ಮಹದಾಯಿ ವಿಷಯದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಮೋಸ ಮಾಡುತ್ತಿದೆ: ಎಚ್.ಕೆ.ಪಾಟೀಲ್ ಆರೋಪ

ಹುಬ್ಬಳ್ಳಿ: ಮಹಾದಾಯಿ ವಿಚಾರದಲ್ಲಿ ಕೇಂದ್ರ ಸಚಿವ ಜಾವಡೆಕರ್ ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವು ಬಿಜೆಪಿ ವಲಯದಲ್ಲಿ ಸಂತಸ ತಂದಿದೆ ಎನ್ನಲಾಗುತ್ತಿದೆ. ಆದರೆ, ಇದು ರಾಜ್ಯಕ್ಕೆ ಮಾಡಿದ ಮೋಸ. ಈ ಪತ್ರದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಸಚಿವ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹದಾಯಿ ವಿಚಾರವಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಎಂದು ಒತ್ತಾಯಿಸಿದರೂ, ಏಕೆ ಹೊರಡಿಸುತ್ತಿಲ್ಲ. ಪ್ರಕಾಶ್ ಜಾವಡೆಕರ್ ಅವರು ರಾಜ್ಯದ ಜನರನ್ನ ತಪ್ಪಾಗಿ ತಿಳಿದುಕೊಂಡಿದ್ದಾರೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಯಾವುದೋ ಒಂದು ಪತ್ರ ಓದಿ ಮೋಸ ಮಾಡಿದ್ದಾರೆ ಎಂದು ಟೀಕಿಸಿದರು. ಚುನಾವಣೆ ನಂತರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಗದಗದಲ್ಲಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ನಂತರ ಈ ಕುರಿತು ಮೌನ ತಾಳಿದ್ದು ಏಕೆ? ಇದೇ ತಿಂಗಳು 18 ರಂದು ಗೋವಾ ಸರ್ಕಾರ ನೀಡಿದ ಪತ್ರವನ್ನ ವಾಪಸ್ಸು ಪಡೆದುಕೊಳ್ಳಬೇಕು. ಅದು ಬಿಟ್ಟು ಈಗ ಪತ್ರ ಬರೆದು ಕರ್ನಾಟಕಕ್ಕೆ ಏಕೆ‌ ಮೋಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಮಂಗಳೂರು ಗಲಬೆ ವಿಚಾರ ತನಿಖೆಯ ನಂತರ ಸತ್ಯಾಸತ್ಯತೆ ಹೊರಬರುತ್ತಿದೆ. ರಾಜ್ಯ ಸರಕಾರ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದೆ. ಸಚಿವರ ಹೇಳಿಕೆಗಳೇ ತನಿಖೆ ಅಲ್ಲ. ಸಿಸಿಟಿವಿ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾದರೂ ಏಕೆ? ಇದರ ಹಿಂದೆ ಗಲಭೆಗಳನ್ನ ಪ್ರಚೋದಿಸುವ ಉದ್ದೇಶವಿದೆಯೇ? ಗಲಬೆ ನಡೆದದ್ದೇ ಸತ್ಯ ಎಂದಾದರೆ ಅವರ ಗುಪ್ತಚರ ಇಲಾಖೆ ಏನ್ ಮಾಡ್ತಾ ಇತ್ತು. ಕೇರಳದವರ ಬಂದಿದ್ದಾರೆಂದು ಹೇಳ್ತಾರೆ. ಈ ಕುರಿತು ಇವರಿಗೆ ಗುಪ್ತಚರ ಮಾಹಿತಿ ಇರಲಿಲ್ವಾ? ಶಾಂತಿ ನೆಲೆಸುವುದು ಅವರಿಗೆ ಬೇಕಾಗಿಲ್ಲವೇ? ಸರ್ಕಾರದ ಆದೀನದಲ್ಲಿರುವ ಇಲಾಖೆಗಳಿಂದ ತನಿಖೆ ಬೇಡ, ಸ್ವತಂತ್ರ ನ್ಯಾಯಾಂಗ ತನಿಖೆ ಆಗಬೇಕು. ಈ ಗಲಾಟೆಯಲ್ಲಿ ನೆರೆ ಕೊಚ್ಚಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಬೆಳೆವಣಿಗೆ ಆಗ್ತಾ ಇವೆ. ಕೆಲವು ಬೆಳವಣಿಗೆಗಳು ಆಘಾತಕಾರಿಯಾಗಿದ್ದು, ಮನಸ್ಸಿಗೆ ಘಾಸಿ‌ ಮಾಡುವಂತಿವೆ. 