ಸರ್ಕಾರದ ಹೊಸ ಐಟಿ ನಿಯಮದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್

ಹೊಸದಿಲ್ಲಿ: ಬುಧವಾರದಿಂದ ಜಾರಿಗೆ ಬರುತ್ತಿರುವ ಸರ್ಕಾರದ ಹೊಸ ಐಟಿ ನೀತಿ ವಿರುದ್ಧ ಸಂಸ್ಥೆ ಮೆಟ್ಟಿಲೇರಿದೆ. ಈ ನಿಯಮವು ತನ್ನ ಬಳಕೆದಾರರ ಖಾಸಗಿತನದ ರಕ್ಷಣೆಯನ್ನು ಉಲ್ಲಂಘಿಸಲಿದೆ ಎಂದು ಅದು ಹೇಳಿದೆ. ಹೊಸ ನಿಯಮದ ಪ್ರಕಾರ ತನ್ನ ವೇದಿಕೆಯಲ್ಲಿ ಸಂದೇಶ ಕಳುಹಿಸಿದ ಮೂಲಗಳ ಜಾಡು ಹಿಡಿಯಬೇಕಾಗುತ್ತದೆ. ಇದು ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ ಎಂದು ಮಾಲೀಕತ್ವದ ವಾಟ್ಸಾಪ್ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ. 'ಚಾಟ್‌ಗಳ ಜಾಡು ಪತ್ತೆ ಮಾಡಿ ಎಂದು ಸೂಚಿಸುವುದು ವಾಟ್ಸಾಪ್‌ನಲ್ಲಿ ಕಳುಹಿಸುವ ಪ್ರತಿ ಸಂದೇಶದ ಬೆರಳಚ್ಚಿನ ಗುರುತು ಸಂಗ್ರಹಿಸಿ ಇರಿಸಿ ಎಂದು ಹೇಳುವಂತಾಗಿದೆ. ಇದು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ನಿಯಮವನ್ನು ಉಲ್ಲಂಘಿಸಲಿದೆ ಹಾಗೂ ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಕಡೆಗಣಿಸಿದಂತಾಗಲಿದೆ' ಎಂದು ವಾಟ್ಸಾಪ್ ಹೇಳಿಕೆ ನೀಡಿದೆ. 'ನಮ್ಮ ಬಳಕೆದಾರರ ಖಾಸಗಿತನವನ್ನು ಕಸಿದುಕೊಳ್ಳುವುದನ್ನು ವಿರೋಧಿಸಲು ಅಗತ್ಯವಿರುವ ಜಗತ್ತಿನ ನಾಗರಿಕ ಸಮಾಜ ಹಾಗೂ ಪರಿಣತರನ್ನು ನಾವು ನಿರಂತರವಾಗಿ ಸಂಪರ್ಕಿಸುತ್ತಿರುತ್ತೇವೆ. ಇನ್ನೊಂದೆಡೆ ನಾವು ಜನರನ್ನು ಸುರಕ್ಷಿತವಾಗಿಡುವ ಜತೆಯಲ್ಲಿ ನಮಗೆ ಲಭ್ಯವಿರುವ ಕಾನೂನಾತ್ಮಕ ಮನವಿಗಳಿಗೆ ಸ್ಪಂದಿಸುವ ಪರಿಹಾರಾತ್ಮಕ ಕಾರ್ಯಗಳನ್ನು ಸಹ ಭಾರತ ಸರ್ಕಾರದೊಂದಿಗೆ ಮುಂದುವರಿಸುತ್ತಿದ್ದೇವೆ' ಎಂದು ಅದು ತಿಳಿಸಿದೆ. ಸಾಮಾಜಿಕ ಮಾಧ್ಯಮಗಳು ಅಧಿಕಾರಿಗಳು ಬಯಸಿದ ಸಂದರ್ಭದಲ್ಲಿ ಸಂದೇಶವೊಂದರ ಮೊದಲ ಮೂಲ ಸೃಷ್ಟಿಕರ್ತನನ್ನು ಪತ್ತೆಹಚ್ಚುವುದು ಅಗತ್ಯ ಎಂದು ಐಟಿ ನಿಯಮದಲ್ಲಿ ಹೇಳಲಾಗಿದೆ. ಇದು ಭಾರತ ಸಂವಿಧಾನದ ಅಡಿಯಲ್ಲಿನ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. ವಿರೋಧಾಭಾಸದ ಸಂಗತಿಯೆಂದರೆ, ಕಳೆದ ವರ್ಷದಿಂದ ವಾಟ್ಸಾಪ್ ತನ್ನ ಖಾಸಗಿತನದ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿತ್ತು. ತನ್ನ ಸಂದೇಶಗಳಿಗೆ ಫೇಸ್‌ಬುಕ್ ಪ್ರವೇಶ ನೀಡುವಂತಹ ಬದಲಾವಣೆಗೆ ಅದು ಸಿದ್ಧತೆ ನಡೆಸಿತ್ತು. ಆದರೆ ಇದು ಬಳಕೆದಾರರ ಖಾಸಗಿತನಕ್ಕೆ ಅಡ್ಡಿಯುಂಟುಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಸರ್ಕಾರದ ನಿಯಮದ ವಿರುದ್ಧ ವಾಟ್ಸಾಪ್ ಖಾಸಗಿತನದ ಹಕ್ಕಿನ ಅಸ್ತ್ರ ಪ್ರಯೋಗಿಸುತ್ತಿದೆ.


from India & World News in Kannada | VK Polls https://ift.tt/3flJDLY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...