ಹಾಸನ: ಕಾರ್ಯಕ್ರಮದಲ್ಲಿ 6.4 ಲಕ್ಷ ರೂಪಾಯಿ ಗೆದ್ದಿದ್ದ 10ನೇ ತರಗತಿ ವಿದ್ಯಾರ್ಥಿ ಕೆ.ಎನ್ . ತೇಜಸ್ ಈ ಹಣವನ್ನು ತಾನು ಓದುತ್ತಿರುವ ಶಾಲೆಯ ಕಂಪೌಂಡ್ ನಿರ್ಮಿಸಲು ಕೊಡುವುದಾಗಿ ಹೇಳಿದ್ದ. ತಾನು ಓದುತ್ತಿರುವ ಶಾಲೆಯ ಮೇಲೆ ಈ ವಿದ್ಯಾರ್ಥಿಗಿರುವ ಪ್ರೀತಿ ಕುರಿತು ಶಿಕ್ಷಣ ಸಚಿವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗೆದ್ದ ಹಣವನ್ನು ಮುಂದಿನ ಶಿಕ್ಷಣಕ್ಕೆ ಉಪಯೋಗಿಸುವಂತೆ ಸಲಹೆ ನೀಡಿದ್ದಾರೆ. ಗೆದ್ದ ಹಣವನ್ನು ಮುಂದಿನ ಶಿಕ್ಷಣಕ್ಕೆ ಮತ್ತು ಅಕ್ಕನ ಮದುವೆಗೆ ಬಳಸಿಕೊಳ್ಳಬೇಕು. ಶಾಲಾ ಕಾಂಪೌಂಡನ್ನು ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಹಾಸನ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆಂದೇ ನಡೆಸಲಾದ ಪರೀಕ್ಷೆಯಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದ. ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ್ದೇನು? ಕಾರ್ಯಕ್ರಮದಲ್ಲಿ ಒಂದು ಕೋಟಿ ರೂಪಾಯ ಗೆದ್ದರೆ, ಆ ಹಣದಲ್ಲಿ ಏನು ಮಾಡುತ್ತೀಯ? ಎಂದು ಪುನೀತ್ ರಾಜ್ಕುಮಾರ್ ಪ್ರಶ್ನೆ ಮಾಡಿದ್ದರು. ನಾನು ಓದುತ್ತಿರುವ ಶಾಲೆಗೆ ಕಾಂಪೌಂಡ್ ಇಲ್ಲ. ಈ ಹಣವನ್ನು ಶಾಲೆಯ ಕಾಂಪೌಂಡ್ ಕಟ್ಟಿಸಲು ನೀಡುತ್ತೇನೆ ಎಂದಿದ್ದ ಈ ಬಾಲಕ. ಜತೆಗೆ ಕಣ್ಣು ಕಾಣದ ತಾಯಿಗೆ ಆಪರೇಶನ್ ಮಾಡಿಸುವುದಾಗಿಯೂ ಹೇಳಿದ್ದ. ಅಕ್ಕನನ್ನು ಚೆನ್ನಾಗಿ ಓದಿಸಿ, ಮದುವೆ ಮಾಡಬೇಕು. ಜಮೀನು ತೆಗೆದುಕೊಳ್ಳಬೇಕು, ಹಸು ಸಾಕಬೇಕು, ಊರಿಗೆ ಸಹಾಯ ಮಾಡಬೇಕು. ಹೀಗಾಗಿ 25 ಲಕ್ಷ ಗೆಲ್ಲಬೇಕು'' ಎಂದು ತೇಜಸ್ ಹಲವಾರು ಮನೋಭಿಲಾಷೆಗಳ್ನು ವ್ಯಕ್ತಪಡಿಸಿದ್ದ. ಯಾರು ಈ ಬಾಲಕ: ತೇಜಸ್ ಮೂಲತಃ ಹಾಸನದ ಸಾಲಿಗ್ರಾಮದ ಬಳಿ ಒಂದು ಸಣ್ಣ ಗ್ರಾಮದಿಂದ ಬಂದವನು. ಈತನ ತಂದೆ ನಂಜಪ್ಪ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ತಾಯಿ ಗೌರಮಣಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಸಂಬಂಧಿಕರ ಮನೆಯಲ್ಲಿ ತೇಜಸ್ ಮತ್ತು ಆತನ ಅಕ್ಕ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಾಯಿಗೆ ದೃಷ್ಟಿ ಸಮಸ್ಯೆ ಇರುವುದರಿಂದ ತಾನು ಗೆದ್ದ ಹಣದಲ್ಲಿ ತಾಯಿಯ ಕಣ್ಣಿನ ಆಪರೇಷನ್ ಮಾಡಿಸಬೇಕು ಎಂದಿದ್ದ. ಬಡ ಕುಟುಂಬದಲ್ಲಿ ಬೆಳದ ಈತ ಲಕ್ಷಾಂತರ ರೂಪಾಯಿ ಹಣ ನೋಡುತ್ತಿರುವುದು ಇದೇ ಮೊದಲು. ಮುಂದೆ ಡಾಕ್ಟರ್ ಆಗಬೇಕೆಂಬ ಆಸೆ ಎಂಬ ಇಚ್ಚೆ ಹೊಂದಿದ್ದಾನೆ ಈ ಬಾಲಕ.
from India & World News in Kannada | VK Polls https://ift.tt/34FMbg5