ಜಸ್ಪ್ರೀತ್ ಬುಮ್ರಾ ಯಾರ್ಕರ್‌ಗೆ ದಿಶಾ ಪಟಾನಿ ಕ್ಲೀನ್ ಬೌಲ್ಡ್!

ಹ್ಯಾಮಿಲ್ಟನ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ 5-0 ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಚಾರಿತ್ರಿಕ ದಾಖಲೆ ಮೆರೆದಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಈ ಮಧ್ಯೆ ಬಲಗೈ ವೇಗದ ಬೌಲರ್ , ಅಂತಿಮ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿರುವುದರ ಹೊರತಾಗಿಯೂ ಸರಣಿಯಲ್ಲಿ ಮಿಶ್ರ ಫಲವನ್ನು ಕಂಡಿದ್ದರು. ಮೊದಲೆರಡು ಪಂದ್ಯಗಳಲ್ಲಿ ಮಿಂಚಿರುವ ಬುಮ್ರಾ, ಮೂರನೇ ಪಂದ್ಯದಲ್ಲಿ ಸಾಕಷ್ಟು ದಂಡಿಸ್ಪಟ್ಟಿದ್ದರು. ಟೈನಲ್ಲಿ ಅಂತ್ಯಗೊಂಡ ಪಂದ್ಯದಲ್ಲಿ ಭಾರತ ಸೂಪರ್ ಓವರ್‌ನಲ್ಲಿ ಗೆಲುವು ಬಾರಿಸಿತ್ತು. ಆದರೆ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 45 ರನ್ ಬಿಟ್ಟುಕೊಟ್ಟಿರುವ ಬುಮ್ರಾ, ಬಳಿಕ ಸೂಪರ್ ಓವರ್‌ನಲ್ಲೂ 17 ರನ್ ಬಿಟ್ಟಿಕೊಟ್ಟಿದ್ದರು. ನಾಲ್ಕನೇ ಪಂದ್ಯದಲ್ಲೂ ಭಾರತ ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿತು. ಆದರೆ ಜಸ್ಪ್ರೀತ್ ಬುಮ್ರಾ ಪ್ರಭಾವಿ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಸೂಪರ್ ಓವರ್‌ನಲ್ಲಿ 13ರನ್ ಬಿಟ್ಟುಕೊಟ್ಟಿದ್ದರು. ಈ ನಡುವೆ ಅಂತಿಮ ಟಿ20ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಬುಮ್ರಾ ಕೇವಲ 12 ರನ್ ಮಾತ್ರ ಬಿಟ್ಟುಕೊಟ್ಟಿದ್ದರಲ್ಲದೆ ಮೂರು ವಿಕೆಟ್ ಕಬಳಿಸಿ ಭಾರತಕ್ಕೆ ಗೆಲುವು ಒದಗಿಸಿಕೊಟ್ಟಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು. ಇದೀಗ ಜಸ್ಪ್ರೀತ್ ಬುಮ್ರಾ ಪ್ರದರ್ಶನಕ್ಕೆ ಬಾಲಿವುಡ್ ನಟಿ ಮಾರು ಹೋಗಿದ್ದಾರೆ. ಅಲ್ಲದೆ ಬುಮ್ರಾ ನಿರ್ವಹಣೆಯನ್ನು ಮುಕ್ತಕಂಠವಾಗಿ ಶ್ಲಾಘಿಸಿದ್ದಾರೆ. "ನೀವು ನನ್ನ ಬಳಿ ಮ್ಯಾಚ್ ವಿನ್ನರ್ ಒಬ್ಬರನ್ನು ಆಯ್ಕೆ ಮಾಡಲು ಹೇಳಿದರೆ ಆ ಆಟಗಾರ ಜಸ್ಪ್ರೀತ್ ಬುಮ್ರಾ ಆಗಿರಲಿದ್ದಾರೆ. ಭಾರತ ತಂಡ ಹೊಂದಿರುವ ಅತ್ಯುತ್ತಮ ಆಟಗಾರರಲ್ಲಿ ಬುಮ್ರಾ ಒಬ್ಬರಾಗಿದ್ದಾರೆ. ಫೆಬ್ರವರಿ 2ರಂದು ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಬುಮ್ರಾ ಗೆಲುವು ಒದಗಿಸಿಕೊಟ್ಟಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ" ಎಂದಿದ್ದಾರೆ. 'ಎಂಎಸ್ ಧೋನಿ ದಿ ಅನ್‌ಸೋಲ್ಡ್ ಸ್ಟೋರಿ' ಹಾಗೂ 'ಭಾಗಿ 2' ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ದಿಶಾ ಅಭಿನಯದ 'ಮಲಂಗ್' ಚಿತ್ರ ಫೆಬ್ರವರಿ 7ರಂದು ತೆರೆಗೆ ಅಪ್ಪಳಿಸುತ್ತಿದೆ. ಬಾಲಿವುಡ್ ನಟ ಹಾಗೂ ಆದಿತ್ಯ ರಾಯ್ ಕಪೂರ್ ಸಹ ಪ್ರಧಾನ ಪಾತ್ರದಲ್ಲಿದ್ದಾರೆ. ಅಲ್ಲದೆ ಚಿತ್ರದ ಪ್ರಚಾರಾರ್ಥ ಸಂಪೂರ್ಣ ಚಿತ್ರ ತಂಡವು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಯುಜ್ವೇಂದ್ರ ಚಹಲ್ ಡ್ಯಾನ್ಸ್ ಚಾಲೆಂಜ್ ಸ್ವೀಕರಿಸುವ ಮೂಲಕ ದಿಶಾ ಪಟಾನಿ ಹಾಗೂ ಅನಿಲ್ ಕಪೂರ್ ಗಮನ ಸೆಳೆದರು. ಈ ಮಧ್ಯೆ ಹೇಳಿಕೆ ನೀಡಿರುವ ಅನಿಲ್ ಕಪೂರ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲರ ಬಾಸ್ ಎಂದಿದ್ದಾರೆ. ಅಂದ ಹಾಗೆ ಭಾರತ ತಂಡವೀಗ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ತದಾ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಪಾಲ್ಗೊಳ್ಳಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OqWlvn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...