ಹೊಸದಿಲ್ಲಿ: ಮೊದಲು ಪಾಕಿಸ್ತಾನ ತಂಡವನ್ನು 172 ರನ್ಗಳಿಗೆ ಆಲ್ಔಟ್ ಮಾಡಿ ಬಳಿಕ ಮತ್ತು ದಿವ್ಯಾನ್ಷ್ ಸಕ್ಸೇನ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಯುವ ಭಾರತ ತಂಡ ಕಿರಿಯ ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಫೈನಲ್ ತಲುಪಿತು. ಇದು ಕಿರಿಯ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಸಿಕ್ಕಿರುವ ಸತತ ನಾಲ್ಕನೇ ಗೆಲುವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪಾಕ್ ಅಂತಿಮ 6 ವಿಕೆಟ್ಗಳನ್ನು ಕೇವಲ 26 ರನ್ಗಳಿಗೆ ಕಳೆದುಕೊಂಡಿತು. ಬಳಿಕ ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲೂ ಅಂತಹ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಇದು ಪಾಕಿಸ್ತಾನ ತಂಡದ ಮಾಜಿ ವೇಗಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಕ್ರಿಕೆಟ್ ಭವಿಷ್ಯವನ್ನು ರೂಪಿಸುವಲ್ಲಿ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಫಲವಾಗಿದ್ದು, ಯುವ ಆಟಗಾರರನ್ನು ಬೆಳೆಸುವ ಸುಸಜ್ಜಿತ ವ್ಯವಸ್ಥೆ ತರುವಲ್ಲಿ ಹಿಂದುಳಿದಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. "ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದ ಪಾಕಿಸ್ತಾನದ ಅಂಡರ್ 19 ತಂಡಕ್ಕೆ ಶುಭಾಶಯಗಳು. ಇದೊಂದು ಉತ್ತಮ ಪ್ರಯತ್ನ ಆದರೆ ಈ ಪ್ರಯತ್ನ ಫೈನಲ್ ತಲುಪಲು ಸಾಕಾಗಲಿಲ್ಲ. ಫೀಲ್ಡಿಂಗ್ನಲ್ಲಿ ಪಾಕ್ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಇದು 19 ವರ್ಷದೊಳಗಿನವರ ತಂಡವಾಗಿದ್ದು, ಯಾರೊಬ್ಬರು ಕೂಡ ಚೆಂಡನ್ನು ಹಿಡಿಯಲು ಡೈವ್ ಹಾಕುತ್ತಿಲ್ಲ. ಹೀಗಾಗಿ ಖಂಡಿತಾ ಫೈನಲ್ ತಲುಪಲು ನಮ್ಮದು ಅರ್ಹ ತಂಡವಲ್ಲ. ಸೆಮಿಫೈನಲ್ನಲ್ಲಿ ಗೆದ್ದ ಭಾರತ ತಂಡಕ್ಕೆ ಶುಭಾಶಯಗಳು," ಎಂದು ಅಖ್ತರ್ ಹೇಳಿದ್ದಾರೆ. "ಯುವ ಭಾರತ ತಂಡಕ್ಕೆ ಸಿಕ್ಕ ಅತ್ಯಂತ ಅಧಿಕಾರಯುತ ಗೆಲುವಿದು. ತಂಡದಲ್ಲಿ ಮುಂದೊಂದು ದಿನ ಭಾರತ ಹಿರಿಯರ ತಂಡವನ್ನು ಪ್ರತಿನಿಧಿಸುವ ಆಟಗಾರರಿದ್ದಾರೆ. ಭಾರತದ ಭವಿಷ್ಯ ಉತ್ತಮ ಕೈಗಳಲ್ಲಿರುವುದನ್ನು ಕಂಡು ಸಂತಸವಾಗುತ್ತಿದೆ," ಎಂದಿದ್ದಾರೆ. ಇದೇ ವೇಳೆ ಮುಂಬೈನ ಆಝಾದ್ ಮೈದಾನದ ಆಚೆ ಟೆಂಟ್ನಲ್ಲಿ ವಾಸಿಸುತ್ತಾ ಕ್ರಿಕೆಟ್ ಅಭ್ಯಾಸ ಮಾಡಿ, ಜೊತೆಗೆ ಪಾನಿಪುರಿ ಮಾರುತ್ತಾ ಜೀವನ ಕಟ್ಟಿಕೊಂಡಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸೆಮಿಫೈನಲ್ನಲ್ಲಿ ಶತಕ ಬಾರಿಸಿದ್ದನ್ನು ಅಖ್ತರ್ ಗುಣಗಾನ ಮಾಡಿದ್ದಾರೆ. "ಭಾರತ ತಂಡದ ಜೈಸ್ವಾಲ್ ಬಗ್ಗೆ ಮಾತನಾಡಲೇ ಬೇಕು. ಕ್ರಿಕೆಟ್ ಆಡಲು ತನ್ನೂರನ್ನು ತೊರೆದು ಮುಂಬೈಗೆ ಆಗಮಿಸಿ ಶೆಡ್ನಲ್ಲಿ ಮಲಗುತ್ತಿದ್ದ. ಇದೀಗ ಕಿರಿಯರ ವಿಶ್ವಕಪ್ನಲ್ಲಿ ಎರಡು ಶತಕ ಬಾರಿಸಿದ್ದಾನೆ. ಬೆಳಗ್ಗಿನ ಸಮಯದಲ್ಲಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ. ತನ್ನ ತಟ್ಟೆಯಲ್ಲಿನ ಊಟದ ಸಲುವಾಗಿ ಸಹ ಆಟಗಾರರಿಗೂ ಪಾನಿಪುರಿ ಮಾರಿದ್ದಾನೆ. ಈ ಮಾತು ನನೆಪಿರಲಿ. ಇಷ್ಟು ಬದ್ಧತೆಯುಳ್ಳ ಆಟಗಾರ ಮುಂದೊಂದು ದಿನ ಭಾರತ ಹಿರಿಯರ ತಂಡದ ಪರ ಆಡಲಿದ್ದಾನೆ. ಅವನಲ್ಲಿ ಅದಕ್ಕೆ ಬೇಕಾದ ಎಲ್ಲಾ ಸಾಮರ್ಥ್ಯವಿದೆ," ಎಂದು ಮುಕ್ತ ಕಂಠದಿಂದ ಹೊಗಳಿದ್ದಾರೆ. "ಪಾಕಿಸ್ತಾನದ ಆಟಗಾರರು ಜೈಸ್ವಾಲ್ ಅವರಿಂದ ಕಲಿಯುವುದಿದೆ. ಆತ ಶ್ರೇಷ್ಠತೆಯ ಕಡೆಗೆ ಓಡುತ್ತಿದ್ದ, ಈಗ ಆತನ ಹಿಂದೆ ಸಂಪತ್ತು ಓಡುತ್ತಿದೆ," ಎಂದಿದ್ದಾರೆ. ಇದೇ ವೇಳೆ ಪಾಕಿಸ್ತಾನ ಕಿರಿಯರ ತಂಡಕ್ಕೆ ಕೋಚ್ಗಳನ್ನು ನೇಮಕ ಮಾಡುವುದರಲ್ಲಿ ಪಿಸಿಬಿ ವಿಫಲವಾಗಿದ್ದು, ಈ ಕಲೆಯನ್ನು ಬಿಸಿಸಿಐನಿಂದ ನೋಡಿ ಕಲಿತುಕೊಳ್ಳಬೇಕು, ಬಿಸಿಸಿಐ ಮಾಜಿ ಆಟಗಾರರನ್ನು ಕೋಚ್ಗಳಾಗಿ ನೇಮಕ ಮಾಡುತ್ತಿದೆ ಎಂದಿದ್ದಾರೆ. ಕಿರಿಯರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಹೈಲೈಟ್ಸ್ ವಿಡಿಯೋ ಇಲ್ಲಿ ವೀಕ್ಷಿಸಬಹುದಾಗಿದೆ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GTv5Bd