ಹೊಸದಿಲ್ಲಿ: ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆ ದಿನ ಎಂದು ಆಚರಿಸಲಾಗುತ್ತದೆ. ಸದ್ಯದ ಗಡಿ ಬಿಕ್ಕಟ್ಟು ಹಾಗೂ ದೇಶಗಳ ನಡುವಿನ ವೈಷಮ್ಯಗಳನ್ನು ಗಮನಿಸಿದರೆ ಪ್ರಸ್ತುತ ನೌಕಪಡೆ ಒಂದು ದೇಶಕ್ಕೆ ಬಹಳ ಮುಖ್ಯವಾದ ರಕ್ಷಣಾ ಪಡೆಯಾಗಿದೆ. ಭಾರತ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ, ಸದೃಢ ನೌಕಾಪಡೆಯನ್ನು ಭಾರತ ಹೊಂದಿದೆ. ಭಾರತ ವಾಣಿಜ್ಯ ವಹಿವಾಟಿಗೆ ಸಂಬಂಧಪಟ್ಟಂತೆ ಸಮುದ್ರಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿರುವುದರಿಂದ ಭಾರತಕ್ಕೆ ನೌಕಾಪಡೆ ಅತೀ ಮುಖ್ಯವಾಗಿದೆ. ಹೀಗಾಗಿ ಹೈದರಾಬಾದ್, ಕಾರವಾರ ಸೇರಿ ಕೆಲವೆಡೆ ನೌಕಾ ನೆಲಗಳನ್ನು ಸ್ಥಾಪಿಸಿದೆ. ಹಾಗಾದರೆ ಡಿಸೆಂಬರ್ 4 ಯಾಕೆ ಭಾರತದ ಇತಿಹಾಸದ ಪುಟದಲ್ಲಿ ಅಳಿಸಲಾಗದ ದಿನವಾಗಿದೆ? ಶತ್ರು ರಾಷ್ಟ್ರ ಪಾಕಿಸ್ತಾನದ ಜಂಘಾಬಲವನ್ನು ಭಾರತದ ನೌಕಾಪಡೆ ಹೇಗೆ ಹುದುಗಿಸಿ ವಿಜಯ ಸಾಧಿಸಿತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.ವಾಣಿಜ್ಯ ವಹಿವಾಟುಗಳಿಗೆ ಸಂಬಂಧಪಟ್ಟಂತೆ ಇದೀಗ ಭಾರತೀಯ ಸಮುದ್ರಗಳು ಪ್ರಮುಖವಾಗಿದೆ. ಹೀಗಾಗಿ ಡ್ರ್ಯಾಗನ್ ದೇಶ ಚೀನಾದ ಕಣ್ಣು ಭಾರತೀಯ ಸಮುದ್ರಗಳ ಮೇಲೆ ಬಿದ್ದಿದೆ. ಚೀನಾದಿಂದ ರಕ್ಷಿಸಿಕೊಳ್ಳಲು ಭಾರತೀಯ ನೌಕಾಪಡೆ ಭಾರತ ಸರಕಾರಕ್ಕೆ ಅತೀ ಮುಖ್ಯವಾಗಿದೆ. ಇದಕ್ಕಾಗಿ ವಿವಿಧ ಯೋಜನೆಗಳನ್ನು ನೌಕಾಪಡೆ ನಡೆಸುತ್ತಿದೆ. ಸದ್ಯ ಭಾರತೀಯ ನೌಕಾಪಡೆ ಬಲಿಷ್ಠವಾಗಿ ಬೆಳೆದು ನಿಂತಿದೆ.

ಹೊಸದಿಲ್ಲಿ:
ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆ ದಿನ ಎಂದು ಆಚರಿಸಲಾಗುತ್ತದೆ. ಸದ್ಯದ ಗಡಿ ಬಿಕ್ಕಟ್ಟು ಹಾಗೂ ದೇಶಗಳ ನಡುವಿನ ವೈಷಮ್ಯಗಳನ್ನು ಗಮನಿಸಿದರೆ ಪ್ರಸ್ತುತ ನೌಕಪಡೆ ಒಂದು ದೇಶಕ್ಕೆ ಬಹಳ ಮುಖ್ಯವಾದ ರಕ್ಷಣಾ ಪಡೆಯಾಗಿದೆ. ಭಾರತ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ, ಸದೃಢ ನೌಕಾಪಡೆಯನ್ನು ಭಾರತ ಹೊಂದಿದೆ. ಭಾರತ ವಾಣಿಜ್ಯ ವಹಿವಾಟಿಗೆ ಸಂಬಂಧಪಟ್ಟಂತೆ ಸಮುದ್ರಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿರುವುದರಿಂದ ಭಾರತಕ್ಕೆ ನೌಕಾಪಡೆ ಅತೀ ಮುಖ್ಯವಾಗಿದೆ. ಹೀಗಾಗಿ ಹೈದರಾಬಾದ್, ಕಾರವಾರ ಸೇರಿ ಕೆಲವೆಡೆ ನೌಕಾ ನೆಲಗಳನ್ನು ಸ್ಥಾಪಿಸಿದೆ. ಹಾಗಾದರೆ ಡಿಸೆಂಬರ್ 4 ಯಾಕೆ ಭಾರತದ ಇತಿಹಾಸದ ಪುಟದಲ್ಲಿ ಅಳಿಸಲಾಗದ ದಿನವಾಗಿದೆ? ಶತ್ರು ರಾಷ್ಟ್ರ ಪಾಕಿಸ್ತಾನದ ಜಂಘಾಬಲವನ್ನು ಭಾರತದ ನೌಕಾಪಡೆ ಹೇಗೆ ಹುದುಗಿಸಿ ವಿಜಯ ಸಾಧಿಸಿತು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಐದು ದಶಕಗಳ ಹಿಂದೆ ಏನಾಗಿತ್ತು?

