ಮಂಗಳೂರು: ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ; ಸ್ಥಳೀಯರಲ್ಲಿ ಆತಂಕ!

ಮಂಗಳೂರು: ವಿಶೇಷ ಆರ್ಥಿಕ ವಲಯ(ಎಸ್‌ಇಝೆಡ್‌)ದೊಳಗಿನ ಘಟಕವೊಂದರಲ್ಲಿ ಶನಿವಾರ ಬೆಳಗ್ಗೆ ಅಗ್ನಿ ದುರಂತ ಸಂಭವಿಸಿದ್ದು, ಭಾರಿ ಹೊಗೆ, ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಅಂತಿಯಾ ಆರೊಮೆಟಿಕ್ಸ್‌ ಕಂಪನಿಯ ಸಹ ಸಂಸ್ಥೆಯಾಗಿರುವ ಕೆಟಸಿಂತ್‌ ಕೆಮಿಕಲ್ಸ್‌ ಹೆಸರಿನ ಆರೋಮ್ಯಟಿಕ್ಸ್‌ ಘಟಕದ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಫೋಟದ ಭಾರಿ ಸದ್ದು ಕೇಳಿದ ಕೆಲವೇ ಹೊತ್ತಿನಲ್ಲಿ ಹೊಗೆ, ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಂಆರ್‌ಪಿಎಲ್‌, ಎಂಎಸ್‌ಇಝೆಡ್‌, ಬಿಎಂಪಿಎಲ್‌ ಹಾಗೂ ಇತರ ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಆಗಮಿಸಿದ್ದು, ಜೋರು ಗಾಳಿ ಬೀಸುತ್ತಿದ್ದ ಕಾರಣ ಬಹುತೇಕ ಬೆಂಕಿ ಆವರಿಸಿಯಾಗಿತ್ತು. ಆಗಸದೆತ್ತರಕ್ಕೆ ಕಪ್ಪನೆಯ ದಟ್ಟ ಹೊಗೆ ಕಂಡುಬಂದಿದ್ದು, ಸುತ್ತಮುತ್ತಲ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಟಸಿಂತ್‌ ವಿಶೇಷ ರಾಸಾಯನಿಕಗಳ ಉತ್ಪಾದನಾ ಘಟಕವು ಆರೇಳು ತಿಂಗಳ ಹಿಂದೆ ಉತ್ಪಾದನೆ ಪ್ರಾರಂಭಿಸಿದ್ದು, ಕಂಪನಿಯ ಎಂಟು ಫೇಸ್‌ಗಳ ಪೈಕಿ ಎರಡು ಫೇಸ್‌ಗಳು ಮಾತ್ರ ಪ್ರಾರಂಭಗೊಂಡಿದೆ. ಉಳಿದವು ನಿರ್ಮಾಣ ಹಂತದಲ್ಲಿದ್ದು, ಕಾಮಗಾರಿ ನಡೆಯುವ ವೇಳೆ ಆದ ಭದ್ರತಾ ಲೋಪದ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಕಂಪನಿಯೊಳಗೆ ಬೆನ್ಸಿನ್‌ ಎಂಬ ರಾಸಾಯನಿಕ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತೆಂದು ಮೂಲಗಳು ತಿಳಿಸಿವೆ. ದುರಂತದ ಬಳಿಕ ಎಂಎಸ್‌ಇಝೆಡ್‌ ವಲಯದಿಂದ ಹೊರಬರುವ ತೋಡುಗಳಲ್ಲಿ ಕಪ್ಪು ಬಣ್ಣದ ದ್ರಾವಣ ಹರಿದು ಬರುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಉಮಾನಾಥ್‌ ಕೋಟ್ಯಾನ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನರ ವಿರೋಧವನ್ನೂ ಲೆಕ್ಕಿಸದೆ ಕಂಪನಿ ಸ್ಥಾಪಿಸಲಾಗಿತ್ತು! ಕೆಲ ವರ್ಷದ ಹಿಂದೆ ಎಸ್ಇಝಡ್ ಪ್ರಾಜೆಕ್ಟ್‌ಗೆ ರೈತರ ಭೂಮಿ ಸ್ವಾಧೀನಪಡಿಸಲು ಮುಂದಾದಾಗ ಹೋರಾಟಗಾರ್ತಿ ವಿದ್ಯಾದಿನಕರ್ ನೇತೃತ್ವದ ಕೃಷಿ ಭೂಮಿ ಸಂರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಆಗೆಲ್ಲಾ ಇದು ಸಾರ್ವಜನಿಕ ಉದ್ದಿಮೆ, ಉದ್ಯೋಗ ನೀಡುತ್ತದೆ ಎಂದು ಹೋರಾಟಗಾರರ ವಿರುದ್ದವೇ ಗೂಂಡಾಗಿರಿ ನಡೆಸಲಾಗಿತ್ತು. ಸ್ಥಳೀಯರು ಕೂಡ ಕಂಪನಿ ಚೇಲಾಗಳ ಬಣ್ಣದ ಮಾತಿಗೆ ಮರುಳಾಗಿ ಹೋರಾಟಗಾರರ ವಿರುದ್ಧವೇ ತಿರುಗಿಬಿದ್ದಿದ್ದರು. ಅದಾಗ್ಯೂ 1083 ಎಕರೆ ಭೂಮಿ ಎಸ್ಇಝೆಡ್ ಪಾಲಾದರೆ, 2035 ಎಕರೆ ಕೃಷಿ ಭೂಮಿಯನ್ನು ಹೋರಾಟದ ಫಲವಾಗಿ ಉಳಿಸಿಕೊಳ್ಳಲಾಗಿತ್ತು.


from India & World News in Kannada | VK Polls https://ift.tt/2RQXBMD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...