ಇಳಿವಯಸ್ಸಿನಲ್ಲಿ ಮದುವೆಯಾಗಲು ಮುಂದಾದ ವ್ಯಕ್ತಿಯನ್ನು ನಂಬಿಸಿ ವಂಚನೆ ಮಾಡಿ ಪರಾರಿಯಾದ ಮಹಿಳೆ

ಹೊಳೆ ಹೊನ್ನೂರು: ಇಳಿ ವಯಸ್ಸಿನಲ್ಲಿ ಪತ್ನಿ ಕಳೆದುಕೊಂಡಿದ್ದ ವ್ಯಕ್ತಿ ಆಸರೆಗೆ ಸಂಗಾತಿ ಮಾಡಿಕೊಳ್ಳಲು ಹೋಗಿ ಮೋಸಕ್ಕೊಳಗಾಗಿ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ನಂಜುಂಡಪ್ಪ (60) ಅವರ ಪತ್ನಿ ಇತ್ತೀಚೆಗೆ ನಿಧನರಾಗಿದ್ದರು. ತನ್ನ ಯೋಗ ಕ್ಷೇಮ ಮತ್ತು ಭಾವನೆಗಳಿಗೆ ಆಸರೆಯಾಗಲು ಒಬ್ಬ ಸಂಗಾತಿಯ ಹುಡುಕಾಟದಲ್ಲಿ ಇದ್ದರು. ಇದೇ ವೇಳೆ ಟಿವಿಯಲ್ಲಿ ಬಂದ ಕನ್ನಡ ಮ್ಯಾಟ್ರಿಮೊನಿ ಜಾಹೀರಾತು ನೋಡಿ ಕುತೂಹಲಕ್ಕೆ ಕರೆ ಮಾಡಿದ್ದರು. ನಂತರ ಶಿವಮೊಗ್ಗದಲ್ಲಿರುವ ಕನ್ನಡ ಮ್ಯಾಟ್ರಿಮೊನಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಿ ಐಡಿ ನಂಬರ್‌ ಪಡೆದಿದ್ದರು. ನಂತರ ಮೊಬೈಲ್‌ ಆಪ್‌ ಮೂಲಕ ‘ವಧು’ವಿಗಾಗಿ ಹುಡುಕಾಟ ನಡೆಸಿದಾಗ ಬೆಂಗಳೂರಿನ ಯಲಹಂಕ ವಾಸಿ ಚಂದ್ರಿಕಾ ಎಂಬ ಮಹಿಳೆ ಪರಿಚಯ ಆಗಿದ್ದರು. ‘ನನಗೆ ವಿವಾಹ ಆಗಿ ಮಗಳಿದ್ದು ಮದುವೆ ಮಾಡಿಕೊಟ್ಟಿರುವೆ, ಪತಿ ಮೃತಪಟ್ಟಿದ್ದಾರೆ. ನಾನೂ ಕೂಡ ಒಂಟಿಯಾಗಿರುವೆ’ ಎಂದು ಫೋನ್‌ ಮೂಲಕ ವಿಷಯ ಹಂಚಿಕೊಂಡಿದ್ದರು.ಬಳಿಕ ಇಬ್ಬರೂ ವಿವಾಹ ಆಗುವುದಾಗಿ ಪರಸ್ಪರ ತೀರ್ಮಾನಕ್ಕೆ ಬಂದಿದ್ದರು. ಈ ನಡುವೆ ಚಂದ್ರಿಕಾ ಹೇಳಿದಂತೆ ನಂಜುಂಡಪ್ಪ ಸಾವಿರಾರು ರೂ. ವ್ಯಯಿಸಿ ಶೌಚಾಲಯಕ್ಕೆ ಕಮೋಡ್‌ ಹಾಕಿಸಿದ್ದೂ ಸೇರಿದಂತೆ ಮನೆಯ ಮಾರ್ಪಾಡು ಮಾಡಿಸಿದ್ದರು. ಇಬ್ಬರೂ ಒಪ್ಪಿದಂತೆ ನವೆಂಬರ್‌ 15ರಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿವಾಹ ಆಗುವುದಾಗಿ ನಿಶ್ಚಯ ಮಾಡಿಕೊಂಡಿದ್ದರು. ಹಿಂದಿನ ದಿನ ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ಚಂದ್ರಿಕಾಳನ್ನು ನಂಜುಂಡಪ್ಪ ಬರಮಾಡಿಕೊಂಡು ಇಬ್ಬರೂ ಸಿಗಂದೂರಿಗೆ ಹೋಗಿ, ರಾತ್ರಿ ಸಿಗಂದೂರಲ್ಲಿ ಉಳಿದುಕೊಂಡಿದ್ದರು. ನಂತರ ಮುಂಜಾನೆ 6ಕ್ಕೆ ದೇವಿ ಸನ್ನಿಧಿಯಲ್ಲಿ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಆದರೆ ದೇವಸ್ಥಾನದಲ್ಲಿ ವಿವಾಹ ಮಾಡಿಸುವುದಿಲ್ಲ, ಪೂಜೆ ಮಾಡಿಕೊಡುತ್ತೇವೆ ಎಂದು ದೇವಸ್ಥಾನದವರು ಹೇಳಿ, ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ ಪೂಜಿಸಿ ನೀಡಿದ್ದರು. ಈ ವೇಳೆಗಾಗಲೇ ಚಂದ್ರಿಕಾ, ನಂಜುಂಡಪ್ಪ ಅವರ ಒಂದಷ್ಟು ಹಣ, ಮೊಬೈಲ್‌ ಎಗರಿಸಿ ಸ್ವಿಚ್‌ ಆಫ್‌ ಮಾಡಿಟ್ಟುಕೊಂಡಿದ್ದಳು. ಅಷ್ಟರಲ್ಲಿ ಮದುವೆ ಮುಹೂರ್ತ ಮೀರಿದ್ದರಿಂದ ಮರಳಿ ಶಿವಮೊಗ್ಗಕ್ಕೆ ರಾತ್ರಿ ಬಂದಿದ್ದರು. ಚಂದ್ರಿಕಾ ಅವರಿಗೆ ಊಟ ಮಾಡಿಸಿ ಅವರು ಕೇಳಿದಂತೆ ಒಂದಿಷ್ಟು ಹಣ ನೀಡಿ, ಬಸ್‌ ನಿಲ್ದಾಣದ ಹತ್ತಿರ ನಿಲ್ಲುವಂತೆ ಸ್ಟ್ಯಾಂಡ್‌ನಲ್ಲಿದ್ದ ಬೈಕ್‌ ತರಲು ಹೋಗಿ ಬರುವಷ್ಟರಲ್ಲಿ ಆಕೆ ಕಾಲು ಕಿತ್ತಿದ್ದಳು. ಫೋನ್‌ ಮಾಡಲು ಯತ್ನಿಸಿದರೆ ಇವರ ಬಳಿ ಮೊಬೈಲೇ ಇರಲಿಲ್ಲ. ಮದುವೆ ಮಾಡಿಕೊಂಡು ಮಧುಚಂದ್ರ ಕನಸು ಕಂಡವನಿಗೆ ಆಕಾಶ ಚಂದಿರನನ್ನು ತೋರಿಸಿ ಕೈಕೊಟ್ಟ ಸ್ಥಿತಿ ಎದುರಾಗಿದ್ದು ಎಂದು ದೂರಿದ್ದಾರೆ.


from India & World News in Kannada | VK Polls https://ift.tt/3ELiQmS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...