: ಸಚಿವ ಹಾಗೂ ಮಾಜಿ ಸಿಎಂ ಇಬ್ಬರು ಮದ್ದಾನೆಗಳಿದ್ದಂತೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಚಿವ , ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಎರಡು ಮದ್ದಾನೆಗಳಿದ್ದಂತೆ. ಮದ್ದಾನೆಗಳು ಗುದ್ದಾಡುವ ವೇಳೆಯಲ್ಲಿ ಗುಬ್ಬಿ ಬುದ್ಧಿವಾದ ಹೇಳಲು ಸಾಧ್ಯವಾ? ಇಬ್ಬರು ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು. ಇನ್ನು ಅಂಜನಾದ್ರಿ ಬೆಟ್ಟದಲ್ಲಿ ಐವರು ಸಚಿವರ ನೇತೃತ್ವದಲ್ಲಿ ಅಭಿವೃದ್ಧಿ ಕುರಿತಂತೆ ಸಭೆ ನಡೆಯಬೇಕಿತ್ತು. ಆದರೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಕೋವಿಡ್ ಬಂದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿದೆ. ಅಂಜನಾದ್ರಿ ಕುರಿತು ಟಿಟಿಡಿ ಹೇಳಿಕೆಗೆ ಉತ್ತರ ನೋಡಬೇಕಿಲ್ಲ. ಕೊಪ್ಪಳದ ಅಂಜನಾದ್ರಿಯಲ್ಲೇ ಹನುಮ ಜನಿಸಿದ್ದಾನೆ ಎಂದು ಹೇಳಿದರು. ಇನ್ನು 2010-11 ನೇ ಸಾಲಿನಲ್ಲಿ ಮಂಜೂರಾದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದ ಬಿ.ಸಿ ಪಾಟೀಲ್, ಆದ್ದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಕರೆದುಕೊಂಡು ಕಾಮಗಾರಿಗಳನ್ನು ವೀಕ್ಷಿಸಲಾಗುತ್ತಿದೆ ಎಂದರು. ಇದೇ ವೇಳೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದ ಕೆರೆ ಅಭಿವೃದ್ಧಿಗೊಳಿಸುತ್ತಿದ್ದಾರೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಸುಮಾರು 240 ಎಕರೆ ಸ್ವಚ್ಛಗೊಳಿಸುತ್ತಿದ್ದಾರೆ. ಶ್ರೀಗಳಿಂದ ದೊಡ್ಡ ಕೆಲಸ ನಡೆಯುತ್ತಿದೆ ಎಂದರು. ಇನ್ನು ಎಸ್ಸೆಸ್ಸೆಲ್ಸಿ ಮುಗಿದವರಿಗೆ ಕೃಷಿ ಮಿತ್ರ ನೇಮಕಾತಿಗೆ ಸಂಬಂಧಿಸಿದಂತೆ ಕೋವಿಡ್ ಬಂದ ಹಿನ್ನೆಲೆಯಲ್ಲಿ ಸ್ಥಗಿತವಾಗಿದೆ. ಎರಡನೇ ಅಲೆ ಆರಂಭವಾಗಿದ್ದು ಜನರ ಸಹಕಾರ ನಿಯಂತ್ರಣಕ್ಕೆ ಸಹಕಾರ ಬೇಕು. ಉಪ ಚುನಾವಣೆಯ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಸ್ಪಷ್ಟವಾಗಿದೆ ಎಂದು ಪಾಟೀಲ್ ಹೇಳಿದರು.
from India & World News in Kannada | VK Polls https://ift.tt/3uS6804