ಬೆಳಗಾವಿಯಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಮಾಜಿ ಗ್ರಾ.ಪಂ ಸದಸ್ಯೆ!

ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆ ಅಂದ್ರೆನೇ ಹಾಗೆ, ಗ್ರಾಮೀಣ ಭಾಗದಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಸಣ್ಣ ಸಣ್ಣ ನಾಯಕರು ಇದೆ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ತಾಕತ್ತು ತೋರಿಸಲು ಮುಂದಾಗುತ್ತಾರೆ. ಆದ್ರೆ ಇಲ್ಲೊಂದು ಗ್ರಾಮ ಪಂಚಾಯತಿಯಲ್ಲಿ ಓರ್ವ ಸದಸ್ಯೆಯನ್ನ ಚುನಾವಣೆಯಿಂದ ದೂರ ಇಡಲು ಇಲ್ಲಿನ ಶಾಸಕಿ ಸಚಿವೆ ಹಾಗೂ ಸಂಸದ ಅಣ್ಣಾಸಾಬ ಜೋಲ್ಲೆ ಅಧಿಕಾರ ದುರುಪಯೋಗ ಮಾಡಿಕೊಂಡು ತಹಶೀಲ್ದಾರ್ ಮೂಲಕ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮ ಪಂಚಾಯತನ ಮಾಜಿ ಸದಸ್ಯೆ ಒಬ್ಬರು ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಹೌದು.., ಇಂತಹದೊಂದು ಘಟನೆ ನಡೆದಿದ್ದು ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಮದಾಪೂರ ಗ್ರಾಮದಲ್ಲಿ. ಗ್ರಾಮದ ವಾರ್ಡ್ ನಂಬರ್ ಎರಡರ ಮಾಜಿ ಸದಸ್ಯೆ ಚೋಪಡೆ ಎಂಬುವವರು ಪಂಚಾಯತಿ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ‌. ಇದಕ್ಕೆ ಕಾರಣವಾಗಿದ್ದು ಜಾತಿ ಪ್ರಮಾಣ ಪತ್ರ. ಲಕ್ಷ್ಮೀಬಾಯಿ ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದರು. 2015ರಿಂದ 2020ರವರೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯು ಆಗಿದ್ದರು. 5 ವರ್ಷ ಯಾವುದೇ ಸಮಸ್ಯೆ ಇಲ್ಲದೆ ಲಕ್ಷ್ಮೀಬಾಯಿ ವಾರ್ಡ್‌ ನಂಬರ್ ಎರಡರಿಂದ ಎಸ್‌.ಟಿ ಕೆಟಗೇರಿ ಮೂಲಕ ಚುನಾಯಿತರಾಗಿ ಅಧಿಕಾರವನ್ನ ನಡೆಸಿದ್ದಾರೆ. ಪಂಚಾಯತಿ ಅವಧಿ ಮುಗಿದ ಹಿನ್ನಲೆ 2020ರ ಡಿಸೆಂಬರ್ ನಲ್ಲಿ ಚುನಾವಣೆ ಘೋಷಣೆ ಆಗುತ್ತೆ.. ಲಕ್ಷ್ಮೀಬಾಯಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣ ಕಣಕ್ಕೆ ಇಳಿಯುತ್ತಾರೆ. ಲಕ್ಷ್ಮೀಬಾಯಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದಾರೆ ಎಂಬ ಹಿನ್ನಲೆ ಬಿಜೆಪಿ ನಾಯಕರು ತಹಶೀಲ್ದಾರ್ ಮೇಲೆ ಒತ್ತಡ ಹೇರಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರವನ್ನೆ ಹಿಂದೆ ಪಡೆಯುವಂತೆ ಮಾಡಿದ್ದಾರೆ ಎಂಬ ಆರೋಪವಿದೆ. 