ಎಂಆರ್‌ಪಿಎಲ್‌ನಿಂದ ತುಳುವರಿಗೆ ಉದ್ಯೋಗ ಅನ್ಯಾಯ: ಸಿಡಿದೆದ್ದೆ ಯುವ ಜನತೆ, ನೇಮಕಾತಿ ಪ್ರಕ್ರಿಯೆ ತಡೆಗೆ ನಳಿನ್‌ ಸೂಚನೆ!

ಮಂಗಳೂರು: ಇತ್ತೀಚೆಗೆ ನಡೆಸಿದ 224 ಉದ್ಯೋಗ ನೇಮಕಾತಿಯಲ್ಲಿ ತುಳುನಾಡಿನ ಉದ್ಯೋಗಾಕಾಂಕ್ಷಿಗಳಿಗೆ ಮತ್ತೆ ಅನ್ಯಾಯ ಮಾಡಿದೆ. ಒಟ್ಟು ಉದ್ಯೋಗದ ಪೈಕಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೇವಲ ನಾಲ್ಕು ಜನರಿಗೆ ಉದ್ಯೋಗ ನೀಡಲಾಗಿದೆ. 2019ರ ಅ.11ರಂದು ಉದ್ಯೋಗ ನೇಮಕಾತಿಗೆ ಕಂಪನಿಯು ಆನ್‌ಲೈನ್‌ ಅರ್ಜಿಗಳನ್ನು ಆಹ್ವಾನಿಸಿತ್ತು. ನ.9ರ ವರೆಗೆ ಅರ್ಜಿ ಸ್ವೀಕರಿಸಲಾಗಿತ್ತು. ಆ ಸಂದರ್ಭದಲ್ಲೇ ಸ್ಥಳೀಯರಿಗೆ ಶೇ.80ರರಷ್ಟು ಉದ್ಯೋಗ ಮೀಸಲಿಡಬೇಕು ಎಂದು ಆಗ್ರಹಿಸಿ ಹೋರಾಟಗಳು ನಡೆದಿತ್ತು. ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಎಂಆರ್‌ಪಿಎಲ್‌ಗೆ ನೋಟಿಸ್‌ ನೀಡಿದ್ದರು. ಕರಾವಳಿಯಿಂದಲೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಎಂಆರ್‌ಪಿಎಲ್‌ ಮುತುವರ್ಜಿ ವಹಿಸಿಲ್ಲ. ಒಂದೂವರೆ ವರ್ಷದ ಹಿಂದೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಈಗ ಕಂಪನಿ ಪೂರ್ತಿಗೊಳಿಸಿದೆ. ಆದರೆ, ತುಳುನಾಡಿನ ಉದ್ಯೋಗಾಕಾಂಕ್ಷಿಗಳ ಕನಸು ಭಗ್ನಗೊಂಡಿದೆ. ಒಟ್ಟು 224 ಉದ್ಯೋಗಗಳ ಪೈಕಿ ಬಹುತೇಕ 59 ಮಂದಿ ಉತ್ತರ ಪ್ರದೇಶ ಯುವಕರ ಪಾಲಾಗಿದ್ದರೆ, ಬಿಹಾರದ 39 ಮಂದಿಗೆ ಕೆಲಸ ಸಿಕ್ಕಿದೆ. ಉಳಿದಂತೆ ಮಹಾರಾಷ್ಟ್ರ ದಿಂದ 10 ಮಂದಿ, ಪಶ್ಚಿಮ ಬಂಗಾಳದ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ. ಆದರೆ, ಇಡೀ ಕರ್ನಾಟಕದಿಂದ ಕೆಲಸ ಸಿಕ್ಕಿರುವುದು ಕೇವಲ 13 ಮಂದಿಗೆ. ಅವರಲ್ಲಿ ನಾಲ್ಕು ಮಂದಿ ಮಾತ್ರ ದ.ಕ., ಉಡುಪಿ ಜಿಲ್ಲೆಯವರು.ಎಂಆರ್‌ಪಿಎಲ್‌ ಕಂಪನಿಗೆ ಈಗಾಗಲೇ ತುಳುನಾಡಿನ ರೈತರು ಸಾವಿರಾರು ಎಕರೆ ಫಲವತ್ತಾದ ಜಮೀನು ಬಿಟ್ಟುಕೊಟ್ಟಿದ್ದಾರೆ. ಕಂಪನಿ ಆರಂಭವಾಗುವಾಗ ನಡೆದ ಪಕ್ಷಾತೀತ ಹೋರಾಟದ ಸಂದರ್ಭ ಸ್ಥಳೀಯರಿಗೆ ಗರಿಷ್ಟ ಉದ್ಯೋಗ ಕಲ್ಪಿಸಿಕೊಡುವುದಾಗಿ ಕಂಪನಿ ಭರವಸೆ ನೀಡಿತ್ತು. ಆದರೆ, ಪ್ರತಿಬಾರಿಯೂ ಸ್ಥಳೀಯರಿಗೆ, ಕನ್ನಡಿಗರಿಗೆ ಅನ್ಯಾಯ ಆಗುತ್ತಲೇ ಇದೆ. ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವ ಕೂಗು ಕೇಳಿ ಬಂದಿದೆ. ನೇಮಕಾತಿ ರದ್ದಾಗಲಿ!