ಹೊಸದಿಲ್ಲಿ: ಕೇಂದ್ರ ಸರಕಾರ ಸಿದ್ಧಪಡಿಸಿರುವ ದೇಶದ ಮೊದಲ 'ಉತ್ತಮ ಆಡಳಿತ ಸೂಚ್ಯಂಕ'ದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮೇಲುಗೈ ಸಾಧಿಸಿದ್ದು, ಮೂರನೇ ಸ್ಥಾನದಲ್ಲಿದೆ. ರಾಜ್ಯಗಳ ಸಾಧನೆ ಅಳೆಯುವ ಉದ್ದೇಶದಿಂದ ನರೇಂದ್ರ ಮೋದಿ ಅವರ ಸರಕಾರದ ಮೊದಲ ಅವಧಿಯಲ್ಲಿಯೇ 'ಉತ್ತಮ ಆಡಳಿತ ಸೂಚ್ಯಂಕ' (ಜಿಜಿಐ) ಸಿದ್ಧಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಒಟ್ಟು 10 ವಿಭಾಗಗಳು ಮತ್ತು 50 ಪ್ರಮುಖ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯಗಳ ಮೌಲ್ಯಮಾಪನ ಮಾಡಲಾಗಿದೆ. ಜಿಜಿಐ ಅನ್ನು ಕೇಂದ್ರ ಸರಕಾರ ಶೀಘ್ರದಲ್ಲಿಯೇ ಅಧಿಕೃತವಾಗಿ ಪ್ರಕಟಿಸಲಿದೆ. 'ಉತ್ತಮ ಆಡಳಿತ ದಿನ'ವಾದ ಡಿ.25ರಂದೇ ವಿಜಯ ಕರ್ನಾಟಕ ಸೋದರ ಪತ್ರಿಕೆ ಎಕನಾಮಿಕ್ ಟೈಮ್ಸ್ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಉತ್ತಮ ಆಡಳಿತದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಹಾಗೂ ಕರ್ನಾಟಕ ನಂತರದ ಸ್ಥಾನಗಳಲ್ಲಿವೆ. ಒಡಿಶಾ, ಬಿಹಾರ, ಗೋವಾ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಕೊನೆಯ ಐದು ಸ್ಥಾನಗಳಲ್ಲಿವೆ. ಈಶಾನ್ಯ ಭಾರತದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ತ್ರಿಪುರಾ ಉತ್ತಮ ರಾಜ್ಯಗಳೆನಿಸಿಕೊಂಡರೆ, ನಾಗಾಲೆಂಡ್ ಮತ್ತು ಅರುಣಾಚಲ ಪ್ರದೇಶ ಕೊನೆಯ ಸ್ಥಾನದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುದುಚೆರಿ ಹಾಗೂ ಚಂಡೀಗಢ ಟಾಪ್ 2 ಸ್ಥಾನದಲ್ಲಿದ್ದು, ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ. ವಲಯವಾರು ಮೌಲ್ಯಮಾಪನದಲ್ಲಿ ಪರಿಸರ ವಿಚಾರದಲ್ಲಿ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ. ಕೇರಳ, ಗೋವಾ, ಆಂಧ್ರಪ್ರದೇಶಗಳು ನಂತರ ಮೂರು ಸ್ಥಾನ ಪಡೆದಿವೆ. ವಾಯುಮಾಲಿನ್ಯದಿಂದ ಕಂಗೆಟ್ಟಿರುವ ದಿಲ್ಲಿ ಕೊನೆಯಲ್ಲಿದೆ. ನ್ಯಾಯಾಂಗ ಮತ್ತು ಸಾರ್ವಜನಿಕ ಭದ್ರತೆಗೆ ಸಂಬಂಧಿಸಿದ ರಾರಯಂಕಿಂಗ್ನಲ್ಲಿ ಪಶ್ಚಿಮ ಬಂಗಾಳ ಕೊನೆಯ ರ್ಯಾಂಕ್ಗೆ ಕುಸಿದಿದ್ದರೆ, ಈ ವಲಯದಲ್ಲಿ ತಮಿಳುನಾಡು ಮತ್ತು ಕೇರಳ ಮೊದಲ ಎರಡು ರ್ಯಾಂಕ್ ಪಡೆದಿವೆ. ಕರ್ನಾಟಕದಲ್ಲಿ ಸುಮಾರು 18 ತಿಂಗಳು ರಾಜಕೀಯ ಡೋಲಾಯಮಾನ ಪರಿಸ್ಥಿತಿ ಇದ್ದರೂ ಆರ್ಥಿಕ ಆಡಳಿತದಲ್ಲಿ ಟಾಪ್ನಲ್ಲಿದೆ. ವೈದ್ಯಕೀಯ ಸೌಲಭ್ಯ ಮತ್ತು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಎನ್ಡಿಎ-1 ಅವಧಿಯಲ್ಲಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ರಾಜ್ಯಗಳ ಸಾಧನೆ ಅಳೆಯುವ ಶಿಫಾರಸು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾದ 'ಗರಿಷ್ಠ ಆಡಳಿತ, ಕನಿಷ್ಠ ಸರಕಾರ'ಕ್ಕೆ ಪೂರಕವಾಗಿ ಇಂತಹ ಸಮೀಕ್ಷೆ ನಡೆಸುವುದು ಅಗತ್ಯ ಎಂದು ಕಾರ್ಯದರ್ಶಿಗಳು ಅಭಿಪ್ರಾಯಪಟ್ಟಿದ್ದರು.
from India & World News in Kannada | VK Polls https://ift.tt/2sYLXTI