ಮಂಗಳೂರು ಆಕಾಶವಾಣಿಯಲ್ಲಿ ಮತ್ತೆ ತುಳು, ಕೊಂಕಣಿ ಭಾಷೆ ಕಾರ್ಯಕ್ರಮ: ಎಚ್ಚೆತ್ತ ಪ್ರಸಾರ ಭಾರತಿ

ಮಹೇಶ ಪಟ್ಟಾಜೆ ಮಂಗಳೂರು ಮಂಗಳೂರು: ಆಕಾಶವಾಣಿಯ ಪ್ರಾದೇಶಿಕ ಕೇಂದ್ರಗಳ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ ಪ್ರಸಾರ ಭಾರತಿಯ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲ ಆಕಾಶವಾಣಿ ಕೇಂದ್ರಗಳಿಗೆ ಸಂಸ್ಥೆಯ ದಕ್ಷಿಣ ವಲಯ ಎಡಿಜಿ ಆದೇಶ ಜಾರಿಗೊಳಿಸಿ, ಈ ಮೊದಲಿನಂತೆ ಪ್ರಾದೇಶಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅದರಂತೆ ಏ.13ರಿಂದ 15ರವರೆಗೆ ಬೆಂಗಳೂರು ಆಕಾಶವಾಣಿ ಕಾರ್ಯಕ್ರಮಗಳನ್ನೇ ಬಿತ್ತರಿಸುತ್ತಿದ್ದ ಮಂಗಳೂರು ಆಕಾಶವಾಣಿ ಸಹಿತ ರಾಜ್ಯದ 13 ಕೇಂದ್ರಗಳಲ್ಲಿ ಏ.16ರಿಂದ ಸ್ಥಳೀಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಏತನ್ಮಧ್ಯೆ ಕೋವಿಡ್‌ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಮೈಸೂರು ಸಹಿತ ಕೆಲವೊಂದು ಕೇಂದ್ರಗಳಲ್ಲಿಅನಿವಾರ್ಯವಾಗಿ ಸಂಜೆ ಬಳಿಕದ ಶುಡ್ಯೂಲ್‌ನಲ್ಲಿ ಬೆಂಗಳೂರಿನ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡಲಾಗುತ್ತಿದೆ. ಪ್ರಸಾರ ಭಾರತಿಯ ಈ ನಿರ್ಧಾರದಿಂದ ಸ್ಥಳೀಯ ಸೊಗಡಿಗೆ, ಪ್ರಾದೇಶಿಕ ಭಾಷಾ ಪರಂಪರೆಗೆ ಬಹುದೊಡ್ಡ ಹೊಡೆತ ನೀಡಿತ್ತು. ಆದರೆ ಕಲಾವಿದರು, ಸಾಹಿತ್ಯಾಭಿಮಾನಿಗಳು, ಆಕಾಶವಾಣಿ ಕೇಳುಗರ ವ್ಯಾಪಕ ವಿರೋಧದಿಂದ, ಬದಲಾದ ಸನ್ನಿವೇಶದಲ್ಲಿಏ.16ರಿಂದ ಮಂಗಳೂರು ಸಹಿತ ಕೆಲವು ಪ್ರಮುಖ ಆಕಾಶವಾಣಿ ಕೇಂದ್ರಗಳು ಎಂದಿನಂತೆ ಸ್ಥಳೀಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. 1976ರಿಂದ ಮಂಗಳೂರು ಆಕಾಶವಾಣಿ ಕಾರ್ಯಾಚರಿಸುತ್ತಿದ್ದು, ಸ್ಥಳೀಯ ಪ್ರತಿಭೆಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಯುವವಾಣಿ, ಬಾಲವೃಂದ, ವನಿತಾವಾಣಿ, ಕಿಸಾನ್‌ವಾಣಿ, ಯಕ್ಷಗಾನ ಮತ್ತಿತರ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕೇಂದ್ರೀಕೃತ ಚೌಕಟ್ಟಿನಿಂದ ಈ ಪ್ರಾದೇಶಿಕ ಕಾರ್ಯಕ್ರಮಗಳ ಸಹಿತ ಕಾರ್ಯಕ್ರಮ ನಿರೂಪಕರ ಕೆಲಸಕ್ಕೂ ಆತಂಕ ಎದುರಾಗಿತ್ತು. ಪ್ರಾದೇಶಿಕ ಕಾರ‍್ಯಕ್ರಮಕ್ಕೆ ಕಡಿವಾಣ ಇಲ್ಲ: ಸಿಇಒ ಸ್ಪಷ್ಟನೆಆಕಾಶವಾಣಿಯಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ, ಹೊಸ ನೀತಿ ತುಳು, ಕೊಂಕಣಿ ಭಾಷಾ ಕಾರ್ಯಕ್ರಮಕ್ಕೆ ಪ್ರಸಾರ ಭಾರತಿ ಸಂಸ್ಥೆ ಕುತ್ತು ತರಲಿದೆ ಎಂದು ಮಂಗಳೂರು ಆಕಾಶವಾಣಿ ಕೇಂದ್ರದ ಕ್ಯಾಶುವಲ್‌ ಅನೌನ್ಸರ್‌ಗಳು ಮಾಡಿರುವ ಆರೋಪವನ್ನು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್‌ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಇಒ ಶಶಿ ಶೇಖರ್‌, ಇಂತಹ ಯಾವುದೇ ಪ್ರಸ್ತಾವನೆ ಪ್ರಸಾರ ಭಾರತಿ ಮುಂದಿಲ್ಲ, ಈ ಬಗ್ಗೆ ಯಾವುದೇ ಚರ್ಚೆ, ತೀರ್ಮಾನವಾಗಿಲ್ಲ ಅಥವಾ ನಿರ್ದೇಶನ ನೀಡಿಲ್ಲ ಎಂದರು. ಸರಕಾರಿ ಅನುದಾನದ ಸದುಪಯೋಗ ಹಾಗೂ ಉತ್ತಮ ಗುಣಮಟ್ಟದ ವಿಷಯ, ವಸ್ತು ವರದಿ ಪ್ರಸಾರದ ಬಗ್ಗೆ ನಿರಂತರ ಗಮನ ಕೇಂದ್ರಿಕೃತಗೊಳಿಸಲಾಗುತ್ತಿದೆ. ಸ್ಥಳೀಯ ಭಾಷೆ, ಸೊಗಡು, ಪ್ರತಿಭೆಗಳಿಗೆ ಆಕಾಶವಾಣಿ ಸದಾ ಮನ್ನಣೆ ನೀಡಲಿದೆ. ಭಾಷಾ ವೈವಿಧ್ಯತೆಯಿಂದಲೇ ಆಕಾಶವಾಣಿ ಕಾರ್ಯಕ್ರಮ ಹೆಚ್ಚು ವ್ಯಾಪಿಸಲು ಸಾಧ್ಯವಾಗಿದ್ದು, ನೂರಾರು ಭಾಷೆ ಹಾಗೂ ನುಡಿಗಟ್ಟುಗಳನ್ನು ಬಳಸಿಕೊಂಡು ತನ್ನ ಜಾಲವನ್ನು ವಿಸ್ತರಿಸುತ್ತಾ ಬಂದಿದೆ ಎಂದರು.


from India & World News in Kannada | VK Polls https://ift.tt/32mJuAO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...