ಮೈಸೂರು: ನಕಲಿ ರೆಮ್‌ಡಿಸಿವಿರ್‌ ಔಷಧ ಜಾಲ ಪತ್ತೆ, ಖಾಲಿ ಬಾಟಲ್‌ಗೆ ಸಲೈನ್‌ ತುಂಬಿ ಸ್ಟಾಫ್‌ ನರ್ಸ್‌ನಿಂದ ಮಾರಾಟ!

ಕೊರೊನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್‌ ಔಷಧವನ್ನು ನಕಲಿಯಾಗಿ ಸಿದ್ಧಪಡಿಸಿ ಮಾರುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಪ್ರಮುಖ ರೂವಾರಿಯನ್ನು ಬಂಧಿಸಿದ್ದಾರೆ. ಗಿರೀಶ್‌ ಬಂಧಿತ. ಈತನಿಗೆ ಸಹಕರಿಸಿದ್ದ ಶಿವಪ್ಪ ಮತ್ತು ಮಂಗಳಾ, ಪ್ರಶಾಂತ್‌, ಮಂಜುನಾಥ್‌ ಅವರನ್ನು ವಶಕ್ಕೆ ಪಡೆಯ ಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆರೋಪಿಯಿಂದ 34 ಬಾಟಲ್‌ ಔಷಧ ಮತ್ತು 2.82 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ''ಕೋವಿಡ್‌ ರೋಗಿಗಳಿಗೆ ನೀಡಲಾಗುವ ರೆಮ್‌ಡಿಸಿವಿರ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವೇಳೆ ನಕಲಿ ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂತು,'' ಎಂದು ತಿಳಿಸಿದರು. ನಕಲಿ ಔಷಧ ತಯಾರಿಕೆ ಹೇಗೆ?ಖಾಸಗಿ ಆಸ್ಪತ್ರೆಯೊಂದ ರಲ್ಲಿ 11 ವರ್ಷಗಳಿಂದ ಸ್ಟಾಫ್‌ ನರ್ಸ್‌ ಆಗಿ ಕಾರ್ಯ ನಿರ್ವಹಿ ಸುತ್ತಿದ್ದ ಗಿರೀಶ್‌, ವಿದ್ಯಾನಗರದಲ್ಲಿರುವ ಮನೆಯಲ್ಲಿ ಖಾಲಿ ರೆಮ್‌ಡಿಸಿವಿರ್‌ ಔಷಧದ ಬಾಟಲಿಗಳಿಗೆ ನಕಲಿ ಔಷಧ ತುಂಬಿಸುತ್ತಿದ್ದ. ಈತನಿಗೆ ಕುವೆಂಪು ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಪ್ಪ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಮಂಗಳಾ ಅವರು ಸಹಕರಿಸುತ್ತಿದ್ದರು. ಬಳಸಿ ಬಿಸಾಕಿದ್ದ ರೆಮ್‌ಡಿಸಿವಿರ್‌ ಔಷಧಿ ಬಾಟಲಿಗಳನ್ನು ಪೂರೈಸುವುದು ಇವರಿಬ್ಬರ ಕೆಲಸವಾಗಿತ್ತು. ಬಳಿಕ ಗಿರೀಶ್‌ ಖಾಲಿ ಬಾಟಲಿಗಳಿಗೆ ನಕಲಿ ಔಷಧ ತುಂಬಿಸಿ, ಔಷಧ ಕಂಪೆನಿಗಳ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್‌ ಮತ್ತು ಮಂಜುನಾಥ್‌ ಅವರ ಮೂಲಕ ಬೇಡಿಕೆ ಇರುವ ಕಡೆಗೆ ದುಬಾರಿಗೆ ಬೆಲೆಗೆ ಪೂರೈಸುತ್ತಿದ್ದರು. 100 ರೂ. ಔಷಧದ ಪುಡಿ ಭರ್ತಿ! 100 ರೂ. ವೆಚ್ಚದ ಔಷಧದ ಪುಡಿ ಮತ್ತು ದ್ರಾವಣವನ್ನು ಗಿರೀಶ್‌ ಅವುಗಳಿಗೆ ಮಿಶ್ರಣ ಮಾಡುತ್ತಿದ್ದ. ಬಾಟಲ್‌ ಅನ್ನು ಯಾರಿಗೂ ಅನುಮಾನ ಬಾರದಂತೆ ಸೀಲ್‌ ಮತ್ತು ಪ್ಯಾಕ್‌ ಮಾಡಿ ನಾಲ್ಕು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಪುಡಿ ರೂಪದ ರೆಮ್‌ಡಿಸಿವಿರ್‌ ಔಷಧ ಬಾಟಲಿಗೆ ಸೆಫ್ಟಿ್ರ ಆ್ಯಕ್ಸನ್‌ ಎಂಬ ಆ್ಯಂಟಿ ಬಯೋಟಿಕ್‌ ಪುಡಿಯನ್ನು ಮಿಶ್ರಣ ಮಾಡಿದರೆ, ದ್ರವ ರೂಪದ ರೆಮ್‌ಡಿಸಿವಿರ್‌ಗೆ ನಾರ್ಮಲ್‌ ಸಲೈನ್‌ ಅನ್ನು ತುಂಬಿಸಿ, ಪ್ಯಾಕ್‌ ಮಾಡುತ್ತಿದ್ದರು. ದಾಳಿ ಕಾರ್ಯವನ್ನು ಡಿಸಿಪಿಗಳಾದ ಡಾ.ಎ.ಎನ್‌.ಪ್ರಕಾಶ್‌ ಗೌಡ, ಗೀತ ಪ್ರಸನ್ನ ಮಾರ್ಗದರ್ಶನಲ್ಲಿಸಿಸಿಬಿ ಎಸಿಪಿ ಸಿ.ಕೆ.ಅಶ್ವಥ್ಥ ನಾರಾಯಣ ಅವರ ನೇತೃತ್ವದಲ್ಲಿಸಿಸಿಬಿಯ ಇನ್ಸ್‌ ಪೆಕ್ಟರ್‌ಗಳಾದ ಜಿ.ಶೇಖರ್‌. ಆರ್‌. ಜಗದೀಶ್‌, ವಿ.ಎಸ್‌. ಶಶಿಕುಮಾರ್‌, ಎಸ್‌ಐ ಅನಿಲ್‌ ಕುಮಾರ್‌, ಸಿಬ್ಬಂದಿ ಅಸ್ಗರ್‌ ಖಾನ್‌, ರಾಮಸ್ವಾಮಿ, ಯಾಕೂಬ್‌, ಷರೀಫ್‌, ಶಿವರಾಜು, ಆನಂದ, ಲಕ್ಷ್ಮೇ ಕಾಂತ್‌, ಎಂ.ಆರ್‌.ಗಣೇಶ್‌, ಚಿಕ್ಕಣ್ಣ, ನರ ಸಿಂಹ, ಮಮತ, ಗೌತಮ್‌, ನೀಲಕಂಠರಾವ್‌, ಶಿವಕುಮಾರ್‌, ರಾಜೇಶ್‌ ನಡೆಸಿದ್ದಾರೆ.


from India & World News in Kannada | VK Polls https://ift.tt/3v5uKCM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...