ರಾಜ್ಯದಲ್ಲಿ ಮಳೆಯಿಂದ 11,916 ಕೋಟಿ ರೂ. ನಷ್ಟ; ಕಳೆದ 60 ವರ್ಷಗಳಲ್ಲೇ 2ನೇ ಬಾರಿ ಅತಿ ಹೆಚ್ಚು ಮಳೆ ದಾಖಲು!

ಶಿವಾನಂದ ಹಿರೇಮಠ ಬೆಂಗಳೂರುಬೆಂಗಳೂರು: ರಾಜ್ಯದಲ್ಲಿ ಸುರಿದ ಅಕಾಲಿಕ ಯಿಂದಾಗಿ ಅಂದಾಜು 11,916.30 ಕೋಟಿ ರೂ.ನಷ್ಟು ಹಾನಿಯುಂಟಾಗಿದೆ. ಇದು ಜಿಲ್ಲಾಡಳಿಗಳು ಮಾಡಿರುವ ಅಂದಾಜು. ಆದರೆ, ಎಸ್‌ಡಿಆರ್‌ಎಫ್‌ ಪ್ರಕಾರ, ರಾಜ್ಯದಲ್ಲಿ 1,281.92 ಕೋಟಿ ರೂ. ನಷ್ಟವಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಂದ ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹಾನಿಯಾದ ಭೌತಿಕ ನಷ್ಟದ ಕುರಿತು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಮಳೆಯಿಂದ ಭಾರಿ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಗೊಳಗಾಗಿವೆ. ಬೆಳೆ ಕೊಯ್ಲು, ಜೀವ ಹಾನಿ ಹಾಗೂ ಮೂಲಭೂತ ಸೌಕರ್ಯಕ್ಕೂ ಧಕ್ಕೆಯುಂಟಾಗಿದೆ. ಒಟ್ಟು 20,083 ಮನೆಗಳು ಹಾನಿಗೊಳಗಾಗಿವೆ. ಈ ಪೈಕಿ 7,795 ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ರಸ್ತೆ, ಸೇತುವೆಗಳು, ವಿದ್ಯುತ್‌, ಮೂಲಸೌಕರ್ಯಗಳು, ಶಾಲೆ, ಆಸ್ಪತ್ರೆಗಳು ಮತ್ತು ಅಂಗನವಾಡಿ ಸೇರಿದಂತೆ ಸರಕಾರಿ ಕಟ್ಟಡಗಳು ತೀವ್ರ ಬಾಧಿತವಾಗಿವೆ. 19,366 ಕಿ.ಮೀ ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲೆ, ಗ್ರಾಮ ಮತ್ತು ನಗರ ರಸ್ತೆಗಳು, 1,258 ಸೇತುವೆಗಳು, 7,204 ವಿದ್ಯುತ್‌ ಕಂಬಗಳು, 1,008 ವಿದ್ಯುತ್‌ ಸರಬರಾಜು ಟ್ರಾನ್ಸ್‌ಫಾರ್ಮರ್‌ಗಳು, 446 ಕಿ.ಮೀ. ವಿದ್ಯುತ್‌ ಸರಬರಾಜು ಮಾರ್ಗಗಳು, 439 ಸಣ್ಣ ನೀರಾವರಿ ಮತ್ತು ಟ್ಯಾಂಕ್‌ಗಳು, 977 ನೀರು ಸರಬರಾಜು ಯೋಜನೆಗಳು ಮತ್ತು 7,711 ಸರಕಾರಿ ಕಟ್ಟಡಗಳು ಹಾನಿ ಪಟ್ಟಿಯಲ್ಲಿವೆ. ಕಳೆದ ಆಗಸ್ಟ್‌ನಲ್ಲಿ ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆಗಳೂ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಹಾನಿ ಸಂಭವಿಸಿತ್ತು. ಆಗಸ್ಟ್‌ ತಿಂಗಳ ಪ್ರವಾಹದಿಂದ 8,962.02 ಕೋಟಿ ರೂ. ನಷ್ಟವಾಗಿತ್ತು. ಆಗಸ್ಟ್‌ ಮತ್ತು ನವೆಂಬರ್‌ ತಿಂಗಳ ಭೌತಿಕ ಹಾನಿ, ಬೆಳೆ ನಷ್ಟದ ನಕಲು ಆಗದಂತೆ ನಿಗಾ ವಹಿಸಿ ಸರಕಾರಕ್ಕೆ ಎಸ್‌ಡಿಆರ್‌ಎಫ್‌ ವರದಿ ಸಲ್ಲಿಸಿದೆ. ದಾಖಲೆ ಬರೆದ ಜೋರು ಮಳೆ ಬಂಗಾಳಕೊಲ್ಲಿಯಲ್ಲಿ ಎರಡು ಬಾರಿ ವಾಯುಭಾರ ಕುಸಿತದಿಂದ ನವೆಂಬರ್‌ ತಿಂಗಳಲ್ಲಿ ರಾಜ್ಯದಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಸಾಮಾನ್ಯಕ್ಕಿಂತ ಶೇ.592ರಷ್ಟು ಅಧಿಕ ಮಳೆ ದಾಖಲಾಗಿದ್ದು, ಇದು ಕಳೆದ 60 ವರ್ಷಗಳಲ್ಲೇ ಎರಡನೇ ಅತೀ ಹೆಚ್ಚು ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರದೇಶವಾರು ಪರಿಗಣಿಸಿದರೆ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಶೇ.876ರಷ್ಟು ಮಳೆ, ಉತ್ತರ ಒಳನಾಡಿನಲ್ಲಿ ಶೇ.417, ಮಲೆನಾಡು ಪ್ರದೇಶದಲ್ಲಿ ಶೇ.502ಕ್ಕೂ ಹೆಚ್ಚು ಹಾಗೂ ಕರಾವಳಿ ಪ್ರದೇಶದಲ್ಲಿ ಶೇ.498ಕ್ಕೂ ಹೆಚ್ಚು ಮಳೆ ದಾಖಲಾಗಿದೆ. ವಿವರ- ಭೌತಿಕ ನಷ್ಟ- ಅಂದಾಜು ನಷ್ಟ(ಕೋಟಿ ರೂ.ಗಳಲ್ಲಿ) -ಎಸ್‌ಡಿಆರ್‌ಎಫ್‌ ಪ್ರಕಾರ(ಕೋಟಿಗಳಲ್ಲಿ) ಬೆಳೆ ನಾಶ- 7.89 ಲಕ್ಷ ಹೆಕ್ಟೇರ್‌ -6207.25-619.22 ತೋಟಗಾರಿಕೆ ಬೆಳೆ- 1.24 ಲ.ಹೆ. -1348.01 -143.69 ವಾಣಿಜ್ಯ ಬೆಳೆ- 74530 -1401.90- 89.53 ಕೆರೆಗಳಲ್ಲಿ ಹೂಳು ತುಂಬಿರುವುದು- 417 ಹೆ. -3.57 -0.51 ರೇಷ್ಮೆ ಬೆಳೆ- 243 ಹೆ.- 4.86-0.12 ಜಾನುವಾರು 376- 2.63 -0.51 ಮನೆಗಳ ಹಾನಿ 20083 -316.71 -79.36 ಪುನರ್ವಸತಿ ಕೇಂದ್ರ 20 - -0.11 ಇತರ - 0.19-- 2.80 ರಾಜ್ಯ ಹೆದ್ದಾರಿ 7757 ಕಿಮೀ -1450.12 -77.57 ಗ್ರಾಮೀಣ ರಸ್ತೆ 9820 ಕಿಮೀ -218.69 -58.92 ನಗರ ರಸ್ತೆ 1789 ಕಿಮೀ- 116.73 -10.74 ಸೇತುವೆಗಳು 1258- 282.64 -7.55 ಸಣ್ಣ ನೀರಾವರಿ ಯೋಜನೆಗಳು 685 -221.13 -10.28 ವಿದ್ಯುತ್‌ ಪರಿಕರಗಳು - 17.06 -15.19 ಕೆರೆಗಳು 439- 18.81- 6.59 ಸರಕಾರಿ ಕಟ್ಟಡಗಳು 7711 -280.58 -154.22 ನೀರು ಪೂರೈಕೆ ಮತ್ತು ನೈರ್ಮಲ್ಯ 42 -3.14 -0.63 ಕುಡಿಯುವ ನೀರು ಪೂರೈಕೆ 292 -22.09 -4.38 ಒಟ್ಟಾರೆ 11916.11 ಕೋಟಿ - 1281 ಕೋಟಿ


from India & World News in Kannada | VK Polls https://ift.tt/3DpqK3L

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...