'ಪೌರತ್ವ' ರಾಷ್ಟ್ರೀಯ ವಿಷಯ. ಜಾತಿ ಇಟ್ಟುಕೊಂಡು ಸಂವಿಧಾನ ಮಾಡಲು ಅವಕಾಶ ಇಲ್ಲ. ಈ‌ ಹೋರಾಟ ಒಂದು ಜಾತಿಗಷ್ಟೇ ಮೀಸಲಾದುದಲ್ಲ. ಇದರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಬಡವರನ್ನು ಮತ್ತು ಶ್ರಮಜೀವಿಗಳನ್ನ ಅವಮಾನಿಸುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಇದು ರಾಷ್ಟ್ರೀಯ ವಿಚಾರ, ಸರ್ವ ಸಮ್ಮತದಲ್ಲಿ ಆಗಬೇಕು. ಸರ್ವ ಪಕ್ಷಗಳ ಸಭೆ ಕರೆದು ಸಮಾಲೋಚಿಸಿ, ಸಮಸ್ಯೆ ಬಗೆಹರಿಸಬೇಕುಯ ಎಂದು ಹೇಳಿದರು. ಗಡಿ ವಿವಾದ ಕುರಿತು 15 ದಿನಗಳಿಂದ ಉದ್ಭವ ಠಾಕ್ರೆ ಕಾನೂನು ಹೋರಾಟ ಮತ್ತು ರಾಜಕೀಯ ಮಾಡಲು ಇಬ್ಬರು ಸಚಿವರನ್ನ ನೇಮಕ ಮಾಡಿದ್ದಾರೆ. ಇದಕ್ಕೆ ಒಂದು ಟೀಮ್‌ ಮಾಡಿ, ಹೋರಾಟವನ್ನ ತೀವ್ರಗೊಳಿಸಿ ಎಂದು ಆದೇಶ ನೀಡಿದ್ದಾರೆ. ನಾಗಪುರ ಸದನದಲ್ಲಿ ಬೆಳಗಾವಿ, ಕಾರವಾರ ನಿಪ್ಪಾಣಿ ಬಗ್ಗೆ ಮಾತನಾಡಿದ್ದಾರೆ. ಈ ಮೂರು ಕರ್ನಾಟಕ ಅಕ್ರಮಿತ ಪ್ರದೇಶಗಳು ಎಂದು ಉದ್ದವ್‌ ಠಾಕ್ರೆ ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡಿ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಬೆಳಗಾವಿ ಕರ್ನಾಟಕದ್ದು ಎಂದು ಹೇಳಿದ್ದಾರೆ.‌ ಈಗ ಬೆಳಗಾವಿ ನಮ್ಮದು ಎಂದು ಹೇಳಿದ್ದು ಸರಿಯಲ್ಲ, ನೀವು ರಾಷ್ಟ್ರದ ಜನರನ್ನ ಕ್ಷಮೆ ಕೇಳಬೇಕು ಎಂದು ಎಚ್‌.ಕೆ. ಪಾಟೀಲ್ ಒತ್ತಾಯಿಸಿದರು. ಗಡಿ ವಿಚಾರವನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಹೇಳಿಕೆ ನೀಡಿದ್ದರೂ, ನಮ್ಮ ಮುಖ್ಯಮಂತ್ರಿ, ನಮ್ಮ ಸಚಿವರು ಏಕೆ ಮಾತನಾಡುತ್ತಿಲ್ಲ. ಮಾತನಾಡಲಿಕ್ಕೆ ಇವರಿಗೇನೂ ತೊಂದರೆ? ನಾನು‌ ಮುಖ್ಯಮಂತ್ರಿಗಳನ್ನ ಎಚ್ಚರಿಸುತ್ತೇನೆ, ನಾನು ಅವರಿಗೆ ಪತ್ರ ಬರೆದಿದ್ದೇನೆ. ನೀವು ಯಾರನ್ನಾದರೂ ಸಚಿವರನ್ನಾಗಿ ಮಾಡಿ, ಗಡಿ ವಿಚಾರದಲ್ಲಿ ಏಕೆ ಶಾಂತವಾಗಿದ್ದೀರಿ. ಇಂತಹ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಸರಿಯಾಗಿ ಪಾಠ ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/2tPGQ8I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...