2025ರೊಳಗೆ ಪೊಲೀಸರಿಗೆ 11 ಸಾವಿರ ಮನೆ ನಿರ್ಮಾಣ: ಸಚಿವ ಬಸವರಾಜ ಬೊಮ್ಮಾಯಿ

ಮಂಗಳೂರು: ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಪೊಲೀಸ್‌ ಸಿಬ್ಬಂದಿಗಾಗಿ 11 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಗೃಹ ಸಚಿವ ಹೇಳಿದರು. ಪಣಂಬೂರಿನಲ್ಲಿ ಪೊಲೀಸ್‌ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು. ಮುಂದಿನ ಜನವರಿಯಿಂದ ಕಾರ್ಯ ಆರಂಭವಾಗಲಿದ್ದು, ಶೇ. 60ರಷ್ಟು ಪೊಲೀಸ್‌ ಸಿಬ್ಬಂದಿಗೆ ದೊರೆಯಲಿದೆ. ಶೇ.75 ಮಂದಿಗೆ ಈ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ದ.ಕ. ಜಿಲ್ಲೆಯಲ್ಲಿ 192 ಗೃಹ ನಿರ್ಮಾಣ ಬೇಡಿಕೆ ಬಂದಿದ್ದು, ನಿವೇಶನ ಲಭ್ಯವಿರುವ 74 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು ಡಿಜಿ ಕಚೇರಿಯಿಂದ ವರದಿ ಬಂದಿದೆ. ಉಳಿದ ಮನೆಗಳ ನಿರ್ಮಾಣಕ್ಕೆ ನಿವೇಶನ ಗೊತ್ತುಪಡಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು. ಉನ್ನತ ಶಿಕ್ಷಣಕ್ಕೆ ಸೌಕರ್ಯಪೊಲೀಸ್‌ ಇಲಾಖೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಪೊಲೀಸ್‌ ಸಿಬ್ಬಂದಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗಿದೆ ಎಂದರು. ಮಂಗಳೂರು ನಗರ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನವಾಗಿ ನಿರ್ಮಾಣವಾದ ಕ್ವಾರ್ಟರ್ಸ್‌ಗೆ 112ಕ್ಕೂ ಅಧಿಕ ಸಿಬ್ಬಂದಿಯಿಂದ ಅರ್ಜಿಗಳು ಬಂದಿದ್ದು, ಸೇವಾ ಹಿರಿತನದ ನೆಲೆಯಲ್ಲಿ ಇದೀಗ 112 ಮಂದಿಯನ್ನು ಆಯ್ಕೆ ಮಾಡಲಾಗುತ್ತಿದೆ. ಹೆಚ್ಚುವರಿ ಮನೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು. ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್‌, ಸ್ಥಳೀಯ ಕಾರ್ಪೊರೇಟರ್‌ ಸುಮಿತ್ರ ಕರಿಯ ಉಪಸ್ಥಿತರಿದ್ದರು. ಸಾಂಕೇತಿಕವಾಗಿ ಕೆಲವು ಸಿಬ್ಬಂದಿಗೆ ಸಚಿವ ಬಸವರಾಜ ಬೊಮ್ಮಾಯಿ ಅವರು ಮನೆಗಳ ಕೀ ಹಸ್ತಾಂತರಿಸಿದರು. ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್‌ ಆಯುಕ್ತ ವಿನಯ್‌ ಗಾಂವ್ಕರ್‌ ಸ್ವಾಗತಿಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್‌ ಆಯುಕ್ತ ಹರಿರಾಮ್‌ ವಂದಿಸಿದರು. 