ಹೆಡ್‌ ಕೋಚ್‌ ದ್ರಾವಿಡ್‌ರ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌!

ಹೊಸದಿಲ್ಲಿ: ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಅವರನ್ನು ಮುಕ್ತಕಠದಿಂದ ಗುಣಗಾನ ಮಾಡಿದ ಭಾರತ ಓಡಿಐ ತಂಡದ ನೂತನ ನಾಯಕ , ತಂಡದ ಆಟಗಾರರ ಜೊತೆ ಬ್ಯಾಟಿಂಗ್‌ ದಿಗ್ಗಜ ಕೆಲಸದ ನೀತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಳೆದ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ರವಿ ಶಾಸ್ತ್ರಿ ಅವರ ಹೆಡ್‌ ಕೋಚ್‌ ಅವಧಿ ಅಂತ್ಯವಾಯಿತು. ಬಳಿಕ ನ್ಯೂಜಿಲೆಂಡ್‌ ವಿರುದ್ಧದ ತವರು ಸರಣಿಗೆ ರಾಹುಲ್‌ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ನೇಮಕವಾಗಿದ್ದಾರೆ. ಅದರಂತೆ ಕಿವೀಸ್‌ ವಿರುದ್ಧದ ತವರು ಸರಣಿಗಳಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ ಹಾಗೂ 1-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದಿರುವ ವಿಶ್ವಾಸದಲ್ಲಿರುವ ಭಾರತ ತಂಡವು ಇದೀಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗುತ್ತದೆ. ತಂಡದ ಆಟಗಾರರನ್ನು ಒಂದು ಘಟಕವಾಗಿ ಸಾಮೂಹಿಕವಾಗಿ ಶ್ರಮಿಸುವಂತಹ ವಿಶ್ವಾಸವನ್ನು ದ್ರಾವಿಡ್‌ ಮಾಡುತ್ತಾರೆ ಎಂದು ರೋಹಿತ್‌ ಹೇಳಿದ್ದಾರೆ. "ರಾಹುಲ್ ಭಾಯ್‌ ಅದ್ಭುತ ಕ್ರಿಕೆಟಿಗರು, ಅನುಮಾನವಿಲ್ಲದೆ ಇದರ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದೆ. ತಮ್ಮ ಅವಧಿಯಲ್ಲಿ ಅವರು ಹೇಗೆ ಕ್ರಿಕೆಟ್‌ ಆಡಿದ್ದಾರೆಂಬುದು ನಮೆಗೆಲ್ಲರಿಗೂ ತಿಳಿದಿದೆ. ಇದರ ಹೊರತಾಗಿಯೂ ಅವರು ನಾನು ಪ್ರತಿಭಾವಂತ ಆಟಗಾರನಲ್ಲ ಎಂಬ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಇವತ್ತು ಈ ಸ್ಥಾನಕ್ಕೆ ಬಂದು ನಿಲ್ಲಲು ಅವರು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಇದು ತಂಡದ ಮೇಲೆ ಪ್ರತಿ ಬಿಂಬಿಸಲಿದೆ," ಎಂದು ರೋಹಿತ್‌ ಶರ್ಮಾ 'ಬ್ಯಾಕ್‌ಸ್ಟೇಜ್‌ ವಿಥ್‌ ಬೋರಿಯಾ" ಶೋನಲ್ಲಿ ತಿಳಿಸಿದ್ದಾರೆ. "ತಂಡದಲ್ಲಿ ನಾವು ಕಠಿಣ ಪರಿಶ್ರಮ ಪಡುತ್ತೇವೆಂದು ನಮಗೆ ಖಚಿತತೆ ಇದೆ. ಇದರಿಂದ ಯಾರೂ ಕೂಡ ಹೊರತಾಗಿಲ್ಲ. ಅವರು (ದ್ರಾವಿಡ್‌) ನಮ್ಮನ್ನು ಕಠಿಣ ಪರಿಶ್ರಮ ಪಡುವಂತೆ ಮಾಡುತ್ತಾರೆ. ನೀವು ಪರಿಶ್ರಮ ಪಡಲು ಪ್ರಯತ್ನಿಸಿದಾಗ ಹಾಗೂ ಈ ಪ್ರಕ್ರಿಯೆಯನ್ನು ಇಷ್ಟಪಟ್ಟರೆ ಖಂಡಿತವಾಗಿಯೂ ನಿಮಗೆ ಇದು ಒಳ್ಳೆಯ ಅನುಭವವನ್ನು ನೀಡುತ್ತದೆ," ಎಂದು ಭಾರತ ಓಡಿಐ ತಂಡದ ನಾಯಕ ತಿಳಿಸಿದ್ದಾರೆ. ಹೆಡ್‌ ಕೋಚ್‌ ಆದ ಬಳಿಕ ರಾಹುಲ್‌ ದ್ರಾವಿಡ್‌ ತಂಡದ ಎಲ್ಲರ ಬಳಿ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎಂಬ ಬಗ್ಗೆ ರೋಹಿತ್‌ ಶರ್ಮಾ ಬಹಿರಂಗಪಡಿಸಿದ್ದಾರೆ. ತಂಡದ ರಚನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಪಾತ್ರವನ್ನು ವ್ಯಾಖ್ಯಾನಿಸಲು ದ್ರಾವಿಡ್‌ ಅವರಿಂದ ಸಾಧ್ಯವಾಗುತ್ತದೆ ಎಂದು ಇದೇ ವೇಳೆ ರೋಹಿತ್‌ ತಿಳಿಸಿದ್ದಾರೆ. "ತಂಡದಲ್ಲಿ ಈಗಾಗಲೇ ರಚನೆ ಅತ್ಯುತ್ತಮವಾಗಿದೆ. ಹಾಗಾಗಿ ಇದನ್ನು ನಾವೆಲ್ಲರೂ ಆನಂದಿಸುತ್ತಿದ್ದೇವೆ. ಆಟಗಾರರು ತಂಡದ ಒಳಗೆ ಬಂದಾಗ ಅಥವಾ ತಂಡಿದಿಂದ ಹೊರಗೆ ಹೋದಾಗ, ಈ ಪ್ರಕ್ರಿಯೆಗೆ ಕಾರಣವೇನೆಂಬ ಆಟಗಾರರಲ್ಲಿ ಸ್ಪಷ್ಟತೆ ಇರುತ್ತದೆ. ಇಂಥಾ ವಾತಾವರಣವನ್ನು ರಚಿಸಲು ಅವರಿಂದ ಸಾಧ್ಯವಾಗುತ್ತದೆ," ಎಂದು ಹೇಳಿದರು. "ತಂಡದ ಪ್ರತಿಯೊಬ್ಬರ ಬಳಿಯೂ ರಾಹುಲ್‌ ದ್ರಾವಿಡ್‌ ಮಾತನಾಡುತ್ತಾರೆ. ತಂಡ ನೀಡಿರುವ ಜವಾಬ್ದಾರಿ, ನೀವು ನಿಮ್ಮನ್ನು ಸಮರ್ಪಿಸಿಕೊಳ್ಳಬೇಕಾದ ಅಂಶಗಳು, ಯಾವ ಕ್ರಮಾಂಕದಲ್ಲಿ ನೀವು ಬ್ಯಾಟ್‌ ಮಾಡುವುದು ಸೂಕ್ತ ಇತ್ಯಾದಿ ಸಂಗತಿಗಳ ಬಗ್ಗೆ ಅವರು ಪ್ರತಿಯೊಬ್ಬರ ಬಳಿಯೂ ಚರ್ಚೆ ನಡೆಸುತ್ತಾರೆ. ಇದೇ ರೀತಿಯ ಸಂಗತಿಗಳು ಕೂಡ ಬೌಲರ್‌ಗಳೊಂದಿಗೆ ಅವರು ಮಾಡುತ್ತಾರೆ," ಎಂದು ರೋಹಿತ್‌ ಶರ್ಮಾ ಬ್ಯಾಟಿಂಗ್‌ ದಿಗ್ಗಜನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3DHfdwR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...