ಅದು 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯ. ಡಿಸೆಂಬರ್ ಸಮಯದಲ್ಲಿ ಪಾಕಿಸ್ತಾನದ ಉಪಟಳ ಜಾಸ್ತಿಯಾಗಿತ್ತು. ಹೀಗಾಗಿ ಭಾರತೀಯ ನೌಕಾಪಡೆ ಪಾಕಿಸ್ತಾನಕ್ಕೆ ತಕ್ಕ ಏಟು ನೀಡಲು ಎಲ್ಲಾ ರೀತಿಯಲ್ಲಿ ತಯಾರಾಗಿತ್ತು. ಡಿಸೆಂಬರ್ 4 ರಾತ್ರಿ ಅಪರೇಷನ್ ಟ್ರೈಡೆಂಟ್ ಎಂಬ ಹೆಸರಲ್ಲಿ ಕಾರ್ಯಾಚರಣೆ ಆಯೋಜಿಸಿತು. ಹಿಂದೂ ಮುಂದು ನೋಡದೆ ಈ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ಕಮಾಂಡರ್ ಬಬ್ರು ಬಾನ್ ಯಾದವ್, ತನ್ನ ತಂಡದೊಂದಿಗೆ ಕರಾಚಿಯತ್ತ ಹೊರಟೇ ಬಿಟ್ಟರು. ಕರಾಚಿ ಬಂದರನ್ನು ಸುತ್ತುವರಿದ ಭಾರತೀಯ ನೌಕಾಪಡೆ ಯುದ್ಧಕ್ಕಾಗಿ ತಯಾರಿಟ್ಟಿದ್ದ ಪಾಕಿಸ್ತಾನದ ನೌಕಾ ಸೇನೆಗೆ ಸೇರಿದ ನಾಲ್ಕು ಹಡಗುಗಳು, ವಿಧ್ವಂಸಕ-ಮದ್ದುಗುಂಡುಗಳನ್ನು ಸಾಗಿಸುವ ಸರಕು ಹಡಗುಗಳು ಮತ್ತು ಇಂಧನ ಸಂಗ್ರಹ ಟ್ಯಾಂಕ್ಗಳನ್ನು ಭಾರತೀಯ ಸೇನೆ ನೌಕಪಡೆಗಳು ಹೊಡೆದುರುಳಿಸಿದ್ದವು. ಅತ್ತ ಪಾಕ್ನ ನೌಕಾಪಡೆ ಕೇಂದ್ರ ಕಚೇರಿಗೆ ಮಾಹಿತಿ ರವಾನೆಯಾಗುವಷ್ಟರಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಿ ಭಾರತೀಯ ನೌಕಾಪಡೆ ವಾಪಾಸ್ ಬಂದಿದ್ದವು. ಇದೇ ಮೊದಲ ಬಾರಿಗೆ ಹಡಗು ವಿರೋಧಿ ಕ್ಷಿಪಣಿಗಳನ್ನು ಬಳಸಿ ಪಾಕಿಸ್ತಾನದ ಹಡಗುಗಳನ್ನ ಉಡಾಯಿಸಿರುವುದು ವಿಶೇಷವಾಗಿತ್ತು.
ಕರಾಳ ಮುಖ: ಅಣೆಕಟ್ಟೆಗಳನ್ನು ನಿರ್ಮಿಸುವ ಮೂಲಕ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದೆ ಚೀನಾ, ಹೇಗೆ?
ಭಾರತದ ನೌಕೆಗಳ ಗೆಲುವು!

