ಕೆಎಲ್‌ಗಿಲ್ಲ ಓಪನರ್; ಒಂದೇ ಪಂದ್ಯದಲ್ಲಿ ಡೆಬ್ಯು ಮಾಡುತ್ತಾರಾ ಪೃಥ್ವಿ, ಮಯಾಂಕ್?

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ. ರೋಹಿತ್ ಬದಲಿ ಆಟಗಾರನ ಸ್ಥಾನಕ್ಕೆ ಕರ್ನಾಟಕದ ಅವರನ್ನು ಹೆಸರಿಸಲಾಗಿದೆ. ಈ ಮಧ್ಯೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಯಾರು ಆರಂಭಿಕರಾಗಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯವು ಫೆಬ್ರವರಿ 5ರ ಬುಧವಾರದಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಈ ನಡುವೆ ಮೊದಲ ಏಕದಿನಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ಅಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಆರಂಭಿಕರಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಇದೆರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಪೃಥ್ವಿ ಶಾ ಡೆಬ್ಯು ಮಾಡುವುದು ಖಚಿತವೆನಿಸಿದೆ. ಶಿಖರ್ ಧವನ್ ಗಾಯಗೊಂಡ ಪರಿಣಾಮ ಕಿವೀಸ್ ವಿರುದ್ಧ ಏಕದಿನ ಸರಣಿಗೆ ಪೃಥ್ವಿ ಶಾ ಆಯ್ಕೆಯಾಗಿದ್ದರು. ಈ ಹಿಂದೆ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿರುವ ಪೃಥ್ವಿ ಏಕದಿನದಲ್ಲೂ ಆರಂಭಿಕನಾಗಿ ಅಬ್ಬರಿಸುವರೇ ಎಂಬುದನ್ನು ಕಾದು ನೋಡಬೇಕಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್ ವಿನ್ನಿಂಗ್ ಅರ್ಧಶತಕ ಬಾರಿಸಿರುವ ಕೆಎಲ್ ರಾಹುಲ್, ತಾವು ಯಾವುದೇ ಕ್ರಮಾಂಕದಲ್ಲೂ ಆಡಲು ಸೈ ಎಂಬುದನ್ನು ಸಾಬೀತು ಮಾಡಿದ್ದರು. ಈ ನಡುವೆ ಉದಯೋನ್ಮುಖ ರಿಷಬ್ ಪಂತ್ ಕೂಡಾ ಗಾಯಗೊಂಡ ಪರಿಣಾಮ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಮಧ್ಯಮ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೊತೆಗೆ ಫಿನಿಶರ್ ಜವಾಬ್ದಾರಿಯನ್ನು ಕೆಎಲ್ ರಾಹುಲ್ ನಿಭಾಯಿಸಲಿದ್ದಾರೆ. ಏತನ್ಮಧ್ಯೆ ಉದಯೋನ್ಮುಖ ಪೃಥ್ವಿ ಶಾ ಜೊತೆಗೆ ಕರ್ನಾಟಕದ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇದರೊಂದಿಗೆ ಮಯಾಂಕ್ ಕೂಡಾ ಏಕದಿನಕ್ಕೆ ಕಾಲಿರಿಸಿರುವುದು ಬಹುತೇಕ ಖಚಿತಗೊಂಡಿದೆ. ಈ ಮೂಲಕ ಒಂದೇ ಪಂದ್ಯದಲ್ಲಿ ಇಬ್ಬರು ಹೊಸ ಜೋಡಿಗಳು ಆರಂಭಿಕರಾಗಿ ಏಕದಿನಕ್ಕೆ ಕಾಲಿರಿಸುವ ಸಾಧ್ಯತೆಯಿದೆ. "ಏಕದಿನ ಸರಣಿಗೆ ರೋಹಿತ್ ಶರ್ಮಾ ಅಲಭ್ಯವಾಗಿರುವುದು ದುರದೃಷ್ಟಕರ. ತಂಡದಲ್ಲಿ ಅವರು ಬೀರಿರುವ ಪ್ರಭಾವ ಎಲ್ಲರಿಗೂ ತಿಳಿದ ವಿಚಾರ. ಸದ್ಯ ಯಾವುದೇ ಏಕದಿನ ಟೂರ್ನಿಯ ಬಗ್ಗೆ ಮಗ್ನವಾಗುವ ಅಗತ್ಯವಿಲ್ಲ. ಹಾಗಾಗಿ ಚೇತರಿಸಿಕೊಳ್ಳಲು ಸರಿಯಾದ ಸಮಯ ಇದಾಗಿದೆ. ಏಕದಿನದಲ್ಲಿ ಖಂಡಿತವಾಗಿಯೂ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಕೆಎಲ್ ಮಧ್ಯಮ ಕ್ರಮಾಂಕದಲ್ಲಿ ಒಗ್ಗಿಕೊಳ್ಳಲು ಹಾಗೂ ಆಡಲು ನಾವು ಬಯಸುತ್ತೇವೆ" ಎಂದು ನಾಯಕ ವಿರಾಟ್ ಕೊಹ್ಲಿ ವಿವರಿಸಿದರು. "ಏಕದಿನದಲ್ಲಿ ನಾವು ಆಸ್ಟ್ರೇಲಿಯಾ ವಿರುದ್ಧ ಕಠಿಣ ಸರಣಿಯನ್ನು ಆಡಿದ್ದೇವೆ. ಮೊದಲ ಪಂದ್ಯ ಸೋತರೂ ಕಮ್ ಬ್ಯಾಕ್ ಮಾಡಿ 2-1ರ ಅಂತರದಲ್ಲಿ ಸರಣಿ ಗೆದ್ದಿದ್ದೇವೆ. ಆ ಸರಣಿಯಿಂದ ಸಾಕಷ್ಟು ಆತ್ಮವಿಶ್ವಾಸವನ್ನು ಪಡೆದಿದ್ದೇವೆ. ಇಲ್ಲೂ ಧನಾತ್ಮಕ ಕ್ರಿಕೆಟ್ ಆಡಲು ಪ್ರಯತ್ನಿಸಲಿದ್ದೇವೆ. ನಮ್ಮ ಯೋಜನೆಗಳಲ್ಲಿ ನಂಬಿಕೆಯಿದೆ. ನ್ಯೂಜಿಲೆಂಡ್ ಬಿಟ್ಟುಕೊಡುವುದಿಲ್ಲ ಎಂಬುದನ್ನು ತಿಳಿದಿದ್ದೇವೆ. ಅದಕ್ಕಾಗಿ ನಾವು ಭಿನ್ನವಾಗಿರಬೇಕು" ಎಂದು ಕೊಹ್ಲಿ ಸೇರಿಸಿದರು. ಅದೇ ಹೊತ್ತಿಗೆ ಫೀಲ್ಡಿಂಗ್ ಗುಣಮಟ್ಟದಲ್ಲೂ ವೃದ್ಧಿಯಾಗಬೇಕಿದೆ ಎಂಬುದನ್ನು ನಾಯಕ ಕೊಹ್ಲಿ ಬೊಟ್ಟು ಮಾಡಿದದು. "ನಮ್ಮ ತಂಡದ ಸರಾಸರಿ ವಯಸ್ಸು 27 ಆಗಿದೆ. ನಾವು ಇದಕ್ಕಿಂತಲೂ ಉತ್ತಮ ಫೀಲ್ಡಿಂಗ್ ಮಾಡಬೇಕಿದೆ. ನಾವು ಕೆಲವೊಂದು ಕೆಟ್ಟ ಫೀಲ್ಡಿಂಗ್ ಅನುಭವವನ್ನು ಹೊಂದಿದ್ದು, ಇದನ್ನು ನಿರೀಕ್ಷೆ ಮಾಡಲಿಲ್ಲ. ಎಲ್ಲ ಮೂರು ಕೌಶಲ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ" ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bekLSD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...