ಬೆಂಗಳೂರು: ಗುರುವಾರ ಫೆ. 6 ರಂದು ಸಚಿವ ನಡೆಯಲಿದ್ದು ಸಚಿವಾಕಾಂಕ್ಷಿಗಳ ಲಾಬಿ ತೀವೃಗೊಂಡಿದೆ. ಸಂಪುಟ ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿರುವ ಕುಟುಂಬ ಸಮೇತ ಸಿಎಂ ಭೇಟಿ ಮಾಡಿ ಸಚಿವಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆರ್. ಶಂಕರ್ ಅತಂತ್ರರಾಗುವ ಭಯದಲ್ಲಿದ್ದಾರೆ. ಮಂಗಳವಾರ ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಪತ್ನಿ ಹಾಗೂ ಪುತ್ರನ ಜೊತೆಗೆ ಆಗಮಿಸಿದ್ದ ಆರ್. ಶಂಕರ್ ರಾಜಕೀಯ ಭವಿಷ್ಯದ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಜೊತೆಗೆ ತನ್ನ ಪಕ್ಷವನ್ನು ವಿಲೀನ ಮಾಡಿಕೊಂಡಿದ್ದ ಆರ್. ಶಂಕರ್ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರು. ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಆದರೆ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಲಾಗುವುದು ಎಂಬ ಭರವಸೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದರು. ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಂಕರ್ಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ತೆರವಾಗಿರುವ ಒಂದು ವಿಧಾನಪರಿಷತ್ ಸ್ಥಾನಕ್ಕೆ ಡಿಸಿಎಂ ಆಗಿರುವ ಲಕ್ಷ್ಮಣ್ ಸವದಿ ಪಾಲಾಗುತ್ತಿರುವುದರಿಂದ ಸಚಿವರಾಗಲು ಕನಿಷ್ಠ ಒಂದು ವರ್ಷ ಕಾಯಲೇ ಬೇಕಾದ ಪರಿಸ್ಥತಿ ಆರ್. ಶಂಕರ್ ಅವರದ್ದು. ಒಂದು ವರ್ಷದ ಬಳಿಕ ಏಳು ವಿಧಾನಪರಿಷತ್ ಸ್ಥಾನಗಳು ತೆರವಾಗಲಿದೆ. ಆದರೆ ಪರಾಜಿತ ಅಭ್ಯರ್ಥಿಗಳಾದ ಎಂಟಿಬಿ ನಾಗರಾಜ್ ಹಾಗೂ ಎಚ್ ವಿಶ್ವನಾಥ್ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಅದರ ಜೊತೆಗೆ ಮೂಲ ಬಿಜೆಪಿ ಶಾಸಕರು ಸರದಿಯ ಸಾಲಿನಲ್ಲಿದ್ದಾರೆ. ಒಂದು ವರ್ಷದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನರಾರಚನೆಯಾದರೂ ಗೊಂದಲ ತಪ್ಪಿದಲ್ಲ. ಈ ವೇಳೆಯೂ ಸಚಿವ ಸ್ಥಾನ ಸಿಗದೇ ಇದ್ದರೆ ಆರ್. ಶಂಕರ್ ರಾಜಕೀಯ ಭವಿಷ್ಯ ಬಹುತೇಕ ಮುಕ್ತಾಯ ಕಂಡಂತೆ. ಇದರಿಂದ ಆತಂಕಿತರಾದ ಆರ್. ಶಂಕರ್ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಪದೇ ಪದೇ ಭೇಟಿಯಾಗುತ್ತಿದ್ದಾರೆ. ಸಿಎಂ ಬಿಎಸ್ವೈ ಶಂಕರ್ ಅವರಿಗೆ ಭರವಸೆಯನ್ನು ನೀಡಿದ್ದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರಂತೆ.
from India & World News in Kannada | VK Polls https://ift.tt/2GSoCXy