ಬಿಎಸ್‌ವೈ ಆಡಿಯೋ ವೈರಲ್‌: ಭೇಟಿಗೆ ಬಂದವರಿಗೆ ಮೊಬೈಲ್‌ ನಿಷೇಧಿಸಿದ್ರು ಸಿಎಂ!

ಬೆಂಗಳೂರು: ಅಕ್ಟೋಬರ್‌ 26ರಂದು ಹುಬ್ಬಳ್ಳಿಯ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಅವರು ಆಪರೇಶನ್‌ ಕಮಲದ ಗುಟ್ಟನ್ನು ರಟ್ಟಾಗಿಸಿದ ಆಡಿಯೋ/ವಿಡಿಯೋ ವೈರಲ್ ಹಿನ್ನೆಲೆ ತಮ್ಮ ಭೇಟಿಗೆ ಬಂದವರಿಗೆ ಮೊಬೈಲ್ ನಿಷೇಧ ಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರು ಬಂದಾಗ ಮೊಬೈಲ್ ತರದಂತೆ ಸೂಚನೆ ನೀಡಿದ್ದಾರೆ. ತಮ್ಮನ್ನು ಭೇಟಿ ನೀಡಲು ಬಂದವರಿಗೆ ಮೊಬೈಲ್‌ ನಿಷೇಧಿಸುವಂತೆ ಸಿಎಂ ಯಡಿಯೂರಪ್ಪ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದು, ಪೊಲೀಸರು ಮೊಬೈಲ್ ನಿಷೇಧದ ಬೋರ್ಡ್ ಹಾಕಿದ್ದಾರೆ. ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ಬಂದವರಿಗೆ ಮೊಬೈಲ್ ಪ್ರವೇಶ ಇಲ್ಲ ಎಂದು ಬೋರ್ಡ್ ಅಳವಡಿಸಲಾಗಿದೆ. ಭೇಟಿ ವೇಳೆ ತಾನು ಏನಾದರೂ ಮಾತಾಡಿದರೆ ಅದನ್ನು ರೆಕಾರ್ಡ್ ಅಥವಾ ಚಿತ್ರೀಕರಣ ಮಾಡಿ ವೈರಲ್ ‌ಮಾಡುತ್ತಾರೆ ಎಂಬ ಕಾರಣಕ್ಕೆ ಮೊಬೈಲ್ ಗೆ ಕಡಿವಾಣ ಹಾಕಲಾಗಿದೆ ಎನ್ನಲಾಗಿದೆ. ವೈರಲ್‌ ಆಗಿರುವ ಬಿಎಸ್‌ ಯಡಿಯೂರಪ್ಪ ಅವರ ಆಡಿಯೋ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಅನರ್ಹ ಶಾಸಕರ ಅರ್ಜಿ ವಿಚಾರಣೆ ವೇಳೆ ತ್ರಿಸದಸ್ಯ ಪೀಠ ಸಿಡಿ ಸ್ವೀಕರಿಸಿದೆ. ಶಾಸಕರು ರಾಜೀನಾಮೆ ನೀಡಲು ಯಾರು ಕಾರಣ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅನರ್ಹ ಶಾಸಕರ ಪ್ರಕರಣದ ತೀರ್ಪಿನ ವೇಳೆ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್‌ ಪರ ವಕೀಲರು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದ್ದು, ಆಡಿಯೋ ಪ್ರಕರಣ ಅನರ್ಹ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.


from India & World News in Kannada | VK Polls https://ift.tt/2C9J8jZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...