ಹೊಸದಿಲ್ಲಿ: ಪ್ರಧಾನಿ ನೇತೃತ್ವದ ಸರ್ಕಾರದ ಏಳನೇ ವರ್ಷಾಚರಣೆಯ ಪ್ರಯುಕ್ತ ವಿವಿಧ ಯೋಜನೆಗಳನ್ನು ರೂಪಿಸಿದೆ. ಕೋವಿಡ್ ಸಾಂಕ್ರಾಮಿಕದ ನಡುವೆ ಸರ್ಕಾರ ಎದುರಿಸುತ್ತಿರುವ ಟೀಕಾಪ್ರಹಾರಗಳನ್ನು ಎದುರಿಸಲು ಮತ್ತು ಕಳೆದುಕೊಳ್ಳುತ್ತಿರುವ ವರ್ಚಸ್ಸನ್ನು ಮರಳಿ ಪಡೆಯಲು ಬಿಜೆಪಿ ಮುಂದಾಗಿದೆ. ಬಿಜೆಪಿಯು 2014ರ ಮೇ 30ರಂದು ಮೊದಲ ಬಾರಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಈಗ ಅದು ತನ್ನ ಏಳನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕೋವಿಡ್ ಸಂಬಂಧಿ ನೆರವುಗಳನ್ನು ಒದಗಿಸಲು ಒಂದು ಲಕ್ಷ ಗ್ರಾಮಗಳನ್ನು ತಲುಪುವ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರಲ್ಲಿ ಗ್ರಾಮಸ್ಥರಿಗೆ ದಿನಸಿಗಳು, ಸ್ಯಾನಿಟೈಸರ್, ಮಾಸ್ಕ್ ಮತ್ತು ಆಕ್ಸಿಮೀಟರ್ಗಳಂತಹ ಸಾಮಗ್ರಿಗಳನ್ನು ನೀಡುವುದು ಸೇರಿದೆ. ಕೇಂದ್ರದ ಸಚಿವರುಗಳಿಗೆ ಪಕ್ಷದಿಂದ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದ್ದು, ಪ್ರತಿಯೊಬ್ಬರೂ ತಲಾ ಎರಡು ಗ್ರಾಮಗಳನ್ನು ಸಂಪರ್ಕಿಸಿ ಅವರಿಗೆ ನೆರವು ನೀಡಬೇಕಿದೆ. ಅವರಿಗೆ ಖುದ್ದು ಭೇಟಿ ನೀಡಲು ಸಾಧ್ಯವಾಗದೆ ಇದ್ದರೆ, ವಿಡಿಯೋ ಸಭೆಗಳ ಮೂಲಕವಾದರೂ ಅಲ್ಲಿನ ಚಟುವಟಿಕೆಗಳ ಪರಿಶೀಲನೆ ನಡೆಸಬೇಕಿದೆ. ಜತೆಗೆ ದೇಶದಾದ್ಯಂತ 50,000 ರಕ್ತದಾನ ಶಿಬಿರಗಳನ್ನು ಆಯೋಜಿಸಲು ಬಿಜೆಪಿ ಆಲೋಚಿಸುತ್ತಿದೆ. ಈ ಸಂಬಂಧ ಸೋಮವಾರ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ , ಪಕ್ಷದ ಯೋಜನೆಗಳನ್ನು ವಿವರಿಸಿದ್ದಾರೆ. ಕೋವಿಡ್ 19ರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಮಾಡಲು ಸಾಮೂಹಿಕ ಪ್ರಯತ್ನದ ಅಗತ್ಯದ ಬಗ್ಗೆ ಪಕ್ಷದ ಸಂಸದರ ಜತೆ ನಡ್ಡಾ ಮಾತನಾಡುತ್ತಿದ್ದಾರೆ. 'ಪಕ್ಷದ ಕಾರ್ಯಕರ್ತರು ಸಮಾಜದ ಸೇವೆಗಾಗಿ ತಮ್ಮನ್ನು ಮುಡಿಪಾಗಿಡಬೇಕು ಹಾಗೂ ಏಳು ವರ್ಷದಿಂದ ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಜನರಿಗೆ ಧನ್ಯವಾದ ಸಲ್ಲಿಸಬೇಕು' ಎಂದು ಕಳೆದ ವಾರ ಜೆಪಿ ನಡ್ಡಾ ರಾಜ್ಯ ಘಟಕಗಳಿಗೆ ಪತ್ರ ಬರೆದಿದ್ದರು. ಕೊರೊನಾ ವೈರಸ್ ಹಾವಳಿ ಆರಂಭವಾದ ಬಳಿಕ ಸರ್ಕಾರದ ಕೆಲವು ನಿರ್ಧಾರಗಳು ಟೀಕೆಗೆ ಒಳಗಾಗಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಜನರನ್ನು ತಲುಪುವುದು ಬಿಜೆಪಿಯ ಗುರಿಯಾಗಿದೆ.
from India & World News in Kannada | VK Polls https://ift.tt/3hYyqmn