ಸಿರುಗುಪ್ಪದಲ್ಲಿ ನಿವೃತ್ತ ನೌಕರನ 'ಮಣ್ಣು' ಪ್ರೇಮ; ಸಮಗ್ರ ಕೃಷಿ ಮೂಲಕ ಆದಾಯ ದ್ವಿಗುಣ!

ಪಂಪಾಪತಿ ಓತೂರು ಸಿರುಗುಪ್ಪ: ತಾಲೂಕಿನ ಕೋಟೆಹಾಳ ಗ್ರಾಮದ ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿ, ಪ್ರಗತಿಪರ ರೈತ ರಾಮನಗೌಡ ಅವರು ತಮ್ಮ ಜಮೀನಿನಲ್ಲಿ'' ಸಂರಕ್ಷಣೆಯುಕ್ತ ಬೆಳೆ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸಾಮಾನ್ಯವಾಗಿ ಅತಿಯಾದ ನೀರು ಹರಿಸಿ ಭತ್ತ ನಾಟಿ ಮಾಡುತ್ತಿದ್ದ ಈ ಭೂಮಿಯಲ್ಲಿ, ಸತತ ನೀರಿನ ಕೊರತೆಯಿಂದ ಹತ್ತಿ ಬೆಳೆಯನ್ನು ಸಹ ನೀರು ಹರಿಸುವ ಮೂಲಕ ಬೆಳೆಯಲಾಗುತ್ತಿತ್ತು. ಇದರಿಂದ ಭೂಮಿಯಲ್ಲಿನ ಫಲವತ್ತತೆಯೂ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಇದನ್ನು ಅರಿತ ರಾಮನಗೌಡರು, ಸಾಂಪ್ರದಾಯಿಕ ಕೃಷಿ ಜತೆಗೆ ಇತರೆ ಬೆಳೆಗಳು ಹಾಗೂ ಅರಣ್ಯ ಕೃಷಿಯತ್ತ ಮುಖ ಮಾಡಿದ್ದಾರೆ. ಈ ಮೊದಲು ಹಳೆ ಪದ್ಧತಿಯ ಕೃಷಿಯಿಂದ ಮಣ್ಣಿನ ಸವಕಳಿ ಹೆಚ್ಚುತ್ತಿತ್ತು. ಅಲ್ಲದೇ, ಮಣ್ಣಿನ ಗುಣಮಟ್ಟ, ಪೋಷಕಾಂಶದಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಇದರಿಂದ ಹೊರಬಂದ ರಾಮನಗೌಡರು, ಮಣ್ಣಿನ ರಕ್ಷಣೆ ಜತೆಗೆ ಸಮಗ್ರ ಕೃಷಿ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ. ಅಲ್ಲದೇ, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ''ಜಮೀನು ಇಳಿಜಾರು ಪ್ರದೇಶವಾಗಿದ್ದು, ಮಳೆ ಬಂದರೆ ಮಣ್ಣು ಕೊಚ್ಚಿಕೊಂಡು ಹೋಗುತ್ತಿತ್ತು. ಇದನ್ನು ತಡೆಯಲು ಕಳೆದ 2 ವರ್ಷಗಳಿಂದ ಬದು ಮತ್ತು ಬೆಳೆ ಮಧ್ಯದಲ್ಲಿ ಅರಣ್ಯ ಕೃಷಿಕೈಗೊಂಡೆ. ಇದರಿಂದ ಮಣ್ಣಿನ ಸವೆತ ಕಡಿಮೆಯಾಗಿ, ಬೆಳೆ ಉತ್ತಮವಾಗಿ ಬೆಳೆಯುತ್ತಿದೆ. ನಾವು ಮಣ್ಣನ್ನು ರಕ್ಷಿಸಿದರೆ ಮಣ್ಣು ನಮ್ಮನ್ನು ರಕ್ಷಿಸುತ್ತದೆ'' ಎಂದು ಹೇಳುತ್ತಾರೆ ಪಿ.ರಾಮನಗೌಡ. ಕೃಷಿಹೊಂಡದಿಂದ ನೀರುತಮ್ಮ ಒಟ್ಟು 12ಎಕರೆ ಜಮೀನಿನಲ್ಲಿ 1ಎಕರೆ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. 2ಎಕರೆ ತೊಗರಿ, 6ಎಕರೆ ಹತ್ತಿ, 2ಎಕರೆ ಹಸಿಮೆಣಸಿನಕಾಯಿ, 1ಎಕರೆ ನವಣೆ, ಬೆಳೆಗಳ ಮಧ್ಯೆ ಮತ್ತು ಬದುವಿಗೆ 1,600 ಮಹಾಗನಿ, 100 ರಕ್ತಚಂದನ, 50 ಶ್ರೀಗಂಧ, 2 ತೆಂಗಿನ ಸಸಿ, 5 ಪೇರಲ, 5 ನಿಂಬೆ, 2 ಹುಣಸೆ, 2 ನೇರಳೆ, ವರ್ಷಪೂರ್ತಿ ಹಣ್ಣು ನೀಡುವ 10 ಮಾವಿನ ಸಸಿಗಳು, 1ನೆಲ್ಲಿ, 2ಅಂಜೂರ ಸಸಿಗಳನ್ನು ನಾಟಿ ಮಾಡಿದ್ದಾರೆ. ಜಮೀನಿನಲ್ಲಿಎರಡು ಎರೆಹುಳು ತೊಟ್ಟಿ ನಿರ್ಮಿಸಿಕೊಂಡು, ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಿ, ಎರೆಹುಳು ಗೊಬ್ಬರ ನೀಡುತ್ತಿದ್ದಾರೆ. ರೈತರ ಜಮೀನುಗಳಲ್ಲಿನ ಮಣ್ಣಿನ ಫಲವತ್ತತೆ, ಪೋಷಕಾಂಶ, ಸಾರ ಮುಂತಾದ ಅಂಶಗಳನ್ನು ಪತ್ತೆ ಹಚ್ಚಿ ಮಣ್ಣಿನ ಆರೋಗ್ಯದ ಸ್ಥಿತಿಗತಿಗಳನ್ನು ತಿಳಿಸುವ ಮಣ್ಣು ಕಾರ್ಡ್‌ಗಳನ್ನು ನೀಡಲಾಗಿದೆ. ಅದರ ಪ್ರಕಾರ ಭೂಮಿಗೆ ಗೊಬ್ಬರ ನೀಡಿದರೆ ಮಣ್ಣಿನ ಆರೋಗ್ಯ ಕಾಪಾಡಬಹುದು. ನಜೀರ್‌ ಅಹ್ಮದ್‌, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸಿರುಗುಪ್ಪ ಅಧಿಕ ಉತ್ಪಾದನೆ, ಭೂ ಫಲವತ್ತತೆಗೆ ಸಂಬಂಧಿಸಿದ ಅಪಾಯಗಳನ್ನು ನಿಯಂತ್ರಿಸಲು ಪೋಷಕಾಂಶಗಳ ಸಮತೋಲಿತ ಬಳಕೆಯನ್ನು ಪ್ರೋತ್ಸಾಹಿಸಬೇಕು. ಮಣ್ಣಿನ ಸವೆತ ತಡೆಗಟ್ಟುವ ಕ್ರಮಗಳ ಬಗ್ಗೆ ರೈತರು ಗಮನಹರಿಸಬೇಕು ಡಾ.ಎಂ.ಎ.ಬಸವಣ್ಣೆಪ್ಪ, ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಸಿರುಗುಪ್ಪ


from India & World News in Kannada | VK Polls https://ift.tt/2ZZl8PW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...