ವಿಲಿಯಮ್ಸನ್‌ ಭಾರತೀಯನಾಗಿದ್ದರೆ, ರಹಾನೆ ಸ್ಥಾನ ತುಂಬುತ್ತಿದ್ದರೆಂದ ಪಣೇಸರ್‌!

ಹೊಸದಿಲ್ಲಿ: ನ್ಯೂಜಿಲೆಂಡ್‌ ನಾಯಕ ಒಂದು ವೇಳೆ ಭಾರತೀಯ ಆಟಗಾರನಾಗಿದ್ದರೆ, ವಿರಾಟ್‌ ಕೊಹ್ಲಿಯಂತೆ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ದೊಡ್ಡ ಹೆಸರು ಮಾಡುತ್ತಿದ್ದರೆಂದು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಕಳೆದು ಕೆಲವು ದಿನಗಳ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ಮಾಂಟಿ ಪಣೇಸರ್, ಕೇನ್‌ ವಿಲಿಯಮ್ಸನ್‌ ಭಾರತೀಯನಾಗಿದ್ದರೆ, ಟೆಸ್ಟ್‌ ತಂಡದ ಉಪ ನಾಯಕ ಸ್ಥಾನವನ್ನು ತುಂಬುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಪಾರ್ಕ್‌ ಸ್ಪೋರ್ಟ್‌ ಜೊತೆ ಮಾತನಾಡಿದ್ದ ವಾನ್‌, "ಕೇನ್‌ ವಿಲಿಯಮ್ಸನ್‌ ಅವರು ಭಾರತದ ಆಟಗಾರನಾಗಿದ್ದರೆ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿರುತ್ತಿದ್ದರು. ಆದರೆ, ಇದೀಗ ಅವರು ಆಗಲಿಲ್ಲ. ಏಕೆಂದರೆ ವಿರಾಟ್‌ ಕೊಹ್ಲಿ ಇದಕ್ಕೆ ಅಡ್ಡಿಯಾಗಿದ್ದಾರೆ. ಕೊಹ್ಲಿ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆ ಮೂಲಕ ಹೆಚ್ಚಿನ ಲೈಕ್ಸ್, ಕಾಮೆಂಟ್ಸ್‌ಗಳನ್ನು ಪಡೆಯುತ್ತಾರೆ. ಆದರೆ, ಕೇನ್‌ ವಿಲಿಯಮ್ಸನ್‌ ಅವರು ಕೂಡ ಎಲ್ಲಾ ಸ್ವರೂಪದಲ್ಲಿಯೂ ಅದ್ಭುತ ಬ್ಯಾಟ್ಸ್‌ಮನ್‌," ಎಂದು ಹೇಳಿದ್ದರು. ಮೈಕಲ್‌ ವಾನ್‌ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡದಲ್ಲಿ ಆಡಿದ್ದ ಮಾಂಟಿ ಪನೇಸರ್ ಈ ಬಗ್ಗೆ ಮಾತನಾಡಿ, ವಿರಾಟ್‌ ಕೊಹ್ಲಿ ಹಾಗೂ ಕೇನ್‌ ವಿಲಿಯಮ್ಸನ್‌ ಇಬ್ಬರೂ ಕ್ಲಾಸ್‌ ಬ್ಯಾಟ್ಸ್‌ಮನ್‌ಗಳೆಂಬ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ವಿಲಿಯಮ್ಸನ್‌ಗಿಂದ ಕೊಹ್ಲಿ ಒಂದು ಕೈ ಮೇಲಿದ್ದಾರೆಂದು ಪನೇಸರ್ ಒಪ್ಪಿಕೊಂಡರು. ಒಂದು ವೇಳೆ ವಿಲಿಯಮ್ಸನ್‌ ಭಾರತೀಯ ಆಟಗಾರನಾಗಿದ್ದರೆ, ಟೀಮ್‌ ಇಂಡಿಯಾ ಟೆಸ್ಟ್‌ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡುತ್ತಿದ್ದರೆಂದು