ಭಾರತ ಇಲ್ಲದಿದ್ದರೆ ವಿಶ್ವ ಕ್ರಿಕೆಟ್‌ನ ಮುಖವೇ ಬೇರೆಯಾಗಿರುತ್ತಿತ್ತು ಎಂದ ಹ್ಯಾಡ್ಲೀ!

ಬೆಂಗಳೂರು: ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್‌ ಅಭಿವೃದ್ಧಿಯಾಗಲು ಮಾಜಿ ಆಲ್‌ರೌಂಡರ್‌ ಸರ್‌ ಅವರ ಕೊಡುಗೆ ಅಪಾರ. 1973ರಿಂದ 1990ರವರೆಗೆ ಕಿವೀಸ್‌ ತಂಡದ ಪರ ಸೇವೆ ಸಲ್ಲಿಸಿದ ಹ್ಯಾಡ್ಲಿ, ಕ್ರಿಕೆಟ್‌ ಅಭಿವೃದ್ಧಿಗೆ ಬೀಜ ನೆಟ್ಟು ಪೋಷಿಸಿದವರು. ಇದರ ಫಲವಾಗಿ ಇಂದು ಕ್ರಿಕೆಟ್‌ ಜಗತ್ತನಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದುನಿಂತಿರುವ ನ್ಯೂಜಿಲೆಂಡ್‌ ತಂಡ 2015 ಮತ್ತು 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಫೈನಲ್‌ ತಲುಪಿ ಬ್ಯಾಕ್‌ ಟು ಬ್ಯಾಕ್‌ ರನ್ನರ್ಸ್‌ಅಪ್‌ ಸ್ಥಾನ ಪಡೆದುಕೊಂಡಿದೆ. ಇದೀಗ ಟೆಸ್ಟ್‌ ಕ್ರಿಕೆಟ್‌ನ ವಿಶ್ವಕಪ್‌ ಎಂದೇ ಮಹತ್ವ ಪಡೆದುಕೊಂಡಿರುವ ಚೊಚ್ಚಲ ಆವೃತ್ತಿಯ ಟೂರ್ನಿಯ ಫೈನಲ್‌ ತಲುಪಿರುವ ನ್ಯೂಜಿಲೆಂಡ್‌ ತಂಡ ವಿಶ್ವದ ನಂ.1 ಟೆಸ್ಟ್‌ ತಂಡವಾಗಿರುವ ವಿರಾಟ್‌ ಕೊಹ್ಲಿ ಸಾರಥ್ಯದ ವಿರುದ್ಧ ಪೈಪೋಟಿ ನಡೆಸಲಿದೆ. ಇತ್ತಂಡಗಳಿಗೆ ತಟಸ್ಥ ಅಂಗಣವಾಗಿ ಇಂಗ್ಲೆಂಡ್‌ನಲ್ಲಿ ಫೈನಲ್ ಪಂದ್ಯವನ್ನು ಐಸಿಸಿ ಆಯೋಜಿಸಿದೆ. ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವ ಬಯೋ ಬಬಲ್‌ ಒಳಗೆ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಜೂನ್‌ 18ರಿಂದ 22ರವರೆಗೆ ಟೆಸ್ಟ್‌ ಚಾಂಪಿಯನ್ಸ್‌ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ. ಅಂದಹಾಗೆ ರಿಚರ್ಡ್‌ ಹ್ಯಾಡ್ಲಿ ಇಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಬೆಂಬಲಿಸುವುದು ಸಹಜ. ಆದರೆ, ಕಿವೀಸ್‌ ದಿಗ್ಗಜ ಟೀಮ್ ಇಂಡಿಯಾ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಒಟ್ಟು 520 ಅಂಕಗಳನ್ನು ಗಿಟ್ಟಿಸಿದ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿ ಫೈನಲ್‌ಗೆ ಕಾಲಿಟ್ಟಿದೆ. ಮತ್ತೊಂದೆಡೆ ವಿಶ್ವದ 2ನೇ ಶ್ರೇಯಾಂಕಿತ ಟೆಸ್ಟ್‌ ತಂಡವಾಗಿರುವ ನ್ಯೂಜಿಲೆಂಡ್‌ 420 ಅಂಕಗಳೊಂದಿಗೆ ಫೈನಲ್‌ ತಲುಪಿತ್ತು. ಕಳೆದ ಎರಡು ಸರಣಿಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಬಗ್ಗುಬಡಿದಿರುವ ಟೀಮ್ ಇಂಡಿಯಾ, ಆತ್ಮವಿಶ್ವಾಸದ ಅಲೆಯಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಮುನ್ನಡೆಯುತ್ತಿದೆ. ಆದರೆ, ಭಾರತದ ವಿರುದ್ಧ ಕಿವೀಸ್‌ ಕಳೆದ ಕೆಲ ಸರಣಿಗಳಲ್ಲಿ ಪ್ರಾಬಲ್ಯ ಮೆರೆದಿದೆ. 