ಹೊಸದಿಲ್ಲಿ: ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೊಂದರಲ್ಲಿ ಶೊಯೇಬ್ ಅಖ್ತರ್ ಅವರ ಎಸೆತದಲ್ಲಿ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಅವರು ತಮ್ಮ ತಲೆಗೆ ಚೆಂಡು ತಗುಲಿಸಿಕೊಂಡು ಪ್ರಜ್ಞಾಹೀನರಾಗಿ ನೆಲಕ್ಕೆ ಉರುಳಿದ್ದ ಘಟನೆಯನ್ನು ವಿಂಡೀಸ್ ಮಾಜಿ ಸ್ಮರಿಸಿಕೊಂಡಿದ್ದಾರೆ. ಕ್ರಿಕೆಟ್ ಪಾಕಿಸ್ತಾನ ವೆಬ್ಸೈಟ್ವೊಂದರ ಸಂದರ್ಶನದಲ್ಲಿ ಮಾತನಾಡಿದ ಸಮ್ಮಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭಿಕ ದಿನಗಳಲ್ಲಿ 2004ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವೊಂದರಲ್ಲಿ ನಡೆದಿದ್ದ ಅನಿರೀಕ್ಷಿತ ಘಟನೆಯೊಂದನ್ನು ಸ್ಮರಿಸಿಕೊಂಡರು. 126 ಓಡಿಐ, 38 ಟೆಸ್ಟ್ ಹಾಗೂ 68 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸಮ್ಮಿ ಪ್ರತಿನಿಧಿಸಿದ್ದಾರೆ. ಅಲ್ಲದೆ, 2016ರಲ್ಲಿ ತಮ್ಮ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ಗೆ ಟಿ20 ವಿಶ್ವಕಪ್ ತಂದುಕೊಟ್ಟಿದ್ದರು. "ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನಾನು ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದೆ. ಈ ವೇಳೆ ಹ್ಯಾಂಪ್ಶೈರ್ನ ರೋಸ್ ಬೌಲ್ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮೊಹಮ್ಮದ್ ಸಮಿ, ವಖಾರ್ ಯೂನಿಸ್ ಹಾಗೂ ಬೌಲಿಂಗ್ನಲ್ಲಿ ಮಿಂಚುತ್ತಿದ್ದರು ," ಎಂದು ಸಮ್ಮಿ ಸ್ಮರಿಸಿಕೊಂಡರು. "ಶೊಯೇಬ್ ಅಖ್ತರ್ ಅವರ ಬೌನ್ಸರ್ನಲ್ಲಿ ಚೆಂಡು ತಲೆಗೆ ತಗುಲಿದ್ದು ನಾನು ನೋಡಿದ್ದೆ. ಚೆಂಡು ತಗುಲಿಸಿಕೊಂಡ ಬೆನ್ನಲ್ಲೆ ಲಾರಾ ನೆಲಕ್ಕೆ ಉರುಳಿಸಿದರು ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ನನಗೆ ಆಗ 19 ವರ್ಷ ವಯಸ್ಸಾಗಿತ್ತು ಹಾಗೂ ಡ್ವೇನ್ ಬ್ರಾವೊ ನಂತರದ ಸ್ಥಾನದಲ್ಲಿ ಆಡಲು ನಾನು ಎದುರು ನೋಡುತ್ತಿದ್ದೆ. ಅಂದು ಅಖ್ತರ್ ಅವರ ಬೌನ್ಸರ್ನಿಂದ ನಾನು ಮತ್ತೆ ಕ್ರಿಕೆಟ್ ಆಡಬೇಕೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತ್ತು," ಎಂದು ಹೇಳಿದರು. ಈ ಘಟನೆ ನಡೆದ ಕೆಲ ದಿನಗಳ ಬಳಿಕ ಇಸ್ಲಾಮಾಬಾದ್ನಲ್ಲಿ ಶೊಯೇಬ್ ಅಖ್ತರ್ ಅವರ ಬಳಿ ಈ ಬಗ್ಗೆ ಮಾತನಾಡಿದ್ದ ಪ್ರಸಂಗವನ್ನು ಸಮ್ಮಿ ಸ್ಮರಿಸಿಕೊಂಡರು. "ನಾಲ್ಕು ದಿನಗಳ ಬಳಿಕ ನಾನು ಇಸ್ಲಮಾಬಾದ್ನಲ್ಲಿ ಅಖ್ತರ್ ಅವರನ್ನು ಭೇಟಿಯಾಗಿದ್ದೆ. ಆಗ ಅವರು, 'ಬ್ರಿಯಾನ್ ಲಾರಾ ಅವರು ಮೊದಲನೇ ಎಸೆತದಲ್ಲಿಯೇ ಬೌಂಡರಿ ಗಳಿಸಿದ್ದರು.' ಎಂದರು. ಆಗ ನಾನು ಅವರ ಜವಾಬ್ದಾರಿ ಎಂದು ಭಾವಿಸಿದೆ. ಗಾಳಿಯಲ್ಲಿ ಹಾರುವ ಕೂದಲಿನೊಂದಿಗೆ ರಾವಲ್ಪಿಂಡಿ ಎಕ್ಸ್ಪ್ರೆಸ್ ಬೌಲಿಂಗ್ ನೋಡಲು ಆನಂದವಾಗುತ್ತಿತ್ತು," ಎಂದು ವಿಂಡೀಸ್ ಮಾಜಿ ನಾಯಕ ಹೇಳಿದರು. "ಅಂದಿನ ದಿನ ಶೊಯೇಬ್ ಅಖ್ತರ್ ಅವರ ವೇಗದ ಬೌಲಿಂಗ್ ನೋಡಿದ್ದ ನನಗೆ, ಇಂದಿನ ದಿನಗಳಲ್ಲಿ ಕ್ರಿಕೆಟ್ ಆಡುತ್ತಿಲ್ಲವಾದರೂ ಯಾವುದೇ ಬೌಲರ್ಗಳಿಗೆ ಸುಲಭವಾಗಿ ಚೆಂಡನ್ನು ಪಾರ್ಕ್ ಹೊರಗೆ ಹೊಡೆಯಲು ಪ್ರಯತ್ನಿಸುತ್ತೇನೆ," ಎಂದು ಹೇಳಿದ ಬಳಿಕ ಡೆರೆನ್ ಸಮ್ಮಿ ಸೈನ್ ಆಫ್ ಮಾಡಿದರು. 2004ರ ಐಸಿಸಿ ಚಾಂಪಿಯನ್ಸ್ ಟ್ರೊಫಿ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಎರಡು ವಿಕೆಟ್ಗಳಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vwANRa