ಸುಪ್ರೀಂ ತೀರ್ಮಾನವೇ ಅಂತಿಮ; ಕೋರ್ಟ್ ಒಪ್ಪಿಗೆ ಬಳಿಕ ವಿಶ್ರಾಂತಿ ಅವಧಿಗೆ ಕತ್ತರಿ

ಮುಂಬಯಿ: ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ರಚಿಸಲಾಗಿರುವ ಸಂವಿಧಾನಧಿದಲ್ಲಿನ ಕೂಲಿಂಗ್‌ ಆಫ್‌ ಪಿರಿಯಡ್‌ (ವಿಶ್ರಾಂತಿ ಅವಧಿ) ನಿಯಮಕ್ಕೆ ಬದಲಾವಣೆ ತರಲು ಬಿಸಿಸಿಐ ಆಡಳಿತ ಮಂಡಳಿಯ 88ನೇ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಪಟ್ಟಂತೆ ಸಭೆಯಲ್ಲಿ ತಳೆಯಲಾದ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಪ್ರಸ್ತಾಪಿಸಿ, ಒಪ್ಪಿಗೆ ಪಡೆದುಕೊಂಡ ಬಳಿಕ ಜಾರಿಗೆ ತರಲು ಸಭೆಯಲ್ಲಿದ್ದ ಪ್ರತಿನಿಧಿಗಳು ಒಪ್ಪಿಕೊಂಡರು. ಗಂಗೂಲಿ ನೇತೃತ್ವದ ಹೊಸ ಆಡಳಿತ ಮಂಡಳಿಯ ಮೊದಲ ಸಭೆ ಇದಾಗಿದ್ದು, ಹಲವು ಆಡಳಿತಾತ್ಮಕ ಸುಧಾರಣೆಗಳಿಗೆ ಆದ್ಯತೆ ನೀಡಲಾಯಿತು. ಪ್ರಮುಖವಾಗಿ ವಿಶ್ರಾಂತಿ ಅವಧಿಯ ನಿಯಮದಲ್ಲಿ ಬದಲಾವಣೆ ಮಾಡುವ ಮೂಲಕ ಗಂಗೂಲಿಯವರ ಅಧ್ಯಕ್ಷ ಹುದ್ದೆಯನ್ನು 2024ರ ವರೆಗೆ ಮುಂದುವರಿಸುವ ಮಹತ್ವದ ತೀರ್ಮಾನಕ್ಕೆ ಬರಲಾಯಿತು. ಇದರಿಂದ ಒಂದು ವರ್ಷದಲ್ಲಿ ಮುಕ್ತಾಯವಾಗಬೇಕಾಗಿದ್ದ ಕಾರ್ಯದರ್ಶಿ ಜಯ್‌ ಶಾ ಅವರ ಹುದ್ದೆಯೂ 2024ರ ತನಕ ಮುಂದುವರಿಯಲಿದೆ. ಲೋಧಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ರಚಿಸಲಾಗಿರುವ ಸಂವಿಧಾನದ ಪ್ರಕಾರ ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ವ್ಯಾಪ್ತಿಗೊಳಪಡುವ ಪದಾಧಿಕಾರಿಗಳು ಮೂರು ವರ್ಷಧಿಗಳ 2 ಅವಧಿಗಳಲ್ಲಿ ಯಾವುದೇ ಹುದ್ದೆಯಲ್ಲಿರಬಹುದು. ಆದರೆ, 3ನೇ ಅವಧಿಗೆ ಮೊದಲು ಮೂರು ವರ್ಷಗಳ ಕಾಲ ಕಡ್ಡಾಯವಾಗಿ 'ಕೂಲಿಂಗ್‌ ಆಫ್‌ ಪಿರಿಯಡ್‌' ದಾಟಬೇಕು. ಜಯ್‌ ಶಾ ಪ್ರತಿನಿಧಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರನ್ನು ಐಸಿಸಿಯಲ್ಲಿ ಬಿಸಿಸಿಐನ ಪ್ರತಿನಿಧಿಯನ್ನಾಗಿ ಇದೇ ವೇಳೆ ನೇಮಕ ಮಾಡಲಾಯಿತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರನಾಗಿರುವ ಜಯ್‌ ಶಾ ಇನ್ನು ಮುಂದೆ ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಬದಲಿಗೆ ಬೇರೆ ಬೇರೆ ಸಂಸ್ಥೆಗಳಲ್ಲಿಬಿಸಿಸಿಐಯನ್ನು ಪ್ರತಿನಿಧಿಸಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2P1DsP0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...