ನಾನು ಕೇವಲ ಬ್ಯಾಟ್ಸ್‌ಮನ್‌ ಅಲ್ಲ, ಬೌಲರ್‌ ಕೂಡ ಎಂದ ಸೂರ್ಯಕುಮಾರ್‌!

ಬೆಂಗಳೂರು: ಟೀಮ್ ಇಂಡಿಯಾದ ಆಟಗಾರ ಮತ್ತು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ , ತಾವು ಕೇವಲ ಬಿರುಸಿನ ಬ್ಯಾಟಿಂಗ್‌ ನಡೆಸುವುದಕ್ಕೆ ಮಾತ್ರ ಸೀಮಿತವಲ್ಲ ಬೌಲಿಂಗ್‌ ಮಾಡುವುದರಲ್ಲೂ ಎತ್ತಿದ ಕೈ ಎಂದು ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ತಮ್ಮ 360 ಬ್ಯಾಟಿಂಗ್‌ ಮೂಲಕ ಹೆಚ್ಚು ಜನಪ್ರಿಯರಾಗಿರುವ ಬಲಗೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌, ನೆಟ್ಸ್‌ನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಬೌಲಿಂಗ್‌ ಮಾಡುತ್ತಾ ಅಭ್ಯಾಸ ಮಾಡುವುದಾಗಿ ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದ ನೂತನ ಪ್ರತಿಭಾನ್ವೇಶಕ ಪಾರ್ಥಿವ್‌ ಪಟೇಲ್‌ ಅವರನ್ನು ಉದ್ದೇಶಿಸಿ ಇತ್ತೀಚೆಗೆ ನಡೆಸಿದ ಎಂಐ (ಮುಂಬೈ ಇಂಡಿಯನ್ಸ್‌) ಟಿವಿ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ 30 ವರ್ಷದ ಅನುಭವಿ ಕ್ರಿಕೆಟಿಗ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬೌಲಿಂಗ್‌ ಕಡೆಗೂ ಸಾಕಷ್ಟು ಗಮನ ನೀಡಿದ್ದು, ಅವಕಾಶ ಸಿಕ್ಕಾಗ ಕೈಚಳಕ ತೋರುವ ವಿಶ್ವಾಸ ಹೊರಹಾಕಿದ್ದಾರೆ. "ಅವರಿಗೆ (ಪಾರ್ಥಿವ್‌ ಪಟೇಲ್‌ಗೆ) ನನ್ನ ಬೌಲಿಂಗ್‌ ಬಗ್ಗೆ ಯಾಕೆ ಇಷ್ಟು ಚಿಂತೆ? ಇಲ್ಲ ನಾನು ಬೌಲಿಂಗ್‌ ಮಾಡುವುದನ್ನು ಖಂಡಿತಾ ನಿಲ್ಲಿಸಿಲ್ಲ. ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತಲೇ ಇರುತ್ತೇನೆ. ಏಕೆಂದರೆ ಪಂದ್ಯದಲ್ಲಿ ಬೌಲಿಂಗ್‌ ಮಾಡುವ ಅವಕಾಶ ಸಿಕ್ಕರೆ ಅದಕ್ಕೆ ಸಜ್ಜಾಗಿರಬೇಕು ಎಂಬುದು ನನ್ನ ಉದ್ದೇಶ. ಪಾರ್ಥಿವ್‌ ಭಾಯ್‌ ಶೀಘ್ರವೇ ನೀವು ನನ್ನ ಬೌಲಿಂಗ್‌ ವೀಕ್ಷಿಸಲಿದ್ದೀರಿ," ಎಂದು ಯಾದವ್‌ ಹೇಳಿದ್ದಾರೆ. ಮಧ್ಯಮ ವೇಗಿ ಆಗಿರುವ ಸೂರ್ಯಕುಮಾರ್‌ ಯಾದವ್‌ ದೇಶಿ ಕ್ರಿಕೆಟ್‌ನಲ್ಲಿ 36 ವಿಕೆಟ್‌ಗಳನ್ನು ಪಡೆದ ಅನುಭವವನ್ನೂ ಹೊಂದಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲೂ 24 ವಿಕೆಟ್‌ ಸಂಪಾದಿಸಿದ್ದಾರೆ. ಆದರೆ, 2014ರಲ್ಲಿ ಸೂರ್ಯಕುಮಾರ್‌ ಅವರ ಬೌಲಿಂಗ್‌ ಶೈಲಿ ಶಂಕಾಸ್ಪದ ಎಂದು ಕೇಳಿಬಂದ ನಂತರ ಬೌಲಿಂಗ್‌ ಮಾಡುವುದನ್ನು ನಿಲ್ಲಿಸಿದ್ದಾರೆ. ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಟೀಮ್ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡುವುದರಿಂದ ದೂರ ಉಳಿದಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಒಂದೆರಡು ಓವರ್‌ಗಳನ್ನು ಎಸೆಯುವ ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಸೂರ್ಯಕುಮಾರ್‌ ಎದುರು ನೋಡುತ್ತಿದ್ದಾರೆ. ಅಂದಹಾಗೆ ಇತ್ತೀಚಿನ ಸರಣಿಗಳಲ್ಲಿ ಟೀಮ್‌ ಇಂಡಿಯಾಗೆ 6ನೇ ಬೌಲರ್‌ ಕೊರತೆ ಕಾಡಿದೆ. ಹೀಗಾಗಿ ಸೂರ್ಯಕುಮಾರ್‌ ತಮ್ಮ ಬೌಲಿಂಗ್‌ ಕಡೆಗೆ ಮತ್ತಷ್ಟು ಗಮನ ನೀಡಿ ಶೈಲಿಯಲ್ಲಿ ಸುಧಾರಣೆ ತಂದುಕೊಂಡರೆ ಇನಿಂಗ್ಸ್‌ ಮಧ್ಯದಲ್ಲಿ 3-4 ಓವರ್‌ಗಳನ್ನು ಎಸೆದು ತಂಡಕ್ಕೆ ನೆರವಾಗಬಹುದಾಗಿದೆ. ಇದು ಸಾಧ್ಯವಾದರೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಅವರ ಸ್ಥಾನ ಮತ್ತಷ್ಟು ಭದ್ರವಾಗಲಿದೆ. ಕಳೆದ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್‌, ಇದೀಗ ಜುಲೈನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ತಲಾ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್‌ ಸರಣಿಗಳಲ್ಲಿ ಪರ ಕಣಕ್ಕಿಳಿಯಲಿದ್ದಾರೆ. ಎಂಐ ಟಿವಿಯಲ್ಲಿ ಸೂರ್ಯಕುಮಾರ್‌ ಸಂದರ್ಶನದ ವಿಡಿಯೋ ಈ ನಲ್ಲಿದೆ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wy1wNo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...