ಶಾಲಾ ಮಕ್ಕಳಿಗೆ ಪ್ರಾಣಿ ಸಂರಕ್ಷಣೆ ಪಾಠ; ಪ್ರಾಯೋಗಿಕವಾಗಿ ಮೈಸೂರು ಮೃಗಾಲಯದಲ್ಲಿ ಜಾರಿಗೆ ಸಿದ್ಧತೆ!

ಹರೀಶ ಎಲ್‌.ತಲಕಾಡು ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯಗಳು ಸೇರಿದಂತೆ ರಾಜ್ಯದ ಎಲ್ಲಾ ಮೃಗಾಲಯಗಳು ವಿದ್ಯಾರ್ಥಿಗಳಿಗೆ ಮತ್ತಷ್ಟು ಹತ್ತಿರವಾಗಲಿವೆ. ಮೃಗಾಲಯ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳಿಗೆ ಅರ್ಧ ತಾಸು, ಕುರಿತು ಪಾಠ ಮಾಡುವ ಯೋಜನೆ ರೂಪಿಸಲಾಗಿದೆ. ಇದನ್ನು ಮೈಸೂರಿನ ಮೃಗಾಲಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸುವ ಮೂಲಕ ರಾಜ್ಯ ಎಲ್ಲಾ ಝೂಗಳಿಗೂ ವಿಸ್ತರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ. ನಿತ್ಯ ಮೃಗಾಲಯಕ್ಕೆ ಶಾಲಾ-ಕಾಲೇಜು ಮಕ್ಕಳೊಂದಿಗೆ ಪ್ರವಾಸಿಗರು ಭೇಟಿ ನೀಡಿ, ಪ್ರಾಣಿ-ಪಕ್ಷಗಳನ್ನು ವೀಕ್ಷಿಸಿ ಖುಷಿ ಪಡುತ್ತಾರೆ. ಆದರೆ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ. ಈ ವಿಷಯವನ್ನು ಮನಗಂಡ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ, ಸರಕಾರಿ ಶಾಲಾ ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆಗೆ ಕುರಿತು ಅರಿವು ಮೂಡಿಸುವ ಯೋಜನೆ ರೂಪಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಹದೇವಸ್ವಾಮಿ ಅವರು 'ವಿಕ' ಸಂದರ್ಶನಲ್ಲಿ ತಮ್ಮ ವಿಶೇಷ ಯೋಜನೆಯನ್ನು ಹಂಚಿಕೊಂಡಿದ್ದಾರೆ. ''ಮೊದಲ ಹೆಜ್ಜೆಯಾಗಿ ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದು, ಯೋಜನೆ ಕಾರ್ಯಾರಂಭಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ,''ಎಂದರು. ವಾರದಲ್ಲಿ ನಾಲ್ಕು ದಿನವಾರದಲ್ಲಿ ನಾಲ್ಕು ದಿನ ಮೃಗಾಲಯದಲ್ಲಿ ಸರಕಾರಿ ಶಾಲೆ ಮಕ್ಕಳಿಗೆ ಪ್ರಾಣಿ ಸಂರಕ್ಷಣೆ ಕುರಿತು ಪಾಠ ವ್ಯವಸ್ಥೆ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ. ಉಚಿತ ಪ್ರವೇಶಾವಕಾಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ ಅಧ್ಯಕ್ಷರು. ಖಾಸಗಿ ಶಾಲಾ ಮಕ್ಕಳಿಗೂ ಅವಕಾಶ ಸರಕಾರಿ ಶಾಲಾ ಮಕ್ಕಳಿಗೆ ರೂಪಿಸಿರುವ ಈ ಯೋಜನೆ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾದ ಮೇಲೆ ರಾಜ್ಯದ ಎಲ್ಲಾ ಮೃಗಾಲಯಗಳಿಗೂ ವಿಸ್ತರಣೆ ಮಾಡಲಾಗುವುದು. ಇದರೊಂದಿಗೆ ಖಾಸಗಿ ಶಾಲಾ ಮಕ್ಕಳು ಮುಂದೆ ಬಂದರೆ ಶೇ.50ರಷ್ಟು ಶುಲ್ಕ ಪಡೆದು ಈ ಯೋಜನೆಯ ಸೌಲಭ್ಯ ನೀಡುವ ಉದ್ದೇಶ ಇದೆ ಎಂದರು. ಆಫ್ರಿಕನ್‌ ಸಫಾರಿ ಚಿಂತನೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನು ರೇಸ್‌ಕೋರ್ಸ್‌ವರೆಗೂ ವಿಸ್ತರಿಸುವ ಮೂಲಕ ಆಫ್ರಿಕನ್‌ ಸಫಾರಿ ಆರಂಭಿಸಬೇಕೆಂಬ ಮಹೋನ್ನತ ಚಿಂತನೆ ಇದೆ. ಇದರೊಂದಿಗೆ ಬೆಳಗಾವಿಯಲ್ಲಿ ಸ್ನೇಕ್‌ ಪಾರ್ಕ್, ಬನ್ನೇರು ಘಟ್ಟದಲ್ಲಿ ಚಿರತೆ, ಶಿವಮೊಗ್ಗದಲ್ಲಿ ಕಾಡುಕೋಣ ಸಫಾರಿ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಾಣಿಗಳಿಗೆ ಎಲ್ಲೆಡೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಮೈಸೂರಿನ ಪುನರ್ವಸತಿ ಕೇಂದ್ರಲ್ಲಿರುವ ಪ್ರಾಣಿಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾದರಿಯಲ್ಲಿ ಹಂಪಿ, ಗದಗ, ಬೆಳಗಾವಿ, ಬನ್ನೇರು ಘಟ್ಟದಲ್ಲಿ ನಾಲ್ಕು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ವನ್ಯಜೀವಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಒಂದು ವರ್ಷ ಅವಧಿ ಪೂರೈಸಿದ್ದು, ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ ಎಲ್ಲಾ ಮೃಗಾಲಯಗಳನ್ನು ಅಭಿವೃದ್ಧಿ ಪಡಿಸಿ ವಿಶ್ವದರ್ಜೆಗೆ ಏರಿಸಬೇಕು ಎಂಬ ಗುರಿ ಇದೆ. ಇದಕ್ಕಾಗಿ ಹಲವು ಶಾಶ್ವತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಪ್ರಾಣಿ ಸಂರಕ್ಷಣೆಗೆ ಬಗ್ಗೆ ಅರಿವು ಮೂಡಿಸಲು ಹೊಸ ಯೋಜನೆ ಆರಂಭಿಸಲಾಗುತ್ತಿದೆ. ಎಲ್‌.ಆರ್‌.ಮಹದೇವಸ್ವಾಮಿ, ಅಧ್ಯಕ್ಷ, ಕರ್ನಾಟಕ ಮೃಗಾಲಯ ಪ್ರಾಧಿಕಾರ


from India & World News in Kannada | VK Polls https://ift.tt/3ryjWhT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...