಳ ಗೆಲುವು ದಕ್ಕಿಸಿಕೊಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಸಿಎಸ್‌ಕೆ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು. ಇನ್ನು ಆರ್‌ಸಿಬಿ 3ನೇ ಸ್ಥಾನದಲ್ಲಿಯೇ ಉಳಿಯಿತು. ಪಂದ್ಯ ಮುಗಿದ ಬಳಿಕ ಸುದೀಪ್‌ ಅತ್ಯುತ್ತಮ ಕಮ್‌ಬ್ಯಾಕ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಫಾರ್ಮ್‌ಗೆ ಮರಳಿದ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, ನಾವು ಆರ್‌ಸಿಬಿಗೆ ಸದಾ ಬೆಂಬಲ ನೀಡುತ್ತೇವೆಂದು ಹೇಳಿದ್ದಾರೆ. "ಆರ್‌ಸಿಬಿಯ ಅದ್ಭುತ ಆರಂಭದ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್ ಕಮ್‌ಬ್ಯಾಕ್‌ ಮಾಡಿದ ಹಾದಿಗೆ ಹ್ಯಾಟ್ಸ್‌ ಆಫ್‌, ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿರುವುದನ್ನು ನೋಡಲು ತುಂಬಾ ಖುಷಿಯಾಗುತ್ತಿದೆ. ಇನ್ನುಳಿದ ಐದು ಪಂದ್ಯಗಳಲ್ಲಿ ಆರ್‌ಸಿಬಿಗೆ ಎರಡು ಅಗತ್ಯವಿದೆ. ನಮ್ಮ ಕಡೆಯಿಂದ ಬೆಸ್ಟ್‌ ವಿಷಸ್‌ ಹಾಗೂ ಆರ್‌ಸಿಬಿ ಅಭಿಮಾನಿಗಳಾದ ನಾವು ನಿಮ್ಮನ್ನು ಸದಾ ಬೆಂಬಲಿಸುತ್ತಲೇ ಇರುತ್ತೇವೆ," ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಪವರ್‌ಪ್ಲೇನಲ್ಲಿ ನಮ್ಮ ಬೌಲರ್‌ಗಳಿಗೆ ಎಕ್ಸ್‌-ಫ್ಯಾಕ್ಟರ್‌ ಕೊರತೆಯಿದೆ ಹಾಗೂ ಚೆಂಡಿನೊಂದಿಗೆ ಸಾಕಾಗುವಷ್ಟು ಧೈರ್ಯದ ಸಮಸ್ಯೆ ಕೂಡ ಇದೆ ಎಂದರು. ಇದರ ಜೊತೆಗೆ ನಾವು 175 ರನ್‌ ಗಳಿಸಬೇಕಾಗಿತ್ತು ಎಂದು ಹೇಳಿಕೊಂಡಿದ್ದಾರೆ. "ಇಲ್ಲಿನ ವಿಕೆಟ್‌ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು. 15 ರಿಂದ 20 ರನ್‌ ನಮ್ಮ ಪಾಲಿಗೆ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. 175 ರನ್‌ ಇಲ್ಲಿ ಗೆಲುವಿನ ಮೊತ್ತವಾಗುತ್ತಿತ್ತು. ಇದರ ಜೊತೆಗೆ ಸ್ಥಿರವಾಗಿ ನಾವು ಬೌಲ್‌ ಕೂಡ ಮಾಡಲಾಗಲಿಲ್ಲ ಹಾಗೂ ಸಾಕಷ್ಟು ಬೌಂಡರಿ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದೇವೆ. ಒಟ್ಟಿನಲ್ಲಿ ಚೆಂಡಿನೊಂದಿಗೆ ನಾವು ಸಾಕಷ್ಟು ಧೈರ್ಯ ತೋರಿಸುವಲ್ಲಿ ವಿಫಲರಾಗಿದ್ದೇವೆ," ಎಂದು ಬೇಸರ ವ್ಯಕ್ತಪಡಿಸಿದರು. "ಕೆಲ ಜಾಗದಲ್ಲಿ ಪಿಚ್‌ ಮಾಡಬಾರದೆಂಬ ಬಗ್ಗೆ ನಾವು ಮಾತನಾಡಿಕೊಂಡಿದ್ದೆವು, ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮವರು ವಿಫಲರಾಗಿದ್ದಾರೆ. ಅದರಲ್ಲೂ ಆರಂಭಿಕ 5-6 ಓವರ್‌ಗಳಲ್ಲಿ ನಮಗೆ ಎಕ್ಸ್‌-ಫ್ಯಾಕ್ಟರ್‌ ಮಿಸ್‌ ಆಗಿದೆ. ಇದರ ಹೊರತಾಗಿಯೂ ನಿರ್ಣಾಯಕ ಸನ್ನಿವೇಶಗಳಲ್ಲಿ ಉತ್ತಮ ಎಸೆತಗಳನ್ನು ಕಾರ್ಯಗತಗೊಳಿಸುವುದು ಅಗತ್ಯ. ಇಂಥಾ ಕೆಲ ಸನ್ನಿವೇಶಗಳಲ್ಲಿ ನಾವು ಎಡವುತ್ತಿದ್ದೇವೆ," ಎಂದು ಕೊಹ್ಲಿ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3i8yEH0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...