ಇನ್ನು ಪಾಕಿಸ್ತಾನದ ಕರಾಚಿಯತ್ತ ಭಾರತದ ನೌಕಾ ಸೇನೆಯ ಐಎನ್ಎಸ್ ನಿಪತ್, ಐಎನ್ಎಸ್ ನೀರ್ಘಾಟ್ ಮತ್ತು ಐಎನ್ಎಸ್ ವೀರ್ ನೌಕೆಗಳು ತೆರಳಿ ದಾಳಿ ನಡೆಸಿದವು. ಈ ಕಾರ್ಯಾಚರಣೆಯಲ್ಲಿ ಭಾರತದ ಯಾವುದೇ ಒಬ್ಬ ನೌಕಾಪಡೆಯ ಯೋಧನಿಗೂ ಸಣ್ಣ ಪುಟ್ಟ ಗಾಯವಾಗಿಲ್ಲ. ಅತ್ಯಂತ ನಿಪುಣತೆಯಿಂದ ಕಾರ್ಯಾಚರಣೆ ನಡೆಸಿ ಸುರಕ್ಷಿತರಾಗಿ ಭಾರತೀಯ ಯೋಧರು ಮರಳಿದ್ದರು. ಆದರೆ ಪಾಕಿಸ್ತಾನದ ನೌಕಾಪಡೆಯ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಸಾವನಪ್ಪಿದ್ದರು. ಇನ್ನು ಪಾಕಿಸ್ತಾನದ ಮೇಲಿನ ಈ ವಿಜಯವನ್ನು ಭಾರತೀಯ ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವೇ ದಾಳಿ ನಡೆದು ಭಾರತೀಯ ನೌಕಾಪಡೆ ಜಯಶಾಲಿಯಾಗಿತ್ತು. ಇನ್ನು ನಿಪುಣತೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನೌಕಾಪಡೆ ಅಧಿಕಾರಿಗಳಿಗೆ ಭಾರತ ಸರಕಾರ ಗ್ಯಾಲಂಟರಿ ಅವಾರ್ಡ್ ನೀಡಿ ಗೌರವಿಸಿತ್ತು. ಹೀಗಾಗಿ ಈ ದಿನವನ್ನು ನೌಕಾಪಡೆ ದಿನವನ್ನಾಗಿ ಆಚರಿಸಿ, ಇದರ ಸ್ಮರಣಾರ್ಥ ಮುಂಬಯಿನ ಕರಾವಳಿಯಲ್ಲಿ ವಿಶೇಷ ತಾಲೀಮುಗಳು ನಡೆಯುತ್ತದೆ.
ಸುವೇಂದು ಅಧಿಕಾರಿಗೆ ಬಾಗಿಲು ಮುಚ್ಚಿದ ಟಿಎಂಸಿ, ಬಿಜೆಪಿಯತ್ತ ಬಂಡಾಯ ನಾಯಕ?
ಭಾರತಕ್ಕೆ ನೌಕಾಪಡೆ ಪ್ರಮುಖ!

ಸದ್ಯ ಇಂಡಿಯನ್ ಓಶನ್ ಮೇಲೆ ಚೀನಾ ಕಣ್ಣಿಟ್ಟಿದೆ. ಪಾಕಿಸ್ತಾನ ಸೇರಿ ಹಲವೆಡೆ ನೌಕಾನೆಲೆಗಳನ್ನು ಚೀನಾ ನಿರ್ಮಿಸಿ ಭಾರತಕ್ಕೆ ಸೇರಿದ ಸಮುದ್ರಗಳಿಗೆ ಕನ್ನ ಹಾಕಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ನೌಕಾಪಡೆ ಅತ್ಯಂತ ಮುಖ್ಯವಾಗಿದೆ. ದಿನ ನಿತ್ಯ ಅರಬ್ಬಿ ಹಾಗೂ ಬಂಗಾಳಕೊಲ್ಲಿ ಸಮುದ್ರದಲ್ಲಿ ಗಸ್ತು ತಿರುಗುತ್ತಿರುವ ಭಾರತ ದಿನದಿಂದ ದಿನಕ್ಕೆ ಸದೃಢವಾಗಿ ಬೆಳೆಯುತ್ತಿದೆ. ವಾಣಿಜ್ಯ ಸಂಬಂಧ ಭಾರೀ ಪ್ರಮುಖ ಪಾತ್ರವಹಿಸುವ ಭಾರತೀಯ ಸಮುದ್ರಗಳನ್ನು ಯಾವುದೇ ಕಾರಣಕ್ಕೂ ಚೀನಾ ಅತಿಕ್ರಮಿಸದಿರಲು ಭಾರತೀಯ ನೌಕಾಪಡೆ ಎಲ್ಲಾ ರೀತಿಯಲ್ಲಿ ರಣವ್ಯೂಹಗಳನ್ನು ನಿರ್ಮಿಸಿದೆ. ಈಗಾಗಲೇ ಹಲವು ಜಲಾಂತರ್ಗಾಮಿ ನೌಕೆಗಳನ್ನು ಭಾರತ ಹೊಂದಿದೆ. ಯುದ್ಧ ನೌಕೆಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ ಕೂಡ ನಡೆಸಿದೆ. ಒಟ್ಟಾರೆ ಮುಂದಿನ ಐದು ವರ್ಷಗಳಲ್ಲಿ ಇನ್ನಷ್ಟು ಸುಧಾರಿಸಿ, ಸದೃಢವಾಗುವತ್ತ ಹೆಜ್ಜೆ ಇಡುತ್ತಿದೆ ಭಾರತೀಯ ನೌಕಾಪಡೆ.
from India & World News in Kannada | VK Polls https://ift.tt/3or2OFR