ಹಾಸನ: ಯುವತಿಯೊಬ್ಬಳನ್ನು ಅಪಹರಿಸಿ ಚಲಿಸುವ ಕಾರಿನೊಳಗೆ ಬಲವಂತವಾಗಿ ತಾಳಿ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನೊಳಗೆ ಯುವತಿಯೊಬ್ಬಳಿಗೆ ಬಲವಂತವಾಗಿ ತಾಳಿ ಕಟ್ಟುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬೆನ್ನಲ್ಲೇ ಯುವತಿಯ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ದುದ್ದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ಮತ್ತು ವೈರಲ್ ವಿಡಿಯೋದ ದೃಶ್ಯಗಳನ್ನು ಆಧರಿಸಿ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಮಂದಳವಾರ ಸಂಜೆ ಹಾಸನದ ಡೇರಿ ಸರ್ಕಲ್ನಿಂದ ಯುವತಿಯನ್ನು ಕಾರಿನೊಳಗೆ ಕೂರಿಸಿಕೊಂಡು ಅಪಹರಣ ಮಾಡಿದ್ದರು. ಮನು, ವಿನಯ್, ಪ್ರವೀಣ್ ಹಾಗೂ ಕಾರು ಚಾಲಕ ಸಂದೀಪ್ ಎಂಬುವವರು ಈ ಕೃತ್ಯ ಎಸಗಿದ್ದರು. ವೈರಲ್ ಆದ ವಿಡಿಯೋ ಮತ್ತು ಪೋಷಕರ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಿದೆವು. ಆರೋಪಿಗಳು ಯುವತಿಯನ್ನು ರಾಮನಗರದಲ್ಲಿ ಇರಿಸಿಕೊಂಡಿರುವ ವಿಚಾರ ತಿಳಿಯಿತು. ನಂತರ ಯುವತಿಯನ್ನು ಅಪಹರಣಕಾರರ ಕೈಯಿಂದ ರಕ್ಷಿಸಿ, ಆರೋಪಿಗಳನ್ನು ಬಂಧಿಸಲಾಯಿತು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
from India & World News in Kannada | VK Polls https://ift.tt/2ucmVS2