ಹೇಳಿದರು. "ಅವರಿಬ್ಬರೂ ಅತ್ಯುತ್ತಮ ಆಟಗಾರರು ಎಂದು ನಾನು ಭಾವಿಸುತ್ತೇನೆ. ಯಾವುದೇ ಸನ್ನಿವೇಶದಲ್ಲಿ ಇವರು ಆಡಲು ಸಿದ್ದರಿದ್ದಾರೆ. ಓಡಿಐ ಹಾಗೂ ಟಿ20 ಸ್ವರೂಪವನ್ನು ನೀವು ನೋಡಿದರೆ, ವಿರಾಟ್‌ ಕೊಹ್ಲಿ ಉತ್ತಮ ಚೇಸ್‌ ಮಾಡುತ್ತಾರೆ ಎಂಬುದನ್ನು ನೀವು ನೋಡಬಹುದು. ಆದರೆ, ವಿಲಿಯಮ್ಸನ್‌ ಎಲ್ಲಾ ಸ್ವರೂಪದಲ್ಲಿಯೂ ಸಮನಾಗಿ ಆಡುತ್ತಾರೆ. ಆದರೆ, ವಿಲಿಯಮ್ಸನ್‌ ಅವರ ಸಾಮರ್ಥ್ಯ ಕೊಹ್ಲಿಗಿಂತ ಕಡಿಮೆ ಹಾಗೂ ರೋಹಿತ್‌ ಶರ್ಮಾಗಿಂತ ಹೆಚ್ಚಾಗಿದೆ. ಹಾಗಾಗಿ, ಟೆಸ್ಟ್‌ ಬ್ಯಾಟಿಂಗ್‌ ಲೈನ್‌ ಅಪ್‌ನಲ್ಲಿ ಅಜಿಂಕ್ಯ ರಹಾನೆ ಸ್ಥಾನಕ್ಕೆ ವಿಲಿಯಮ್ಸನ್‌ ಸೂಕ್ತ," ಎಂದು ಪಣೇಸರ್‌ ಸ್ಪೋರ್ಟ್ಸ್‌ ಯಾರಿಗೆ ತಿಳಿಸಿದರು. ಮುಂಬರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು 5-0 ಅಂತರದಲ್ಲಿ ಭಾರತ ಸೋಲಿಸಲಿದೆ ಎಂಬುದಕ್ಕೆ ಪಣೇಸರ್‌ ಹಲವು ಕಾರಣಗಳನ್ನು ತಿಳಿಸಿದರು. "ಮೊದಲನೇಯದಾಗಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿ ಆಗಸ್ಟ್‌ನಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಬೆಚ್ಚಗಿನ ವಾತಾವರಣ ಇರಲಿದೆ. ಎರಡನೆಯ ಅಂಶವೆಂದರೆ ಕಡಿಮೆ ಅವಧಿಯಲ್ಲಿ ಐದು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಭಾರತವು ಆವೇಗವನ್ನು ಹೊಂದಿರುವಾಗ ಉತ್ತಮವಾಗಿ ಆಡುತ್ತದೆ, " ಎಂದು ಪನೇಸರ್ ಹೇಳಿದ್ದಾರೆ. 'ಮೂರನೇ ಅಂಶವೇನೆಂದರೆ ಭಾರತದ ವೇಗದ ಬೌಲಿಂಗ್‌ ವಿಭಾಗ ಅದ್ಭುತವಾಗಿದೆ. ಇದರಲ್ಲಿ ಪ್ರಮುಖ ಅಂಶವೇನೆಂದರೆ ಅಲ್‌ಸ್ಟೈರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಇಂಗ್ಲೆಂಡ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವಿಭಾಗ ಅತ್ಯುತ್ತಮವಾಗಿ ಕಾಣುತ್ತಿಲ್ಲ," ಎಂದು ಮಾಂಟಿ ಪನೇಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yGL4fE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...