13/12/20 ರಲ್ಲಿ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡಿ ಮೂರು ದಿನದಲ್ಲಿ 16/12/20 ವಾಪಸ್ ಪಡೆಯಲಾಗುತ್ತದೆ. ಇದರಿಂದ ಲಕ್ಷ್ಮೀಬಾಯಿ ಚುನಾವಣಾ ಕಣದಿಂದ ದೂರ ಉಳಿಯುವಂತಾಗುತ್ತದೆ. ಆದರೆ ಲಕ್ಷ್ಮೀಬಾಯಿ ಬಾಯಿ ಮಾತ್ರ ಸುಮ್ಮನೆ ಇರದೆ ತಹಶೀಲ್ದಾರ್ ಕ್ರಮದ ವಿರುದ್ದ ಕೋರ್ಟ್ ಮೆಟ್ಟಿಲೇರಿ ವಾರ್ಡ್‌ ಗೆ ಚುನಾವಣೆ ನಡೆಯದಂತೆ ತಡೆಯೊಡ್ಡಿದ್ದರು. ಇನ್ನು ಅಂದು ಡಿಸೆಂಬರ್ 2020ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ 10 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 5 ಹಾಗೂ ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಜಯ ಸಾಧಿಸಿದ್ದರು ಒಂದು ವಾರ್ಡ ಗೆ ಮಾತ್ರ ಚುನಾವಣಾ ನಡೆಸಿರಲಿಲ್ಲ. ಸದ್ಯ ಈಗ ಮತ್ತೊಮ್ಮೆ ಅದೇ ವಾರ್ಡ್ ಗೆ ಉಪ ಚುನಾವಣೆ ಘೋಷಣೆ ಆಗಿದೆ, ಲಕ್ಷ್ಮೀಬಾಯಿ ಮತ್ತೊಮ್ಮೆ ಎಸ್.ಟಿ ಕೆಟಗೇರಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಆದ್ರೆ ಈಗ ಮತ್ತೆ ತಹಶೀಲ್ದಾರ್ ನಮಗೆ ಜಾತಿ ಪ್ರಮಾಣ ಪತ್ರವನ್ನೆ ನೀಡುತ್ತಿಲ್ಲಾ. ಸುಳ್ಳು ಹೇಳಿ ನಿಮ್ಮ ಜಾತಿ ಪ್ರಮಾಣ ಪತ್ರಕ್ಕಾಗಿ ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿ ನನಗೆ ಮೋಸ ಮಾಡುತ್ತಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಬ ಜೋಲ್ಲೆ ಮಾತು ಕೇಳಿ ನನಗೆ ನಿಪ್ಪಾಣಿ ತಹಶೀಲ್ದಾರ್ ಜಾತಿ ಪ್ರಮಾಣದ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿಂದೆ 5 ವರ್ಷದ ಅವಧಿಗೆ ಎಸ್.ಟಿ ಕೆಟಗೇರಿಯಲ್ಲೆ ಸದಸ್ಯೆಯಾಗಿದ್ದೆ. ಅವಾಗ ಬಿಜೆಪಿಯಲ್ಲಿ ಇದ್ದೆ. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಜಾತೀಯ ಬಗ್ಗೆ ತಕರಾರು ಇರಲಿಲ್ಲ. ಆದ್ರೆ ಈಗ ಬಿಜೆಪಿಯಿಂದ ಕಾಂಗ್ರೆಸ್ ಹೋಗಿದ್ದಕ್ಕೆ ಅಧಿಕಾರಿಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ನನಗೆ ನನ್ನ ಜಾತಿ ಪ್ರಮಾಣ ಪತ್ರ ನೀಡಬೇಕು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ನನಗೆ ನ್ಯಾಯ ಸಿಗುವವರೆಗೂ ಉಪವಾಸ ಕೈ ಬಿಡಲ್ಲ ಎನ್ನುತ್ತಿದ್ದಾರೆ ಲಕ್ಷ್ಮೀಬಾಯಿ.


from India & World News in Kannada | VK Polls https://ift.tt/3s6TY2l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...