ಇಂಧೋರ್ (ಮಧ್ಯ ಪ್ರದೇಶ): ಬಾಲಿವುಡ್ ನಟಿ , ಬಿಜೆಪಿ ಸಾರಥ್ಯದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ ಪಾಕ್ ಮೂಲದ ಭಾರತೀಯ ಪ್ರಜೆ ಅದ್ನಾನ್ ಸಾಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಮಧ್ಯ ಪ್ರದೇಶದ ಇಂಧೋರ್ನಲ್ಲಿ ಸಿಎಎ ವಿರೋಧಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಮಾತನಾಡಿದ ಸ್ವರಾ ಭಾಸ್ಕರ್, ಮೋದಿ ಸರ್ಕಾರ ಪಾಕಿಸ್ತಾನದ ಮೇಲೆ ಅಪಾರ ಪ್ರೀತಿ ಹೊಂದಿದೆ. ಎಲ್ಲ ವಿಚಾರದಲ್ಲೂ ಪಾಕಿಸ್ತಾನವನ್ನು ಕಾಣುತ್ತೆ ಎಂದು ಲೇವಡಿ ಮಾಡಿದರು. ನನ್ನ ಅಜ್ಜಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು. ಆದ್ರೆ, ಅವರಿಗಿಂತಾ ಹೆಚ್ಚಾಗಿ ಬಿಜೆಪಿಗರು ಪಾಕಿಸ್ತಾನ ಮಂತ್ರ ಪಠಿಸಿದ್ದಾರೆ ಎಂದು ಸ್ವರಾ ವ್ಯಂಗ್ಯವಾಡಿದ್ದಾರೆ. ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಪಾಕಿಸ್ತಾನ ಪ್ರಜೆಯಾಗಿದ್ದರೂ ಲಂಡನ್ನಲ್ಲಿ ಜನಿಸಿದವರು. ಮುಂಬೈನ ಸಿನೆಮಾ ಜಗತ್ತಿಗೆ, ಸಂಗೀತ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಸಾಮಿ, 2015ರಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2016ರಲ್ಲಿ ಭಾರತದ ಪೌರತ್ವ ಪಡೆದರು. ಇದೀಗ 2020ರ ಗಣರಾಜ್ಯೋತ್ಸವದ ವೇಳೆ 118 ಪದ್ಮ ಪ್ರಶಸ್ತಿ ವಿಜೇತರ ಪೈಕಿ ಅದ್ನಾನ್ ಸಾಮಿ ಕೂಡಾ ಒಬ್ಬರಾಗಿದ್ದು, ಅವರಿಗೆ ಪುರಸ್ಕಾರ ಲಭಿಸಿದೆ. ವಿದೇಶಗಳಿಂದ ವಲಸೆ ಬಂದವರಿಗೆ ಪೌರತ್ವ ಕೊಡುವ ಕಾಯ್ದೆ ಭಾರತದಲ್ಲಿ ಈಗಾಗಲೇ ಇದೆ. ಈ ಪ್ರಕಾರವಾಗಿ ಅದ್ನಾನ್ ಸಾಮಿ ಅವರಿಗೆ ಭಾರತದ ಪೌರತ್ವ ನೀಡಿ ಇದೀಗ ಪದ್ಮಪ್ರಶಸ್ತಿಯನ್ನೂ ಕೊಡ್ತಿದ್ದೀರಿ. ಎಲ್ಲ ಕಾನೂನುಗಳೂ ಮೊದಲಿನಿಂದಲೇ ಇವೆ. ಆದ್ರೆ, ಇದೀಗ ತರುತ್ತಿರುವ ಉದ್ದೇಶವೇನು, ಅಗತ್ಯವೇನು ಎಂದು ಸ್ವರಾ ಭಾಸ್ಕರ್ ಪ್ರಶ್ನಿಸಿದ್ದಾರೆ. ಸಿಎಎ ವಿರುದ್ಧ ಹೋರಾಡುವ ನಮ್ಮ ಮೇಲೆ ದಾಳಿ ಮಾಡುತ್ತೀರಿ, ಅದೇ ಸಮಯಕ್ಕೆ ನೀವೇ ಪಾಕಿಸ್ತಾನ ಮೂಲದ ವ್ಯಕ್ತಿಗೆ ಪದ್ಮ ಪ್ರಶಸ್ತಿ ಕೊಡ್ತೀರಿ. ಏಕೆ ಈ ದ್ವಿಮುಖ ನೀತಿ ಎಂದು ಸ್ವರಾ ಪ್ರಶ್ನಿಸಿದ್ದಾರೆ.
from India & World News in Kannada | VK Polls https://ift.tt/2vO9Y1f