ಕಫ್ರ್ಯೂ ವೇಳೆ ಸಾರ್ವಜನಿಕರು ಓಡಾಡುವಂತಿಲ್ಲ, ಮದುವೆಗೆ ಈ ನಿಯಮ ಪಾಲಿಸಿ: ದ.ಕ ಜಿಲ್ಲಾಧಿಕಾರಿ

ಮಂಗಳೂರು: ಜಿಲ್ಲೆಯಲ್ಲಿ ಏ.24, 25ರ ವೀಕೆಂಡ್‌ ಸಂದರ್ಭದಲ್ಲಿ ನಿಗದಿತ ಮದುವೆ ಸಮಾರಂಭ ಬಿಟ್ಟು, ಬೇರೆಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಮದುವೆ ಸಮಾರಂಭಗಳಿಗೆ 50 ಮಂದಿ ಮಾತ್ರ ಸೇರಬಹುದಾಗಿದ್ದು, ಅದಕ್ಕೂ ಪೂರ್ವಭಾವಿಯಾಗಿ ಅನುಮತಿ ಪಡೆಯುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಮದುವೆ ಆಯೋಜಿಸುವವರು ಮಂಗಳೂರಿನಲ್ಲಾದರೆ ಪಾಲಿಕೆ ಆಯುಕ್ತರು, ಬೇರೆ ನಗರಗಳಲ್ಲಾದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಮುಖ್ಯಸ್ಥರು ಹಾಗೂ ಗ್ರಾಮಗಳಲ್ಲಿ ಪಿಡಿಒಗಳಿಂದ ಆಹ್ವಾನಿತರ ಸಂಖ್ಯೆ ನೀಡಿ ಅನುಮತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. ಮದುವೆಯಲ್ಲಿ ಭಾಗವಹಿಸುವ 50 ಮಂದಿಯನ್ನು ಒಳಗೊಂಡ ಅತಿಥಿ ಪಟ್ಟಿ (ಗೆಸ್ಟ್‌ ಲಿಸ್ಟ್‌)ಯನ್ನು ಅಧಿಕಾರಿಗಳಿಗೆ ಕೊಡಬೇಕು. ಅತಿಥಿ ಪಟ್ಟಿಯಲ್ಲಿರುವವರು ಅನುಮತಿ ಪತ್ರದ ಪ್ರತಿ(ಮೊಬೈಲ್‌ನಲ್ಲಿತೋರಿಸಿದರೆ ಸಾಕು), ಮದುವೆ ಆಮಂತ್ರಣ ಪತ್ರಿಕೆ ಹಾಗೂ ತಮ್ಮ ಪೋಟೊ ಇರುವ ಗುರುತಿನ ಚೀಟಿ (ಆಧಾರ್‌ ಕಾರ್ಡ್‌, ಪಾನ್‌ಕಾರ್ಡ್‌, ವಾಹನ ಚಾಲನಾ ಪರವಾನಗಿ)ಯನ್ನು ಕಫ್ರ್ಯೂ ಸಂದರ್ಭದಲ್ಲಿ ಸಂಚರಿಸುವ ವೇಳೆ ತಪಾಸಣಾ ಅಧಿಕಾರಿಗಳೆದುರು ಹಾಜರುಪಡಿಸಬೇಕು. ಪಟ್ಟಿಯಲ್ಲಿಇಲ್ಲದವರಿಗೆ ಅಥವಾ ಅದೇ ಹೆಸರಿನ ಬೇರೊಬ್ಬರಿಗೆ ಸಂಚಾರಕ್ಕೆ ಅಥವಾ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂದರು. ಧಾರ್ಮಿಕ ಕೇಂದ್ರ ಬಂದ್‌! ಬುಧವಾರ ರಾತ್ರಿಯಿಂದ ಎಲ್ಲ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಹಾಗೂ ಪೂಜಾ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗಳು ದೈನಂದಿನ ಪ್ರಾರ್ಥನಾ ವಿಧಿಗಳನ್ನು ಯಾವುದೇ ಭಕ್ತರಿಲ್ಲದೆ ನಿರ್ವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಅನಗತ್ಯ ಪ್ರಯಾಣ ಸಲ್ಲವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಸಂದರ್ಭ ಸಂಪೂರ್ಣ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಆದೇಶಿಸಿದ್ದಾರೆ. ಏ.23ರ ರಾತ್ರಿ 9ರಿಂದ ಏ.26ರ ಬೆಳಗ್ಗೆ 6ರ ವರೆಗೆ ಹಾಗೂ ಏ.30ರ ರಾತ್ರಿ 9ರಿಂದ ಮೇ 3ರ ಬೆಳಗ್ಗೆ 6ರ ವರೆಗೆ ಪೂರ್ಣ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಸರಕಾರ ಹೊರಡಿಸಿದ ಆದೇಶದಂತೆ ಅಗತ್ಯ, ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ರೀತಿಯ ಸಾರ್ವಜನಿಕರ ಸಂಚಾರಕ್ಕೆ ಅನುಮತಿ ಇಲ್ಲ. ಇದೇ ವೇಳೆ ಮೇ 4ರ ವರೆಗೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಈ ಅವಧಿಯಲ್ಲೂ ಸಂಪೂರ್ಣ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದ್ದಾರೆ. ವೀಕೆಂಡ್‌ ಕಫ್ರ್ಯೂ ಸಂದರ್ಭದಲ್ಲಿ ಬೆಳಗ್ಗೆ 6ರಿಂದ 10 ಗಂಟೆವರೆಗೆ ಹಾಲು, ದಿನಸಿ, ತರಕಾರಿ, ಮೀನು, ಮಾಂಸ ಅಂಗಡಿಗಳು ತೆರೆದಿರುತ್ತವೆ. ಸಾರ್ವಜನಿಕರಿಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ತರಲೆಂದು ಮಂಗಳೂರಿನವರು ಸುರತ್ಕಲ್‌, ಉಳ್ಳಾಲ ಅಥವಾ ಬೇರೆಡೆಗೆ ವಾಹನಗಳಲ್ಲಿ ಅನಗತ್ಯ ಸಂಚಾರ ಬೆಳೆಸಿದರೆ ಕ್ರಮ ಕೈಗೊಳ್ಳುತ್ತೇವೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಮನೆಯ ಅಕ್ಕಪಕ್ಕದಲ್ಲೇ ಸಿಗುವುದರಿಂದ ಸಬೂಬು ಹೇಳಿಕೊಂಡು ತಿರುಗಾಡುವುದು ಬೇಡ. ಯಾವ ಉದ್ದೇಶಕ್ಕೆ ಪಾಸ್‌ ಪಡೆಯುತ್ತೀರಾ ಅದಕ್ಕೆ ಮಾತ್ರ ಬಳಸಿಕೊಂಡು ಸಹಕರಿಸಬೇಕು ಎಂದು ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಹೇಳಿದರು.


from India & World News in Kannada | VK Polls https://ift.tt/3elhJOB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...