ಗುಂಡ್ಲುಪೇಟೆಯಲ್ಲಿ ಆಶ್ರಯ ಮನೆ ನೀಡುವಂತೆ ಅಧಿಕಾರಿಗಳ ಮುಂದೆ ವೃದ್ಧೆ ಕಣ್ಣೀರು!

ಗುಂಡ್ಲುಪೇಟೆ: ಇಲ್ಲೊಬ್ಬರು ಮಹಿಳೆ ಮನೆಗಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ, ಆಶ್ರಯ ಮನೆಗಾಗಿ ಅಂಗಲಾಚಿ ಬೇಡಿದ್ದಾರೆ...ಅಧಿಕಾರಿಗಳ ಮುಂದೆ ಕುಟುಂಬದ ಸಮಸ್ಯೆಯನ್ನ ಮುಂದಿಟ್ಟು ನೀಡುವಂತೆ ವೃದ್ದೆಯೋರ್ವರು ಒತ್ತಾಯಿಸಿ ಕಣ್ಣೀರು ಹಾಕಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ತಾಲೂಕಿನ ಕೊಡಸೋಗೆ ಗ್ರಾಮದ ಶಿವಮ್ಮ ಅವರು ಚಾಮರಾಜನಗರ ಅಪಾರ ಜಿಲ್ಲಾಧಿಕಾರಿ ಕಾತ್ಯಾಯಿನಿ ಅವರ ಮುಂದೆ ಕಣ್ಣೀರು ಹಾಕಿ ಈಗಲಾದರೂ ಆಶ್ರಯ ಮನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಸಭೆಯಲ್ಲಿ, ಅಧಿಕಾರಿಗಳ ಮುಂದೆ ಕಣ್ಣೀರಿಡುತ್ತಾ, ಸುಮಾರು ಹತ್ತಾರು ವರ್ಷಗಳಿಂದ ಆಶ್ರಯ ಮನೆ ಯೋಜನೆಯಲ್ಲಿ ಮನೆ ಒದಗಿಸುವಂತೆ ತಮ್ಮ ಕೊಡಸೋಗೆ ಗ್ರಾಮ ಪಂಚಾಯ್ತಿಯ ಪಿಡಿಓಗಳ ಗಮನಕ್ಕೆ ತೆಗೆದುಕೊಂಡು ಬಂದರೂ, ಯಾವುದೇ ಪ್ರಯೋಜವಾಗಿಲ್ಲ. ಎಷ್ಟು ಮನವಿ ಮಾಡಿಕೊಂಡರು ಯಾರು ನಮಗೆ ಆಶ್ರಯ ಮನೆ ಒದಗಿಸಿಕೊಟ್ಟಿಲ್ಲ, ಅಧಿಕಾರಿಗಳ ಬಳಿ ಎಷ್ಟು ಬಾರಿ ತೆರಳಿ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಯು ಮನವಿಗೆ ಸ್ಪಂದಿಸುತ್ತಿಲ್ಲ, ಜೀವನದ ಕೊನೆಯಲ್ಲದರೂ ಸ್ವಂತ ಮನೆ ಹೊಂದಬೇಕು ಎನ್ನುವ ಬಯಕೆ ಇದೆ. ಆದರೆ ಯಾವೊಬ್ಬ ಅಧಿಕಾರಿಗಳು ನನಗೆ ಆಶ್ರಯ ಮನೆ ನೀಡಲು ಮುಂದಾಗುತ್ತಿಲ್ಲ ಎಂದು ಕೊಡಸೋಗೆ ಗ್ರಾಮ ಪಂಚಾಯತಿ ಪಿಡಿಓ ನಾಗಲಾಂಬಿಕೆ ವಿರುದ್ಧ ದೂರಿನ ಸುರಿಮಳೆ ಗೈದಿದ್ದಾರೆ. ಮನೆಯಲ್ಲಿ ಮಕ್ಕಳಿದ್ದಾರೆ. ಮಳೆ ಬಂದರೆ ಎಲ್ಲಿ ಹೋಗಬೇಕು? ಎಷ್ಟೋ ವರ್ಷಗಳಿಂದಲೂ ನಾವು ಮನೆ ಇಲ್ಲದೆ ಸಣ್ಣಪುಟ್ಟ ಗುಡಿಸಿಲಿನಲ್ಲಿ ವಾಸವಿದ್ದೇವೆ, ಮುಂದೆ ನಮ್ಮ ಮಕ್ಕಳಿಗಾದರೂ ಆರೋಗ್ಯ, ಉತ್ತಮ ಶಿಕ್ಷಣ ನೀಡಲು ನನ್ನ ಕುಟುಂಬಕ್ಕೆ ಅವಶ್ಯಕವಾಗಿ ಆಶ್ರಯ ಮನೆಯ ಅವಶ್ಯಕತೆ ಇದೆ ಎಂದು ಗ್ರಾಮದ ಮತ್ತೋರ್ವ ಮಹಿಳೆಯೂ ಸಹ ಅಧಿಕಾರಿಗಳ ಮುಂದೆ ಕಣ್ಣೀರಿಡುತ್ತಾ ಮನವಿ ಮಾಡಿಕೊಂಡಿದ್ದಾರೆ.


from India & World News in Kannada | VK Polls https://ift.tt/3lBkK0j

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...