ಟೀಮ್‌ ಇಂಡಿಯಾದ ಮೂವರು ಯುವ ಆಟಗಾರರನ್ನು ಶ್ಲಾಘಿಸಿದ ಶಾಸ್ತ್ರಿ!

ಹೊಸದಿಲ್ಲಿ: ಪ್ರಸ್ತುತ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಮೂವರು ಯುವ ಆಟಗಾರರಾದ , ಶುಭಮನ್‌ ಗಿಲ್‌ ಹಾಗೂ ಜಸ್‌ಪ್ರಿತ್‌ ಬುಮ್ರಾ ಅವರನ್ನು ಮಾಜಿ ಕೋಚ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರವಿ ಶಾಸ್ತ್ರಿ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಆಗಿದ್ದ ಅವಧಿಯಲ್ಲಿ ಹಲವು ಯುವ ಪ್ರತಿಭೆಗಳು ರಾಷ್ಟ್ರೀಯ ತಂಡದಲ್ಲಿ ಬೆಳಕಿಗೆ ಬಂದಿದ್ದರು. ಇದರ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ಯುವ ಆಟಗಾರರು ಭಯ ಮುಕ್ತವಾಗಿ ಆಡುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದರು. ಆ ಮೂಲಕ ಇಡೀ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದರು. ಕಳೆದ ತಿಂಗಳು ಮುಕ್ತಾಯವಾಗಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ರವಿ ಶಾಸ್ತ್ರಿ ಅವರ ಭಾರತ ತಂಡದ ಹೆಡ್‌ ಕೋಚ್‌ ಅವಧಿ ಅಂತ್ಯವಾಗಿತ್ತು. ಇದರ ಹೊರತಾಗಿಯೂ ಅವರು ತಾನು ಗುರುತಿಸಿರುವ ಮೂವರು ಯುವ ಆಟಗಾರರು ಭವಿಷ್ಯದಲ್ಲಿ ದೊಡ್ಡ ಆಟಗಾರರಾಗಲಿದ್ದಾರೆ. ಈ ಹಿಂದಿನ ತಲೆ ಮಾರಿನ ಕ್ರಿಕೆಟಿಗರಿಗಿಂತ ಈ ಯುವ ಪ್ರತಿಭೆಗಳು ಸಂಪೂರ್ಣ ವಿಭಿನ್ನರಾಗಿದ್ದಾರೆಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ರಿಷಭ್‌ ಪಂತ್‌ , ಶುಭಮನ್‌ ಗಿಲ್‌ ಹಾಗೂ ಜಸ್‌ಪ್ರಿತ್‌ ಬುಮ್ರಾ ಅದ್ಭುತ ಪ್ರತಿಭೆಗಳಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದರ ಹೊರತಾಗಿಯೂ ಅವರು ತಮ್ಮ ಹಿಂದಿನವರಂತೆಯೇ ಅದೇ ನಂಬಿಕೆಯನ್ನು ಹೊಂದಿದ್ದಾರೆ, ಈ ಹಿಂದಿನ ತಲೆ ಮಾರಿನ ಆಟಗಾರರಿಗಿಂತ ಇವರು ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ," ಎಂದು ಶಾಸ್ತ್ರಿ ಶ್ಲಾಘಿಸಿದ್ದಾರೆ. ಜಸ್‌ಪ್ರಿತ್ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸರಿ ಸುಮಾರು ಎರಡು ವರ್ಷಗಳು ಕಳೆದಿವೆ. ಇದೀಗ ಅವರು ಭಾರತ ಟೆಸ್ಟ್‌ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ನಾಯಕರಾಗಿದ್ದಾರೆ. ಇದರ ಜೊತೆಗೆ ಓಡಿಐ ಹಾಗೂ ಟಿ20 ಸ್ವರೂಪದಲ್ಲಿಯೂ ಅವರು ಪ್ರಭಾವಿತ ಪ್ರದರ್ಶನವನ್ನು ತೋರುತ್ತಿದ್ದಾರೆ. ಇನ್ನು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ 2020ರ ಆವೃತ್ತಿಯ ಕೊನೆಯಲ್ಲಿ ತಮ್ಮ ಫಾರ್ಮ್‌ಗೆ ಮರಳಿದ್ದರು. ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಹಾಗೂ ಇಂಗ್ಲೆಂಡ್‌ ವಿರುದ್ಧ ತವರು ಟೆಸ್ಟ್‌ ಸರಣಿಯಲ್ಲಿ ಪಂತ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಇದೀಗ ಅವರು ಟೀಮ್‌ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿದ್ದಾರೆ. ಮತ್ತೊಂದೆಡೆ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶುಭಮನ್‌ ಗಿಲ್‌ ಕೂಡ ಪ್ರತಿಭಾವಂತ ಆಟಗಾರರಾಗಿದ್ದಾರೆ. ಇವರು ಕೂಡ ಟೀಮ್‌ ಇಂಡಿಯಾದಲ್ಲಿ ದೀರ್ಘ ಕಾಲ ಆಡುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅದ್ಭುತ ಬ್ಯಾಟಿಂಗ್‌ ಕೌಶಲ ಹಾಗೂ ಭಯಮುಕ್ತರಾಗಿ ಆಡುವ ಗಿಲ್‌, ಟೀಮ್‌ ಇಂಡಿಯಾದಲ್ಲಿ ಕೀ ಆಟಗಾರರಾಗಿದ್ದಾರೆ. "ಐಪಿಎಲ್‌ ಸಾಕಷ್ಟು ವಿಭಿನ್ನತೆಯನ್ನು ತಂದೊಡ್ಡಿದೆ ಎಂಬ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಳ್ಳುವ ಮೂಲಕ, ಅವರ ಜೊತೆ ಆಡುವ ಹಾಗೂ ಅವರ ವಿರುದ್ಧ ಆಡುವ ಮೂಲಕ ಯುವ ಆಟಗಾರರು ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಕ್ಕೆ ಮರಳುತ್ತಾರೆ," ಎಂದು ಹೇಳಿದ್ದಾರೆ. "ನಾನು ದೇಶಿ ಕ್ರಿಕೆಟ್‌ ಆಡುವ ವೇಳೆ ಕೇವಲ 74 ಕೀ.ಮೀ ವೇಗದ ಎಸೆತಗಳನ್ನು ಎದುರಿಸುತ್ತಿದ್ದೆ. ನಂತರ ಭಾರತ ತಂಡಕ್ಕೆ ಬಂದಾಗ ಪಾಕಿಸ್ತಾನ ಮಾಜಿ ನಾಯಕ ಇಮ್ರಾನ್‌ ಖಾನ್‌ ಹಾಗೂ ವೆಸ್ಟ್ ಇಂಡೀಸ್ ವೇಗಿಗಳನ್ನು ಎದುರಿಸಿದ್ದೆ. ಆದ್ದರಿಂದ ಹಿಂದಿನ ಹಾಗೂ ಈಗಿನ ಸನ್ನಿವೇಶಕ್ಕೆ ಬಹಳಾ ವ್ಯತ್ಯಾಸವಿದೆ," ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3377yv0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...