ಭಾರತಕ್ಕೆ ವಿಷಗಾಳಿ ಬಿಡುತ್ತಿರಬಹುದು ಪಾಕಿಸ್ತಾನ : ಉ. ಪ್ರದೇಶ ಬಿಜೆಪಿ ನಾಯಕ ಹೇಳಿಕೆ

ಮೀರಠ್‌: ದಿಲ್ಲಿಯ ವಾಯುಮಾಲಿನ್ಯ ನಿಯಂತ್ರಿಸುವುದು ಹೇಗೆಂದು ತಲೆಕೆಡಿಸಿಕೊಂಡಿರುವ ಈ ಸಂದರ್ಭದಲ್ಲಿ ಬಿಜೆಪಿ ನಾಯಕರೊಬ್ಬರು ವಾಯುಮಾಲಿನ್ಯಕ್ಕೆ ಬೇರೆಯದೇ ಕಾರಣ ತಿಳಿಸಿದ್ದಾರೆ. ಉತ್ತರ ಪ್ರದೇಶದ ಪಿಜೆಪಿ ನಾಯಕ ವಿನೀತ್‌ ಅಗರ್ವಾಲ್ ಶಾರ್ದಾ ಅವರು ದೆಹಲಿ ಮಾಲಿನ್ಯಕ್ಕೆ ಬೇರೆಯೇ ಕಾರಣ ಹೇಳುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಮಿತಿಮೀರಿರುವ ವಾಯುಮಾಲಿನ್ಯಕ್ಕೆ ಮತ್ತು ಚೀನಾಗಳೇ ಕಾರಣ ಎಂದು ಹೇಳುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ. ದೆಹಲಿ ವಾಯುಮಾಲಿನ್ಯಕ್ಕು ಪಾಕಿಸ್ತಾನ, ಚೀನಾಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೋಚಿಸುತ್ತಿದ್ದೀರೇನು? ವಿನೀತ್‌ ಅಗರ್ವಾಲ್ ಅವರು ಸಂಬಂಧ ಕಲ್ಪಿಸಿದ್ದಾರೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗಳೆರಡೂ ಭಾರತಕ್ಕೆ ಬಿಡುಗಡೆ ಮಾಡುತ್ತಿರಬಹುದು. ಹೀಗಾಗಿಯೇ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮೀತಿಮೀರುತ್ತಿದೆ ಎಂದು ಹೇಳಿದ್ದಾರೆ. ನನ್ನ ಪ್ರಕಾರ ಪಾಕಿಸ್ತಾನ ಮತ್ತು ಚೀನಾಗಳೆರಡೂ ಭಾರತದ ಕುರಿತು ಭಯ ಹೊಂದಿವೆ. ಹೀಗಾಗಿ ಅವು ಭಾರತಕ್ಕೆ ವಿಷಗಾಳಿ ಬಿಡುಗಡೆ ಮಾಡಬಹುದಾದ ಸಾಧ್ಯತೆ ಹೆಚ್ಚಿದೆ. ಈ ಕುರಿತು ನಾವು ಖಚಿತಪಡಿಸಿಕೊಳ್ಳಲೇಬೇಕಿದೆ ಎಂದು ಮೀರಠ್‌ನಲ್ಲಿ ಎಎನ್‌ಐಗೆ ತಿಳಿಸಿದ್ದಾರೆ. ಪಾಕಿಸ್ತಾನ ಒಮ್ಮೆಯೂ ಬಾರತದ ವಿರುದ್ಧ ಗೆದ್ದಿಲ್ಲ. ಅದರಲ್ಲೂ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಅಧಿಕಾರ ವಹಿಸಿಕೊಂಡಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಪಾಕ್ ವಿಷಗಾಳಿ ಬಿಡುಗಡೆ ಮಾಡುವಂತಹ ದುಷ್ಕೃತ್ಯದಲ್ಲಿ ತೊಡಗಬಹುದು ಎಂದು ಹೇಳಿದ್ದಾರೆ. ದೆಹಲಿ ಮುಖ್ಯಮಮತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮಾಲಿನ್ಯಕ್ಕೆ ರೈತರು ಕೃಷಿ ತ್ಯಾಜ್ಯ ಸುಡುವುದೇ ಪ್ರಮುಖ ಕಾರಣ ಎನ್ನುತ್ತಿದ್ದಾರೆ. ಕೃಷಿ ದೇಶದ ಬೆನ್ನೆಲುಬು. ಯಾವ ಕಾರಣಕ್ಕೂ ಕೃಷಿಯನ್ನು ಆರೋಪಿಸಬಾರದು ಎಂದು ಟೀಕಿಸಿದ್ದಾರೆ. ಅಲ್ಲದೆ ಮೋದಿ ಮತ್ತು ಅಮಿತ್‌ ಶಾರನ್ನು ಮಹಾಭಾರತದ ಕೃಷ್ಣಾರ್ಜುನರಿಗೆ ಹೋಲಿಸಿದ್ದಾರೆ. ಮೋದಿ ಶ್ರೀಕೃಷ್ಣ ಇದ್ದಂತೆ, ಅಮಿತ್‌ ಶಾ ಅರ್ಜುನ ಇದ್ದಂತೆ. ಇವರಿಬ್ಬರು ಸೇರಿದರೆ, ಯಾವುದೇ ಸಮಸ್ಯೆಯನ್ನಾದರೂ ಪರಿಹರಿಸಬಲ್ಲರು ಎಂದು ವಿನೀತ್‌ ಅಗರ್ವಾಲ್ ತಿಳಿಸಿದ್ದಾರೆ.


from India & World News in Kannada | VK Polls https://ift.tt/32hTMzD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...