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಎದುರು ಮುಗ್ಗರಿಸಿತ್ತು. ನಂತರ 2020ರ ಕಿವೀಸ್‌ ಪ್ರವಾಸದಲ್ಲಿನ 2 ಟೆಸ್ಟ್‌ಗಳ ಸರಣಿಯಲ್ಲಿ ವೈಟ್‌ವಾಶ್‌ ಸೋಲಿನ ಮುಖಭಂಗ ಅನುಭವಿಸಿತ್ತು. ಇನ್ನು ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ ತಂಡ ಆತಿಥೇಯ ಇಂಗ್ಲೆಂಡ್‌ ಎದುರು 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದು, ಭರ್ಜರಿ ಸಿದ್ದತೆಗೆ ಯೋಜನೆ ಹಾಕಿಕೊಂಡಿದೆ. ಇನ್ನು ಇಂಗ್ಲೆಂಡ್‌ನ ಹವಾಗುಣ ಮತ್ತು ಅಲ್ಲಿನ ಪಿಚ್‌ಗಳು ಕಿವೀಸ್‌ ಬೌಲರ್‌ಗಳಿಗೆ ನೆರವಾಗುವದರಿಂದ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗುವುದು ನಿಶ್ಚಿತ. ಈ ಬಗ್ಗೆ ಮಾತನಾಡಿರುವ 69 ವರ್ಷದ ಮಾಜಿ ಕ್ರಿಕೆಟಿಗ ಸರ್‌ ರಿಚರ್ಡ್‌ ಹ್ಯಾಡ್ಲೀ, ಟೆಸ್ಟ್‌ ಕ್ರಿಕೆಟ್‌ಗೆ ಭಾರತ ತಂಡ ಸಲ್ಲಿಸಿರುವ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಭರ್ಜರಿ ಕಮ್‌ಬ್ಯಾಕ್‌ ಅನ್ನು ಉದಾಹರಣೆಯಾಗಿ ನೀಡಿ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. "ಕ್ರಿಕೆಟ್‌ನಲ್ಲಿ ಭಾರತ ಅತ್ಯಧಿಕ ಆದಾಯ ಸೃಷ್ಟಿಸುತ್ತಿದೆ ಎಂಬುದಲ್ಲಿ ಸಂದೇಹವೇ ಬೇಡ. ಭಾರತ ಇಲ್ಲದೇ ಇದಿದ್ದರೆ ವಿಶ್ವ ಕ್ರಿಕೆಟ್‌ನ ಮುಖವೇ ಬೇರೆಯಾಗಿರುತ್ತಿತ್ತು. ಹೀಗಾಗಿ ಕ್ರಿಕೆಟ್‌ಗೆ ಭಾರತದ ಅಗತ್ಯವಿದೆ. ಇನ್ನು ಟೆಸ್ಟ್‌ ಕ್ರಿಕೆಟ್‌ಗೆ ಭಾರತದ ಕೊಡುಗೆ ಅಪಾರ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಭಾರತ ಗಣನೀಯ ಕೊಡುಗೆ ಸಲ್ಲಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್‌ನಲ್ಲಿ 36 ರನ್‌ಗಳಿಗೆ ಆಲ್‌ಔಟ್‌ ಆದರೂ ಪುಟಿದೆದ್ದು ಟೆಸ್ಟ್‌ ಸರಣಿ ಗೆದಿದ್ದು ನಿಜಕ್ಕೂ ಅದ್ಭುತ. ತಂಡಕ್ಕೆ ಕಾಲಿಟ್ಟ ಯುವ ಆಟಗಾರರೆಲ್ಲಾ ಅಮೋಘ ಆಟವಾಡಿದರು. ಇದು ಭಾರತ ತಂಡದ ಬೆಂಚ್‌ ಬಲಕ್ಕೆ ಹಿಡಿದ ಕೈಗನ್ನಡಿ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಭಾರತ ಇಂದು ಬಲಿಷ್ಠವಾಗಿದೆ," ಎಂದು ಹ್ಯಾಡ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RAyBtv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...