ತಲೆನೋವು ಗುಣಪಡಿಸೋದಾಗಿ ಬೆತ್ತದಿಂದ ಹೊಡೆದು ಮಹಿಳೆಯ ಕೊಲೆ ಆರೋಪ; ಅರ್ಚಕನ ವಿರುದ್ಧ ದೂರು

ಹಾಸನ: ತಲೆನೋವು ಗುಣಪಡಿಸುವುದಾಗಿ ಅರ್ಚಕನೊಬ್ಬ ಬೆತ್ತದ ಕೋಲಿನಿಂದ ತಲೆಗೆ ಹಾಗೂ ದೇಹದ ಭಾಗಗಳಿಗೆ ಹೊಡೆದು ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತರ ಪುತ್ರಿ ದೂರು ನೀಡಿದ್ದಾರೆ. ಹಿರೀಸಾವೆ ಹೋಬಳಿ ಗೌಡರ ಹಳ್ಳಿ ಗ್ರಾಮದ ಪಾರ್ವತಿ (37) ಮೃತ ಮಹಿಳೆಯಾಗಿದ್ದು, ಚನ್ನರಾಯಪಟ್ಟಣ ತಾಲೂಕು ಬೆಕ್ಕಾ ಗ್ರಾಮದ ಪಿರಿಯಪಟ್ಟಲದಮ್ಮ ದೇವಾಲಯದ ಪೂಜಾರಿ ಮನು ಆರೋಪಿಯಾಗಿದ್ದಾನೆ. ''ಡಿ.7 ರಂದು ದೇವಸ್ಥಾನಕ್ಕೆ ಬೆಳಗ್ಗೆ 10ಕ್ಕೆ ಕರೆಸಿಕೊಂಡು ಶಂಕೆ ಬಿಡಿಸುತ್ತೇನೆಂದು ಹೇಳಿ ಪೂಜಾರಿ ಮನು ಬೆತ್ತದ ಕೋಲಿನಿಂದ ಮೈಮೇಲೆ, ತಲೆ, ಕೈಕಾಲಿನ ಮೇಲೆ ಹೊಡಿದಿದ್ದು, ಪಾರ್ವತಿ ಅವರು ಸುಸ್ತಾಗಿ ಬಿದ್ದಿದ್ದಾರೆ. ನಿಂಬೆ ಹಣ್ಣಿನ ರಸ ಕುಡಿಸಿದರೂ ಸುಸ್ತು ಕಡಿಮೆಯಾಗದೇ ಇದ್ದುದ್ದರಿಂದ ಅವರನ್ನು ಅಕ್ಕ ಮಂಜುಳಾ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಪಾರ್ವತಿ ಅವರು ಸ್ವಲ್ಪವೂ ಗುಣಮುಖವಾಗದೇ ಇದ್ದುದ್ದರಿಂದ ಡಿ.8ರಂದು ಚನ್ನರಾಯಪಟ್ಟಣ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದು, ವೈದ್ಯರು ಹಾಸನಕ್ಕೆ ತೆರಳುವಂತೆ ತಿಳಿಸಿದ್ದರಿಂದ ಹಾಸನದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ಬೆಳಗಿನ ಜಾವ 3.30ರಲ್ಲಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪಾರ್ವತಿ ಅವರ ಪುತ್ರಿ ಚೈತ್ರಾ ಶ್ರವಣಬೆಳಗೊಳ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಹೊಳೇ ನರಸೀಪುರ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರು, ಪೊಲೀಸ್‌ ವೃತ್ತ ನಿರೀಕ್ಷಕರು ಹಾಗೂ ಶ್ರವಣಬೆಳಗೊಳ ಠಾಣೆ ಪಿಎಸ್‌ಐ ಭೇಟಿ ನೀಡಿದ್ದರು.


from India & World News in Kannada | VK Polls https://ift.tt/3rUA5hP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...