ಹೊಸದಿಲ್ಲಿ: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನವೆಂಬರ್ 22ರಿಂದ 26ರ ತನಕ ಕೋಲ್ಕೊತಾದಲ್ಲಿನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಕಡಿಮೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಲು ಧೋನಿಗೆ ಅವಕಾಶ ಮಾಡಿಕೊಡುವಂತೆ ಮುಖ್ಯ ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಬಿಸಿಸಿಐಗೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಬಿಸಿಸಿಐ ಇನ್ನೂ ಸ್ಪಂದಿಸಿಲ್ಲ. ಧೋನಿ ಜುಲೈನಲ್ಲಿಏಕದಿನ ವಿಶ್ವ ಕಪ್ನ ಸೆಮಿಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದಲ್ಲಿಕಾಣಿಸಿಕೊಳ್ಳದಿದ್ದರೂ ಈಗಲೂ ಬಿಸಿಸಿಐನ ವಾರ್ಷಿಕ ಗುತ್ತಿಗೆಗೊಳಪಟ್ಟಿರುವ ಆಟಗಾರನಾಗಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿನಡೆಯಲಿರುವ ಹಗಲು-ರಾತ್ರಿ ಟೆಸ್ಟ್ನಲ್ಲಿಧೋನಿ ವೀಕ್ಷಕ ವಿವರಣೆಧಿಗಾರನಾಗುವ ಸಾಧ್ಯತೆಗಳಿವೆಯೇ ಎಂದು ಅವರಿಗೆ ಹತ್ತಿರವಾಗಿರುವ ಮೂಲಗಳನ್ನು ಪ್ರಶ್ನೆ ಮಾಡಿದಾಗ, 'ಸಾಧ್ಯತೆಗಳಿಲ್ಲ' ಎಂದೇ ಉತ್ತರ ದೊರೆತಿದೆ. ಬಿಸಿಸಿಐನ ಹಾಲಿ ಸಂವಿಧಾನದ ಪ್ರಕಾರ, ಧೋನಿ ವೀಕ್ಷಕ ವಿವರಣೆಗಾರನಾದರೆ ಸ್ವ ಹಿತಾಸಕ್ತಿ ಸಂಘರ್ಷಕ್ಕೊಳಗಾಗಲಿದ್ದಾರೆ. ಯಾವುದೇ ಕ್ರಿಕೆಟಿಗ ಏಕಕಾಲಕ್ಕೆ ಎರಡೆರಡು ಹುದ್ದೆ ಹೊಂದುವಂತಿಲ್ಲ. ಭಾರತ ಹಾಗೂ ಬಾಂಗ್ಲಾದೇಶ ನಡುವಣ ಚೊಚ್ಚಲ ಡೇ-ಟೆಸ್ಟ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಭಾರತ ಪ್ರಧಾನಿ ಹಾಗೂ ಬಾಂಗ್ಲಾದೇಶ ಪ್ರಧಾನಿಗಳು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2CnpCAG