ಉದ್ಯೋಗಗಳಲ್ಲಿಕರ್ನಾಟಕಕ್ಕೆ 13, ಉಡುಪಿ, ದಕ್ಷಿಣ ಕನ್ಬಡಕ್ಕೆ 4 ಮಾತ್ರ !. ಯುಪಿಗೆ 58, ಬಿಹಾರಕ್ಕೆ 39 ಇಂತಹ ಘೋರ ಅನ್ಯಾಯವನ್ನು ಒಪ್ಪಿಕೊಳ್ಳಬೇಕೆ? ಹಾಗಾಗಿ ಈ ನೇಮಕಾತಿ ಪ್ರಕ್ರಿಯೆ ರದ್ದಾಗಲಿ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ. ಸ್ಥಳೀಯರಿಗೆ ಶೇ.80 ಉದ್ಯೋಗ ಆದ್ಯತೆಯೊಂದಿಗೆ ಹೊಸದಾಗಿ ನೇಮಕಾತಿ ನಡೆಯಲಿ, ಎಂಆರ್‌ಪಿಎಲ್‌ನಿಂದ ನಡೆದಿರುವ ಅನ್ಯಾಯಕ್ಕೆ ನೈತಿಕ ಹೊಣೆ ಹೊತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌, ತಳುನಾಡಿನ ಬಿಜೆಪಿಯ 13 ಶಾಸಕರು ರಾಜಿನಾಮೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡ ಪ್ರತಿಭಟನೆ! ಇನ್ನು ಎಂರ್‌ಪಿಎಲ್‌ನಿಂದ ತುಳುನಾಡಿನ ಯುವಕರಿಗೆ ಆದಂತಹ ಮೋಸಕ್ಕೆ ಟ್ವಿಟ್ಟರ್‌ ಸೇರಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಅನೇಕ ಯುವಕರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳನ್ನು ಈ ಸಂಬಂಧ ಪ್ರಶ್ನಿಸಿದ್ದಾರೆ. ಅಲ್ಲದೇ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ. ವಿವಿಧ ನಾಯಕರಿಂದ ಪ್ರತಿಭಟನೆಯ ಎಚ್ಚರಿಕೆ! ಎಂಆರ್‌ಪಿಎಲ್‌ ಸ್ಥಾಪನೆಗೊಂಡಿರುವ ಸಂದರ್ಭ ಶೇ.50ರಷ್ಟು ಸ್ಥಳೀಯರಿಗೆ ಮತ್ತು ಉಳಿದ ಶೇ.50ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತಿನೊಂದಿಗೆ ನಮ್ಮ ಸ್ಥಳ ಬಿಟ್ಟುಕೊಟ್ಟಿದ್ದು, ಸ್ಥಳೀಯರ ತ್ಯಾಗದ ಫಲವಾಗಿ ಎಂಆರ್‌ಪಿಎಲ್‌ ಆಸ್ತಿತ್ವಕ್ಕೆ ಬಂದಿದೆ. ಆದರೆ ಈಗ ಉದ್ಯೋಗ ನೀಡುವಾಗ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಶೇ.50 ರಷ್ಟು ಸ್ಥಳೀಯವಾಗಿ ನೀಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಐವನ್‌ ಡಿಸೋಜ ಎಚ್ಚರಿಸಿದ್ದಾರೆ. ಇನ್ನು ಮಾಜಿ ಶಾಸಕ ಬಿ.ಎ. ಮೊಹಿಯುದ್ದೀನ್‌ ಬಾವಾ ಕೂಡ ಇದೇ ರೀತಿ ಆಗ್ರಹಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ತಡೆಗೆ ನಳಿನ್‌ ಸೂಚನೆ ಇನ್ನು ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರಿಗೆ ಸೂಚಿಸಿದ್ದಾರೆ.ಕರ್ನಾಟಕ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಶನಿವಾರ ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ ಅನ್ಯಾಯದ ಬಗ್ಗೆ ಎಂಆರ್‌ಪಿಎಲ್‌ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ನೇಮಕಾತಿಯನ್ನು ತಡೆಹಿಡಿಯಬೇಕು. ಮುಂದಿನ ನೇಮಕಾತಿ ಸಂದರ್ಭ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಸೂಚಿಸಲಾಯಿತು. ನೇಮಕಾತಿಯನ್ನು ತಡೆಹಿಡಿಯುವುದಾಗಿ ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕರು ಸಭೆಗೆ ತಿಳಿಸಿದರು.


from India & World News in Kannada | VK Polls https://ift.tt/3oMbiJo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...