ಹೊಸದಿಲ್ಲಿ: ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರರಲ್ಲೂ ಪ್ರಚಂಡ ಫಾರ್ಮ್ನಲ್ಲಿ ಕಾಣುತ್ತಿರುವ ಸಹ ಆಟಗಾರ ಅವರನ್ನು ಬ್ಯಾಟ್ಸ್ಮನ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕಳೆದ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯಲ್ಲಿ ಗಾಯದಿಂದ ಟೀಮ್ ಇಂಡಿಯಾದಿಂದ ಹೊರ ನಡೆದಿದ್ದ ಸರ್ ರವೀಂದ್ರ ಜಡೇಜಾ ಬಳಿಕ ಹಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ನಂತರ ಸಂಪೂರ್ಣ ಫಿಟ್ ಆಗಿ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮರಳಿದರು. ಅದರಂತೆ ಅವರು ಅದ್ಭುತ ಫಾರ್ಮ್ನಲ್ಲಿ ಕಾಣುತ್ತಿದ್ದಾರೆ. ರವೀಂದ್ರ ಜಡೇಜಾ ಮೊದಲು ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿಯೂ ನೆರವಾಗುತ್ತಿದ್ದಾರೆ. ಇದೀಗ ಅವರು ವಿಶ್ವ ಕ್ರಿಕೆಟ್ನಲ್ಲಿ ಪರಿಪೂರ್ಣ ಕ್ರಿಕೆಟಿಗರಾಗಿ ಹೊರಹೊಮ್ಮುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್ ರೈನಾ, ರವೀಂದ್ರ ಜಡೇಜಾ ಪ್ರಸ್ತುತ ವಿಶ್ವದ ನಂ.1 ಆಟಗಾರ ಎಂದು ಶ್ಲಾಘಿಸಿದ್ದಾರೆ. "ಅವರು (ಜಡೇಜಾ) ಅದ್ಭುತ ಆಟಗಾರ, ವಿಶ್ವದ ನಂ.1 ಕ್ರಿಕೆಟಿಗರಾಗುವತ್ತಾ ಅವರು ಹೆಜ್ಜೆ ಇಡುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಜತೆಗೆ ಅವರು ಪೀಲ್ಡಿಂಗ್ ಮಾಡುವುದನ್ನೂ ತುಂಬಾ ಆನಂದಿಸುತ್ತಾರೆ ಹಾಗೂ ಅವರು ಚೆಂಡನ್ನು ಹೇಗೆ ಥ್ರೋ ಮಾಡುತ್ತಾರೆ ಸೇರಿದಂತ ಮೈದಾನದಲ್ಲಿ ಅವರು ತೋರುವ ವರ್ತನೆ ನನಗೆ ಇಷ್ಟ," ಎಂದರು. "ಅವರು ಅಸಾಧಾರಣ ಆಟಗಾರ, ಅವರು ಪಂದ್ಯದಲ್ಲಿ ಬಹಳಷ್ಟು ಥ್ರೋಗಳನ್ನು ನೇರವಾಗಿ ಸ್ಟಂಪ್ಗಳಿಗೆ ಹೊಡೆಯುತ್ತಾರೆ. ಹಲವು ವರ್ಷಗಳ ಹಿಂದಿನಿಂದ ನಾನು ಅವರ ಜೊತೆ ಆಡಿಕೊಂಡು ಬರುತ್ತಿದ್ದೇನೆ. ಅವರೊಂದಿಗೆ ಅತ್ಯುತ್ತಮ ನೆನಪುಗಳಿವೆ," ಎಂದು ಸುರೇಶ್ ರೈನಾ ಸ್ಟಾರ್ಸ್ಪೋರ್ಟ್ಸ್ ಪ್ರೀ ಶೋನಲ್ಲಿ ತಿಳಿಸಿದರು. ರವೀಂದ್ರ ಜಡೇಜಾ ಅವರನ್ನು ತಂಡದ ನಾಯಕನ ಆಟಗಾರ ಎಂದು ಬಣ್ಣಿಸಿದ ಸುರೇಶ್ ರೈನಾ, ಆಲ್ರೌಂಡರ್ ಪ್ರಸ್ತುತ ಹಾಟ್ ಫಾರ್ಮ್ನಲ್ಲಿದ್ದಾರೆ ಎಂದು ಹೇಳಿದರು. ರವೀಂದ್ರ ಜಡೇಜಾ ಅವರು ಕ್ಲಾಸ್ ಆಲ್ರೌಂಡರ್ ಆಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಮೂರೂ ಸ್ವರೂಪಕ್ಕೆ ಹೇಳಿ ಮಾಡಿಸಿದ ಆಟಗಾರ ಎಂದರು. "ಪಂದ್ಯವನ್ನು ಯಾವುದೇ ಕ್ಷಣದಲ್ಲಿ ಬದಲಾವಣೆ ಮಾಡುವ ಆಟಗಾರರ ಸಾಲಿಗೆ ರವೀಂದ್ರ ಜಡೇಜಾ ಸೇರುತ್ತಾರೆ. ಯಾರೇ ನಾಯಕರಾಗಿದ್ದರೂ ಎಡಗೈ ಆಟಗಾರನನ್ನು ತಂಡಕ್ಕೆ ಕರೆದುಕೊಳ್ಳುತ್ತಾರೆ. ಪಂದ್ಯವನ್ನು ಯಾವುದೇ ಕ್ಷಣದಲ್ಲಿ ತಿರುಗಿಸುವ ಸಾಮರ್ಥ್ಯ ಈತನಲ್ಲಿದೆ. ಇದನ್ನೇ ಅವರು ಸದ್ಯ ಮಾಡುತ್ತಿದ್ದಾರೆ. ಬ್ಯಾಟಿಂಗ್ ಅತ್ಯುತ್ತಮವಾಗಿ ಮಾಡುತ್ತಿದ್ದಾರೆ, ಬೌಲಿಂಗ್ನಲ್ಲಿಯೂ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಅವರು ಟೂರ್ನಿಯಲ್ಲಿ 7 ರಿಂದ 8 ಕ್ಯಾಚ್ಗಳನ್ನು ಪಡೆದಿದ್ದಾರೆ. ಮೂರೂ ಸ್ವರೂಪದ ಕ್ರಿಕೆಟ್ಗೆ ಈ ತರಹ ಆಟಗಾರ ತಂಡದಲ್ಲಿ ಇರಬೇಕು," ಎಂದು ಸುರೇಶ್ ರೈನಾ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/330JqqB