ಹೊಸದಿಲ್ಲಿ: ಬಯೋ ಬಬಲ್ ಒಳಗೆ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಆಟಗಾರರು ತಮ್ಮ-ತಮ್ಮ ಮನೆಗಳಿಗೆ ಈಗಾಗಲೇ ಸೇರಿದ್ದಾರೆ. ಆದರೆ, ಹಾಗೂ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ಇತ್ತೀಚೆಗೆಷ್ಟೇ ತವರಿಗೆ ತೆರಳಿದ್ದು, ಸದ್ಯ ಕಠಿಣ ಕ್ವಾರಂಟೈನ್ನಲ್ಲಿದ್ದಾರೆ. ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಂದೂಡಿದ್ದರಿಂದ ಎಲ್ಲಾ ವಿದೇಶಿ ಆಟಗಾರರು ತಮ್ಮ-ತಮ್ಮ ಮನೆಗಳಿಗೆ ಮರಳುತ್ತಿದ್ದರೆ, ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಾನು ಭಾರತದಲ್ಲಿ ಉಳಿಯಬೇಕಾಯಿತು ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದ ವೇಳೆ ಸೀಫರ್ಟ್ ಕಣ್ಣೀರು ಸುರಿಸಿದ್ದಾರೆ. ತವರಿಗೆ ತಲುಪಿದ ಕೊನೆಯ ವಿದೇಶಿ ಆಟಗಾರ. ನ್ಯೂಜಿಲೆಂಡ್ಗೆ ಮರಳಿ ಕಠಿಣ ಕ್ವಾರಂಟೈನ್ಗೆ ಒಳಗಾಗಿರುವ ಟಿಮ್ ಸೀಫರ್ಟ್, ಕೋಲ್ಕತಾ ನೈಟ್ ರೈಡರ್ಸ್ ಅಧಿಕಾರಿಗಳು ನನ್ನ ಕೋವಿಡ್-19 ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳುತ್ತಿದ್ದಂತೆ 'ನನ್ನ ಹೃದಯ ನೇರವಾಗಿ ಮುಳುಗಿತು' ಎಂದು ಹೇಳುವ ಮೂಲಕ ಭಾವುಕರಾದರು. ಆಕ್ಲೆಂಡ್ನ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿರುವ ಟಿಮ್ ಸೀಫರ್ಟ್ ವಿಡಿಯೋ ಕರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಮುಂದಿನದು ಏನು ಎಂದು ನಾನು ನಿಜವಾಗಿಯೂ ಯೋಚಿಸಲಾರೆ ಮತ್ತು ಇದು ಭಯಾನಕ ಭಾಗವಾಗಿತ್ತು," ಎಂದು ಹೇಳಿಕೊಂಡಿದ್ದಾರೆ. "ನೀವು ಕೆಟ್ಟ ಸಂಗತಿಗಳನ್ನು ಕೇಳುತ್ತಿದ್ದರೆ, ಅದೇ ರೀತಿ ನನಗೂ ಸಂಭವಿಸಬಹುದು ಎಂಬ ಭಾವನೆ ನನ್ನಲ್ಲಿ ಉಂಟಾಗುತ್ತಿತ್ತು. ಭಾರತದಲ್ಲಿ ಆಕ್ಸಿಜನ್ ಕೊರತೆ ಸಂಬಂಧಿಸಿ ಸುದ್ದಿ ಕೇಳುತ್ತಿದ್ದಂತೆ, ನೀವು ಕೂಡ ಆ ಸನ್ನಿವೇಶಕ್ಕೆ ತಲುಪುತ್ತೀರಿ ಎಂಬ ಬಗ್ಗೆ ನಿಮಗೂ ಗೊತ್ತಿರುವುದಿಲ್ಲ," ಎಂದು ಸೀಫರ್ಟ್ ಕಹಿ ಅನುಭವನ್ನು ವಿವರಿಸುವ ವೇಳೆ ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೆ ಕಣ್ಣೀರು ಸುರಿಸಿದರು. ಟಿಮ್ ಸಿಫರ್ಟ್ ಅವರಲ್ಲಿ ಕೋವಿಡ್-19 ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ, ಅವರಿಗೆ ಒತ್ತಡವನ್ನು ನಿಯಂತ್ರಿಸುವುದು ಅತ್ಯಂತ ಕಠಿಣ ಸವಾಲಾಗಿತ್ತು. ಸೀಫರ್ಟ್ ಸೇರಿದಂತೆ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಹಾಗೂ ಪ್ರಸಿಧ್ ಕೃಷ್ಣ ಸೇರಿ ಕೆಕೆಆರ್ ತಂಡದಲ್ಲಿ ನಾಲ್ವರಿಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಡಲು ಮತ್ತೆ ಭಾರತಕ್ಕೆ ಮರಳಿದರೆ, ಐಪಿಎಲ್ ವೇಳೆ ಅನುಭವಿಸಿದ್ದ ಕಹಿ ಅನುಭವ ಮರೆಯಾಗುವುದಿಲ್ಲ. ಕೋವಿಡ್ -19 ಪರಿಸ್ಥಿತಿ ಭಾರತದಲ್ಲಿ ಸುಧಾರಣೆಯಾಗದ ಪಕ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯುವುದು ಅನುಮಾನ ಎಂದು ಸೀಫರ್ಟ್ ಹೇಳಿದರು. 2021ರ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡಿದ ವೇಳೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಆಡಿದ್ದ 7 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಇನ್ನುಳಿದ 5ರಲ್ಲಿ ಸೋಲು ಅನುಭವಿಸಿ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bRVyit