21.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪಣಂಬೂರಿನಲ್ಲಿ ಎರಡು ಬ್ಲಾಕ್‌ಗಳಲ್ಲಿ ನಿರ್ಮಾಣವಾಗಿರುವ ವಸತಿ ಸಂಕೀರ್ಣದಲ್ಲಿ ಒಟ್ಟು 112 ಮನೆಗಳಿದ್ದು, 21.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ತಮಿಳುನಾಡಿನ ಈರೋಡ್‌ನ ಮೆಸರ್ಸ್‌ ಆರ್‌ಪಿಪಿ ಇನ್‌ಫ್ರಾ ಪ್ರಾಜೆಕ್ಟ್ ಲಿಮಿಟೆಡ್‌ಗೆ ವಸತಿಗಳ ನಿರ್ಮಾಣಕ್ಕಾಗಿ 2016ರ ಮಾರ್ಚ್ 30ರಂದು ಪಣಂಬೂರಿನ ನಿವೇಶನ ಹಸ್ತಾಂತರಿಸಲಾಗಿತ್ತು. 2019ರ ಏಪ್ರಿಲ್‌ಗೆ ಜಿ+6 ಮಾದರಿಯಲ್ಲಿ ಎರಡು ಬ್ಲಾಕ್‌ಗಳು ಸಿದ್ಧವಾಗಿದ್ದು, ಪ್ರತಿ ಮನೆಗಳು ವಾರ್ಡ್‌ರೋಬ್‌ನೊಂದಿಗೆ ಎರಡು ಬೆಡ್‌ರೂಂ, ಮಾಡ್ಯುಲರ್‌ ಕಿಚನ್‌ ಹೊಂದಿವೆ. ಸಂಕೀರ್ಣವು ನೀರು ಸಂಸ್ಕರಣೆ, ನಾಲ್ಕು ಲಿಫ್ಟ್‌ಗಳು, ಮಳೆ ನೀರು ಕೊಯ್ಲು, ಸೋಲಾರ್‌ ನೀರಿನ ವ್ಯವಸ್ಥೆ ಹೊಂದಿದೆ. 1500 ಸಿಸಿ ಕ್ಯಾಮೆರಾ ಅಳವಡಿಕೆದ.ಕ. ಜಿಲ್ಲೆಯಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಾರ್ಕ್ ಸ್ಪಾಟ್‌ಗಳಲ್ಲಿ 1500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಮಂಗಳೂರಿನಲ್ಲಿ ಶಾಲೆ ಕಾಲೇಜು ಮಕ್ಕಳಲ್ಲಿ ಡ್ರಗ್ಸ್‌ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ನಾರ್ಕೊಟಿಕ್ಸ್‌ ಅನಾಲಿಸಿಸ್‌ ಒಳಗೊಂಡ ಅತ್ಯಾಧುನಿಕ ವಿಧಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆಯಾಗಿದ್ದು, ರಾಜ್ಯದ ಪ್ರತಿ ಪೊಲೀಸ್‌ ವಲಯದಲ್ಲೂ ಮಾದರಿ ಪ್ರಯೋಗಾಲಯ ಉನ್ನತೀಕರಿಸಲು ಹಾಗೂ ಮತ್ತೆ ಐದು ವಲಯಗಳಲ್ಲಿ ಹೊಸತಾಗಿ ಪ್ರಯೋಗಾಲಯ ತೆರೆಯಲಾಗುವುದು ಎಂದು ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ. ಕರಾವಳಿಯ ಸಮುದ್ರದಲ್ಲಿ 11 ನಾಟಿಕಲ್‌ ವ್ಯಾಪ್ತಿಯವರೆಗೆ ಪೊಲೀಸರಿಂದಲೇ ರಕ್ಷಣಾ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಕರಾವಳಿ ಪೊಲೀಸ್‌ ಪಡೆಯನ್ನು ಬಲಪಡಿಸಿ, ಹೈಸ್ಪೀಡ್‌ ಬೋಟ್‌ಗಳನ್ನು ಒದಗಿಸಲಾಗುವುದು. ಬಸವರಾಜ ಬೊಮ್ಮಾಯಿ ಗೃಹ ಸಚಿವ


from India & World News in Kannada | VK Polls https://ift.tt/3lydPna

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...