ಮುಂಬೈ: ಆರಂಭಿಕ ಬ್ಯಾಟ್ಸ್ಮನ್ ಅವರ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಇನ್ನೂ ಭಾರತ ತಂಡವನ್ನು ಪ್ರತಿನಿಧಿಸದ ದೇವದತ್ ಪಡಿಕ್ಕಲ್ ರಾಯಲ್ಸ್ ಎದುರು ಶತಕ ಸಿಡಿಸಿದ್ದು ಪಂದ್ಯದಲ್ಲಿ ವಿಶೇಷವಾಗಿತ್ತು. ಸತತ ನಾಲ್ಕನೇ ಪಂದ್ಯದ ಗೆಲುವಿನೊಂದಿಗೆ ಆರ್ಸಿಬಿ ತಂಡ ಒಟ್ಟು ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು. ಆದರೆ, ಸೋಲು ಅನುಭವಿಸಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಕ್ರೀಡಾ ಸ್ಪೂರ್ತಿ ಎತ್ತಿ ತೋರಿಸುವ ಅಪರೂಪದ ಘಟನೆಯೊಂದು ನಡೆಯಿತು. ರಾಯಲ್ಸ್ ಬೌಲರ್ಗಳಿಗೆ ಬೆವರಿಳಿಸುತ್ತಿದ್ದ ದೇವದತ್ ಪಡಿಕ್ಕಲ್ ಅವರ ಶೂ ಲೇಸ್ ಕಳಚಿಕೊಂಡಿತ್ತು. ಈ ವೇಳೆ ಎದುರಾಳಿ ಆಟಗಾರ , ಆರ್ಸಿಬಿ ಆಟಗಾರನ ಶೂ ಲೇಸ್ ಕಟ್ಟುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದರು. ಈ ವಿಡಿಯೋವನ್ನು ಐಪಿಎಲ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿದೆ. ಜೋಸ್ ಬಟ್ಲರ್ ಅವರ ಈ ಕ್ರೀಡಾ ಸ್ಪೂರ್ತಿಯನ್ನು ನೆಟ್ಟಿಗರು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಲ್ಲದೆ, ಈ ವಿಡಯೋ ಟ್ವಿಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೋಸ್ ಬಟ್ಲರ್ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸ್ಟಾರ್ ಆಟಗಾರ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಇನ್ನೂ ಭಾರತ ತಂಡವನ್ನು ಪ್ರತಿನಿಧಿಸಿಲ್ಲ. ಆದರೆ, ರಾಜಸ್ಥಾನ್ ರಾಯಲ್ಸ್ ಬೌಲರ್ಗಳಿಗೆ ತಮ್ಮ ಬ್ಯಾಟ್ ಮೂಲಕ ಸಿಡಿಯುತ್ತಿದ್ದ ಪಡಿಕ್ಕಲ್ ಎದುರು ಬಟ್ಲರ್ ತೋರಿದ ಈ ಪವೃತ್ತಿ ಶ್ಲಾಘನೀಯವಾದದ್ದು. ಇನ್ನು ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ದೇವದತ್ ಪಡಿಕ್ಕಲ್, ಇನಿಂಗ್ಸ್ ಮಧ್ಯದಲ್ಲಿ ತಮ್ಮ ಶತಕವಲ್ಲ ಮುಖ್ಯ ತಂಡಕ್ಕೆ ಸಾಧ್ಯವಾದಷ್ಟು ಬೇಗ ಜಯ ತಂದುಕೊಟ್ಟು ನೆಟ್ ರನ್ರೇಟ್ ಸುಧಾರಿಸಿಕೊಳ್ಳುವುದು ಮೊದಲ ಆದ್ಯತೆ ಆಗಬೇಕು ಎಂದು ನಾಯಕ ಕೊಹ್ಲಿ ಬಳಿ ಚರ್ಚಿಸಿದ್ದಾಗಿ ಹೇಳಿಕೊಂಡಿದ್ದಾರೆ. "ವಿರಾಟ್ಗೆ ಪಂದ್ಯ ಮುಗಿಸುವಂತೆ ಹೇಳಿದ್ದೆ. ಏಕೆಂದರೆ ಕೊನೆಗೆ ನನ್ನ ಶತಕ ಮುಖ್ಯವಲ್ಲ ತಂಡ ಗೆಲ್ಲುವುದೇ ಮುಖ್ಯ. ತಂಡದ ಗೆಲುವೇ ನನ್ನ ಪಾಲಿಗೆ ಅತ್ಯಂತ ಪ್ರಮುಖವಾದದ್ದು," ಎಂದು ಪಂದ್ಯಾನಂತರ ಪಡಿಕ್ಕಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯುವ ಆಟಗಾರನ ವೀರಾವೇಶದ ಬ್ಯಾಟಿಂಗ್ ಪ್ರದರ್ಶನವನ್ನು ಕ್ಯಾಪ್ಟನ್ ಕೊಹ್ಲಿ ಗುಣಗಾನ ಮಾಡಿದ್ದಾರೆ. "ಇದೊಂದು ಅತ್ಯದ್ಭುತ ಇನಿಂಗ್ಸ್. ಐಪಿಎಲ್ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ (2020 ಟೂರ್ನಿಯಲ್ಲಿ) ಅವರು ಉತ್ತಮವಾಗಿ ಆಡಿದ್ದರು. 20 ರನ್ ಗಳಿಸಿದ ಬಳಿಕ ಆತ ಬಿರುಸಿನ ಆಟವಾಡುತ್ತಿಲ್ಲ ಎಂಬ ಚರ್ಚೆ ಆಗುತ್ತಿತ್ತು. ಅದನ್ನೆಲ್ಲಾ ಬದಿಗೊತ್ತಿ ಇಂದು ಅದ್ಭುತ ಆಟವಾಡಿದ್ದಾನೆ," ಎಂದು ಶ್ಲಾಘಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tJLgYF