ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಣೆ ಮಾಡಿದ ವೀಕೆಂಡ್ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೆಚ್ಚುತ್ತಿರುವ ಪ್ರಕರಣ, ಸೋಂಕಿನ ತೀವ್ರತೆ, ಆಕ್ಸಿಜನ್ ಬೆಡ್ ಸಿಗದ ಅಪಾಯಗಳಿಂದ ಕಂಗಾಲಾಗಿರುವ ಜನರೇ ಬಹುತೇಕ ಸ್ವಯಂಪ್ರೇರಣೆಯಿಂದ ಕಫ್ರ್ಯೂಗೆ ಸಹಕರಿಸಿದ್ದಾರೆ. ಈ ನಡುವೆ, ಜನರ ಈ ಸಹಕಾರವನ್ನು ಬಳಸಿಕೊಂಡು ವೀಕೆಂಡ್ ಕರ್ಫ್ಯೂ ಮಾದರಿಯ ಕಠಿಣ ನಿಯಮಗಳನ್ನು ವಾರವಿಡೀ ಜಾರಿಗೆ ತರುವ ಬಗ್ಗೆಯೂ ಗಂಭೀರ ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಸೋಮವಾರ ನಡೆಯಲಿರುವ ಸಂಪುಟ ಸಭೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಂತೂ 14 ದಿನಗಳ ಲಾಕ್ಡೌನ್ಗೆ ಸಲಹೆ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಬ್ಬರೂ ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಈ ನಡುವೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮಾದರಿಯನ್ನು ವಾರವಿಡೀ ವಿಸ್ತರಿಸುವ ಅಗತ್ಯವನ್ನು ಸಣ್ಣದಾಗಿ ಪ್ರತಿಪಾದಿಸಿದ್ದಾರೆ. 14 ದಿನದ ಲಾಕ್ಗೆ ಸಲಹೆ! ರಾಜ್ಯದಲ್ಲಿ ಕೊರೊನಾ ಚೈನ್ ಬ್ರೇಕ್ ಮಾಡಲು 14 ದಿನಗಳ ಲಾಕ್ಡೌನ್ ಸೇರಿದಂತೆ ಕಠಿಣ ನಿರ್ಬಂಧಗಳ ಅಗತ್ಯವನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಪ್ರತಿಪಾದಿಸಿದೆ. ಅಕ್ಟೋಬರ್-ನವೆಂಬರ್ನಲ್ಲಿ ಮೂರನೇ ಅಲೆ ಬರುವ ಹಿನ್ನೆಲೆಯಲ್ಲಿ ಅದಕ್ಕಿಂತ ಮೊದಲು ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ಪೂರ್ಣಗೊಳಿಸಬೇಕೆಂದೂ ಅದು ತಾಕೀತು ಮಾಡಿದೆ. 14 ದಿನಗಳ ಕಠಿಣ ಲಾಕ್ಡೌನ್ ಮಾಡುವ ಮೂಲಕ ಸೋಂಕಿನ ತೀವ್ರತೆಯನ್ನು ಇಳಿಸಬೇಕು, ಅದರ ಜತೆಗೆ ಖಾಸಗಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು ಬಳಸಿಕೊಂಡು ಚಿಕಿತ್ಸಾ ವ್ಯವಸ್ಥೆ ಬಲಗೊಳಿಸಬೇಕು. ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. 30,000ದ ಗಡಿಗೆ ಸೋಂಕು, 200ರ ಗಡಿ ಮೀರಿದ ಸಾವು ರಾಜ್ಯದಲ್ಲಿಶನಿವಾರ 29,438 ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 208 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ಒಂದರಲ್ಲೇ 17,342 ಮಂದಿಗೆ ಸೋಂಕು ತಗುಲಿದ್ದು, 149 ಸಾವು ಸಂಭವಿಸಿದೆ. ಬೆಂಗಳೂರಿನಂತೆಯೇ ರಾಜ್ಯದ ಇತರ ಭಾಗಗಳಲ್ಲೂ ಸೋಂಕಿನ ತೀವ್ರತೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಒಟ್ಟು ಪ್ರಕರಣಗಳ ಪೈಕಿ ಶೇ. 40 ಪ್ರಕರಣಗಳು ಬೆಂಗಳೂರಿನ ಹೊರಗಿವೆ. ಬೆಂಗಳೂರು ನಂ.1 ಸಕ್ರಿಯ ಬೆಂಗಳೂರು ನಗರದಲ್ಲಿಸಕ್ರಿಯ ಪ್ರಕರಣಗಳ ಸಂಖ್ಯೆ 1,62,171 ಇದೆ. ಇದು ದೇಶದಲ್ಲೇ ಗರಿಷ್ಠ 2ನೇ ಸ್ಥಾನದಲ್ಲಿರುವ ಪುಣೆಯಲ್ಲಿರುವುದು 1.16 ಲಕ್ಷ ಪ್ರಕರಣ ಮಾತ್ರ. ಕೆಲವು ದಿನಗಳ ಹಿಂದೆ ಗಂಭೀರವಾಗಿದ್ದ ಮುಂಬಯಿ ಸ್ಥಿತಿ ಸುಧಾರಿಸುತ್ತಿದೆ (5888 ಪ್ರಕರಣ).
from India & World News in Kannada | VK Polls https://ift.tt/3sJjOsQ