ಸಿಎಸ್‌ಕೆ ವಿರುದ್ಧ ಸೋಲಿನ ಹೊರತಾಗಿಯೂ ಸಂತಸ ವ್ಯಕ್ತಪಡಿಸಿದ ಕೊಹ್ಲಿ!

ಮುಂಬೈ: ವಿರುದ್ಧ ತೋರಿದ ಪ್ರದರ್ಶನವನ್ನು ಆಲ್‌ರೌಂಡರ್ ಚೆನ್ನೈ ಸೂಪರ್‌ ಕಿಂಗ್ಸ್ ಪರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂದುವರಿಸಬೇಕೆಂದು ಆರ್‌ಸಿಬಿ ನಾಯಕ ಹೇಳಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಸಿಎಸ್‌ಕೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹರ್ಷಲ್‌ ಪಟೇಲ್‌ಗೆ ರವೀಂದ್ರ ಜಡೇಜಾ 37 ರನ್‌ ಚೆಚ್ಚಿದರು ಹಾಗೂ ಬೌಲಿಂಗ್‌ನಲ್ಲಿಯೂ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ವಿರುದ್ಧ 69 ರನ್‌ಗಳ ಗೆಲುವಿಗೆ ತಮ್ಮ ತಂಡಕ್ಕೆ ನೆರವಾದರು. ಒಟ್ಟಾರೆ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ 28 ಎಸೆತಗಳಿಗೆ ಅಜೇಯ 62 ರನ್‌ಗಳಿದರು. ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳು ಒಳಗೊಂಡಿದ್ದವು. ಜಡೇಜಾ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಸಿಎಸ್‌ಕೆ ತನ್ನ ಪಾಲಿನ 20 ಓವರ್‌ಗಳಿಗೆ 191 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು 122 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಕೊಹ್ಲಿ ಪಡೆ ಮೊದಲ ಸೋಲು ಅನುಭವಿಸಿತು. ಪಂದ್ಯದ ಸೋಲಿನ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ವಿರಾಟ್‌ ಕೊಹ್ಲಿ, "ನಾನು ಜಡೇಜಾ ಅವರನ್ನು ಸಾಕಷ್ಟು ನಂಬಿದ್ದೇನೆ. ಪ್ರತಿಯೊಬ್ಬರು ನೋಡುವಂತಹ ಸಾಮರ್ಥ್ಯ ಅವರಲ್ಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯದಿಂದ ಹೊರ ನಡೆದಿದ್ದ ರವೀಂದ್ರ ಜಡೇಜಾ, ಇದೀಗ ಮೈದಾನದಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಪ್ರದರ್ಶನವನ್ನು ನೋಡಲು ನನಗೆ ಸಂತೋಷವಾಗುತ್ತಿದೆ," ಎಂದು ಗುಣಗಾನ ಮಾಡಿದರು. "ಎರಡು ತಿಂಗಳ ಬಳಿಕ ಅವರು ಟೀಮ್‌ ಇಂಡಿಯಾಗೆ ಮರಳಲಿದ್ದಾರೆ. ನಿಮ್ಮ ಪ್ರೀಮಿಯರ್ ಆಲ್‌ರೌಂಡರ್‌ ಉತ್ತಮ ಜಾಗದಲ್ಲಿರುವುದು ಮತ್ತು ಉತ್ತಮ ಪ್ರದರ್ಶನ ನೀಡುವುದು ಯಾವಾಗಲೂ ಸಂತೋಷದ ಸಂಗತಿಯಾಗಿದೆ. ಅವರು ಕೇವಲ ಸಿಎಸ್‌ಕೆ ತಂಡಕ್ಕೆ ಮಾತ್ರವಲ್ಲ ಭಾರತ ತಂಡದ ಪರವೂ ಇದೇ ವಿಶ್ವಾಸದೊಂದಿಗೆ ಅತ್ಯುತ್ತಮ ಪ್ರದರ್ಶನ ತೋರುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ನನಗಿದೆ," ಎಂದು ಕೊಹ್ಲಿ ಹೇಳಿದರು. ಇನ್ನು ಪಂದ್ಯದಲ್ಲಿ ಜಡೇಜಾ 20ನೇ ಓವರ್‌ನಲ್ಲಿ ಆರ್‌ಸಿಬಿ ತಂಡದ ಹರ್ಷಲ್‌ ಪಟೇಲ್‌ಗೆ ಐದು ಸಿಕ್ಸರ್‌ ಹಾಗೂ ಒಂದು ಬೌಂಡರಿ ಸಿಡಿಸಿದರು. ಇದಕ್ಕೂ ಮುನ್ನ ಹರ್ಷಲ್ ಬೌಲಿಂಗ್‌ ಮಾಡಿದ್ದ ಮೂರು ಓವರ್‌ಗಳಲ್ಲಿ ನೀಡಿದ್ದು ಕೇವಲ 14 ರನ್‌ ಮಾತ್ರ. ಆದರೆ, ತಮ್ಮ ಕೊನೆಯ ಓವರ್‌ನಲ್ಲಿ ರವೀಂದ್ರ ಜಡೇಜಾ ಎದುರು ಪಟೇಲ್ ದುಬಾರಿಯಾದರು. "ಇದನ್ನು ನೀವು ಸರಿಯಾದ ಹಾದಿಯಲ್ಲಿ ನೋಡಬೇಕು. ಇದು ನಮ್ಮ ಪರವಾಗಿ ಸಕಾರಾತ್ಮಕ ಪ್ರತಿಕ್ರಿಯೆ ಎಂದು ನಾನು ಭಾವಿಸುತ್ತೇನೆ. ಈ ರೀತಿಯ ಪ್ರದರ್ಶನ ಟೂರ್ನಿಯಲ್ಲಿ ಮೊದಲೇ ಪಡೆಯುವುದು ಒಳ್ಳೆಯದು. ನಮ್ಮ ಆರಂಭ ಯೋಗ್ಯವಾಗಿತ್ತು. ಆದರೆ, ಒಬ್ಬ ಆಟಗಾರ ನಮ್ಮನ್ನು ಸೋಲಿಸಿದರು. ಇವತ್ತಿನ ಪಂದ್ಯದಲ್ಲಿ ಎಲ್ಲರೂ ನೋಡುವಂತಹ ಕೌಶಲ ಅವರಲ್ಲಿ(ಜಡೇಜಾ) ಕಾಣಿಸುತ್ತಿತ್ತು," ಎಂದು ಹೇಳಿದರು. "ಅವರು (ಹರ್ಷಲ್‌) ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ್ದಾರೆ ಹಾಗೂ ಅವರನ್ನು ನಾವು ಬೆಂಬಲಿಸುತ್ತೇವೆ. ರವೀಂದ್ರ ಜಡೇಜಾ ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಸಿಎಸ್‌ಕೆ ಪರ ಟರ್ನ್‌ ಮಾಡುವುದಕ್ಕೂ ಮುನ್ನ ಹರ್ಷಲ್‌ ಪಟೇಲ್‌ ಎರಡು ವಿಕೆಟ್‌ ಕಿತ್ತು ತಂಡಕ್ಕೆ ಆಸರೆಯಾಗಿದ್ದರು. ಆದರೆ, ಈ ಸೋಲನ್ನು ನಾವು ಸರಿಯಾದ ಹಾದಿಯಲ್ಲಿ ಅವಲೋಕಿಸಬೇಕಾಗಿದೆ," ಎಂದು ಕೊಹ್ಲಿ ತಿಳಿಸಿದರು. "ನಾನು ದೇವದತ್‌ ಪಡಿಕ್ಕಲ್‌ ಜೊತೆ ಓಪನಿಂಗ್‌ ಮುಂದುವರಿಸುತ್ತೇನೆ. ನಮ್ಮ ಬ್ಯಾಟಿಂಗ್‌ ಡೆಪ್ತ್‌ ಅನ್ನು ಪರೀಕ್ಷಿಸುವುದನ್ನು ಮುಂದುವರಿಸುತ್ತೇನೆ. ಬ್ಯಾಟಿಂಗ್‌ ತಂಡವಾಗಿ ನಾವು ವಿಶ್ವಾಸದಲ್ಲಿದ್ದೇವೆ. ನಾವು ಕೆಲ ಹಂತಗಳಲ್ಲಿ ಪಾತ್ರಗಳನ್ನು ಬದಲಾಯಿಸಿದ್ದೇವೆ," ಎಂದು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದರು. ಈ ಪಂದ್ಯದ ಗೆಲುವಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದು, ಬುಧವಾರ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ, ಇನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಆರನೇ ಪಂದ್ಯವಾಡಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vklgDH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...