ಬೆಂಗಳೂರು: ಕೊರೊನಾ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾನು ಯಾರ ಮದುವೆಗೂ ಹೋಗುವುದಿಲ್ಲ ಎಂದು ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಜನರು ತಪ್ಪು ತಿಳಿದುಕೊಂಡರೂ ಪರವಾಗಿಲ್ಲ ಎಂದರು. ಶಿವಮೊಗ್ಗದ ಜಿಲ್ಲಾ ಸಭಾಂಣದಲ್ಲಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ ಪರಿಸ್ಥಿತಿ ಅವಲೊಕಿಸಲು ಮತ್ತು ಸೊಂಕು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವಿಧ ಗ್ರಾಮ ಪಂಚಾಯತ್ ಗಳ ಅಧಿಕಾರಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಮಾತನಾಡಿದ ಅವರು, ಕೊರೊನಾ ವನ್ನು ನಮ್ಮ ಗ್ರಾಮೀಣ ಭಾಗದಿಂದ ಓಡಿಸಬೇಕು ಅಂದರೆ ಗ್ರಾಮೀಣ ಭಾಗದ ಜನ ಎಲ್ಲರೂ ಸಹಕಾರ ಕೊಡಬೇಕು, ಸಹಕಾರ ಕೊಟ್ಟೆ ಕೊಡತಾರೆ ಆ ನಿಟ್ಟಿನಲ್ಲಿ ಇಡೀ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಗ್ರಾಮ ಪಂಚಾಯತ್ ಗಳಿಗೆ ಚುನಾಯಿತರಾದ ಪದಾಧಿಕಾರಿಗಳು ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಹಾಗೂ ಲಸಿಕೆ ನೀಡುವ ಕುರಿತು ಇನ್ನುಳಿದಂತೆ ಸುವಿವರಾಗಿ ಚರ್ಚಿಸಿದ ಕೊರೊನಾ ವನ್ನು ನಮ್ಮ ಗ್ರಾಮೀಣ ಭಾಗದಿಂದ ಓಡಿಸಬೇಕು ಅಂದರೆ ಗ್ರಾಮೀಣ ಭಾಗದ ಜನ ಎಲ್ಲರೂ ಸಹಕಾರ ಕೊಡಬೇಕು, ಸಹಕಾರ ಕೊಟ್ಟೆ ಕೊಡತಾರೆ ಆ ನಿಟ್ಟಿನಲ್ಲಿ ಇಡೀ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು. ಸಂತೆಗಳು, ಸಭೆ,ಸಮಾರಂಭ ಮತ್ತು ಮದುವೆಗಳು ನಡೆಸಬಾರದು ಮತ್ತು ಯಾವ ಕಾರಣಕ್ಕೂ ಇವುಗಳಿಗೆ ತಾವೆಲ್ಲ ಬೆಂಬಲ ಕೊಡೊಕೆ ಹೊಗಬೇಡಿ, ನಾನೊಂದು ತೀರ್ಮಾಣ ಮಾಡಿದ್ದೀನಿ, ಯಾವ ಮದುವೆಗೂ ಹೋಗಬಾರದೆಂದು ಅವರು ಏನಂದುಕೊಂಡರು ಚಿಂತೆಯಿಲ್ಲ. ಆದಷ್ಟು ಜನ ಜಾತ್ರ ಸೇರುವದನ್ನು ನಿಲ್ಲಿಸಿ ಮದುವೆ ಸಮಾರಂಭಗಳನ್ನು ಮುಂದಕ್ಕೆ ಹಾಕುವಂತೆ ಅವರಿಗೆ ತಿಳಿ ಹೇಳಿ,ನಾವು ಬದುಕೋಣ, ನಾವೆಲ್ಲ ಬದುಕಿದರೆ ಅವೆಲ್ಲ ಸಭೆ, ಸಮಾರಂಭ ಮತ್ತಷ್ಟು ಮಾಡಬಹುದು, ಬದುಕು ಇಲ್ಲ ಅಂದರೆ ಏನೂ ಇರುವುದಿಲ್ಲ ಎಂದರು. ಕೋವಿಡ್ ಬಂದಿರುವವರು ಕೋವಿಡ್ ಕೇರ ಸೆಂಟರ್ ನಲಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಅವರಿಗೆ ಬೇಕಾಗುವ ಬೆಡ್, ಆಕ್ಸಿಜನ್ ಮತ್ತು ಚಿಕಿತ್ಸೆಗೆ ಬೇಕಾದ ಎಲ್ಲ ಸವಲತ್ತುಗಳ ಜೊತೆ ಊಟ, ವಸತಿ ಮತ್ತು ಕುಡಿಯುವ ನೀರು ಉತ್ತಮ ಶೌಚಾಲಯ ಹೀಗೆ ಎಲ್ಲ ಸೌಲಭ್ಯಗಳನ್ನುಅವರಿಗೆ ಉತ್ತಮ ರೀತಿಯಲ್ಲಿ ನೀಡಲು ಕಟ್ಟುನಿಟ್ಟಾದ ಕ್ರಮಕೈಗೊಳ್ಳಲು ತಿಳಿಸಲಾಗಿದೆ ಎಂದು ವಿವರಿಸಿದರು. ತೀರಾ ಅನಿವಾರ್ಯವಾದ ಸ್ಥಿತಿಯಲ್ಲಿರುವ ರೋಗಿಗಳಿಗೆ ಅವಶ್ಯಕವಿದ್ದರೆ ಸುತ್ತಮುತ್ತಲಿರುವ ಆಸ್ಪತ್ರಗಳಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸೇವೆ ತುಂಬಾ ಅವಶ್ಯಕತೆ ಇದೆ ಎಲ್ಲರೂ ಸೇವಾ ಮನೋಭಾವದಿಂದ ಕೋವಿಡ್ ಚಿಕಿತ್ಸೆಗೆ ಸಹಕಾರಿಯಾಗುವಂತೆ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.
from India & World News in Kannada | VK Polls https://ift.tt/3vbKCE6