ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ತಮ್ಮ ಚೊಚ್ಚಲ ಶತಕ ಸಿಡಿಸಿ ತಂಡದ ಆರಂಭಿಕ ಬ್ಯಾಟ್ಸ್ಮನ್ ಅವರನ್ನು ಶ್ಲಾಘಿಸಿದ ನಾಯಕ , ಎಡಗೈ ಆಟಗಾರ 'ಅದ್ಭುತ ಪ್ರತಿಭೆ' ಹಾಗೂ 'ಭವಿಷ್ಯದ ಸ್ಟಾರ್ ಆಟಗಾರರಲ್ಲಿ ಒಬ್ಬರು' ಎಂದು ಮುಕ್ತಕಂಠದಿಂದ ಗುಣಗಾನ ಮಾಡಿದರು. ರಾಜಸ್ಥಾನ್ ರಾಯಲ್ಸ್ ಎದುರು ಸ್ಪೋಟಕ ಬ್ಯಾಟಿಂಗ್ ಮಾಡಿದ ದೇವದತ್ ಪಡಿಕ್ಕಲ್ ಕೇವಲ 52 ಎಸೆತಗಳಲ್ಲಿ ಅಜೇಯ 101 ರನ್ ಚೆಚ್ಚಿದರು ಹಾಗೂ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಮುರಿಯದ ಮೊದಲನೇ ವಿಕೆಟ್ಗೆ 181 ರನ್ ಜೊತೆಯಾಟವಾಡಿದರು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 10 ವಿಕೆಟ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, 'ಇದು ಅಸಾಧಾರಣ ಇನಿಂಗ್ಸ್. ಕೊನೆಯ ವರ್ಷದ ಆಡಿದ ರೀತಿ ದೇವದತ್ ಪಡಿಕ್ಕಲ್ ಈ ಆವೃತ್ತಿಯಲ್ಲಿ ಮೊದಲನೇ ಬಾರಿ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. 40 ರಿಂದ 50 ರನ್ಗಳ ಬಳಿಕ ಆಟದ ವೇಗವನ್ನು ಹೆಚ್ಚಿಸುವ ಬಗ್ಗೆ ನಮ್ಮ ನಡುವೆ ಮಾತುಕತೆ ನಡೆದಿತ್ತು," ಎಂದು ಹೇಳಿದರು. "ಅವರು ಅದ್ಭುತ ಪ್ರತೆಭೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಹಾಗೂ ಭವಿಷ್ಯದ ಆಟಗಾರರಲ್ಲಿ ದೇವದತ್ ಪಡಿಕ್ಕಲ್ ಕೂಡ ಒಬ್ಬರು. ಇದೀಗ ನಾನು ಅತ್ಯುತ್ತಮ ಸ್ಥಾನದಲ್ಲಿ ಕುಳಿತಿದ್ದೇನೆ," ಎಂದು ಹೇಳುವ ಮೂಲಕ ಕರ್ನಾಟಕ ಆಟಗಾರನನ್ನು ಶ್ಲಾಘಿಸುವುದನ್ನು ವಿರಾಟ್ ಕೊಹ್ಲಿ ಮುಂದುವರಿಸಿದರು. "ಇಂದಿನ ರಾತ್ರಿ ನನ್ನ ಪಾತ್ರ ವಿಭಿನ್ನವಾಗಿತ್ತು ಹಾಗೂ ನಾನು ಕ್ರೀಸ್ನಲ್ಲಿ ದೀಘ್ರ ಸಮಯ ಕಳೆಯಬೇಕಾಗಿತ್ತು. ಕೊನೆಯಲ್ಲಿ ನನ್ನ ನೈಜ ಆಟವನ್ನು ಪ್ರದರ್ಶಿಸಿದ್ದೇನೆ ಹಾಗೂ ಅದರಂತೆ ಪಿಚ್ ಕೂಡ ಅತ್ಯುತ್ತಮವಾಗಿತ್ತು. ನಾವಿಬ್ಬರೂ ಶತಕದ ಬಗ್ಗೆ ಮಾತನಾಡಿಕೊಂಡಿದ್ದೆವು. ಪಂದ್ಯವನ್ನು ನೀವು ಮುಗಿಸಿ, ಇಂತಹ ಇನಿಂಗ್ಸ್ಗಳಲ್ಲಿ ಮುಂದೆ ಇನ್ನು ಬರಲಿವೆ ಎಂದು ಪಡಿಕ್ಕಲ್ ನನಗೆ ಹೇಳಿದರು. ಅದಕ್ಕೆ ನಾನು, 'ಮೊದಲನೇ ಶತಕ ಸಿಡಿಸಿದ ಬಳಿಕ ಈ ಮಾತು ನನಗೆ ಹೇಳಿ ಎಂದೆ," ಎಂದು ಕೊಹ್ಲಿ ಹೇಳಿದರು. "ಅವರು (ಪಡಿಕ್ಕಲ್) ಇಲ್ಲಿಂದ ಅತ್ಯುತ್ತಮ ಅಡಿಪಾಯ ಹಾಕಬೇಕು ಹಾಗೂ ತಂಡಕ್ಕೆ ನಿಜವಾಗಿಯೂ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಇದು ಯುವ ಆಟಗಾರನ ದೋಷರಹಿತ ಇನ್ನಿಂಗ್ಸ್ ಆಗಿದ್ದು, ಸೆಂಚುರಿಗೆ ಅವರು ನಿಜವಾಗಿಯೂ ಅರ್ಹರು," ಎಂದು ವಿರಾಟ್ ಕೊಹ್ಲಿ ಶ್ಲಾಘಿಸಿದರು. ಬ್ಯಾಟ್ಸ್ಮನ್ಗಳ ಸ್ನೇಹಿ ವಿಕೆಟ್ನಲ್ಲಿಯೂ ರಾಜಸ್ಥಾನ್ ರಾಯಲ್ಸ್ ತಂಡವನ್ನು 177 ರನ್ಗಳಿಗೆ ಕಟ್ಟಿ ಹಾಕಿದ ಆರ್ಸಿಬಿ ಬೌಲರ್ಗಳನ್ನು ನಾಯಕ ವಿರಾಟ್ ಕೊಹ್ಲಿ ಗುಣಗಾನ ಮಾಡಿದರು. "ನಮ್ಮ ಬೌಲಿಂಗ್ ವಿಭಾಗದಲ್ಲಿ ಹೆಸರುಗಳು ಎದ್ದು ಕಾಣುವ ಬೌಲರ್ಗಳಿಲ್ಲ. ಆದರೆ ನಮ್ಮಲ್ಲಿ ಪರಿಣಾಮಕಾರಿ ಬೌಲರ್ಗಳಿದ್ದಾರೆ. ಪ್ರತಿ ದಿನ ತಂಡಕ್ಕೆ ಅವರು ಏನು ಬೇಕಾದರೂ ಮಾಡುತ್ತಾರೆ. ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಡೆತ್ ಓವರ್ಗಳಲ್ಲಿ ನಮ್ಮ ಬೌಲರ್ಗಳು ಅದ್ಭುತ ಬೌಲಿಂಗ್ ಮಾಡಿದ್ದಾರೆ. 30 ರಿಂದ 35 ರನ್ಗಳಿಂದ ನಾವು ಅವರನ್ನು (ರಾಜಸ್ಥಾನ್) ನಿಯಂತ್ರಿಸಿದ್ದೇವೆ. ದೇವ್ ಇನಿಂಗ್ಸ್ ಮಾತ್ರ ಅಸಾಧಾರಣವಾದದ್ದು, ಆದರೆ ನಮ್ಮ ಬೌಲಿಂಗ್ ಆಕ್ರಮಣಕಾರಿಯಾಗಿತ್ತು ಹಾಗೂ ಆಶಾದಾಯಕವಾಗಿರವುದು ಕೀ ಪಾಯಿಂಟ್," ಎಂದು ವಿರಾಟ್ ಕೊಹ್ಲಿ ಹೇಳಿದರು. ಸಂಕ್ಷಿಪ್ತ ಸ್ಕೋರ್ ರಾಜಸ್ಥಾನ್ ರಾಯಲ್ಸ್: 20 ಓವರ್ಗಳಲ್ಲಿ 9 ವಿಕೆಟ್ಗೆ 177 ರನ್ (ಸಂಜು ಸ್ಯಾಮ್ಸನ್ 21, ಶಿವಂ ದುಬೇ 46, ರಿಯಾನ್ ಪರಾಗ್ 25, ರಾಹುಲ್ ತೆವಾಟಿಯಾ 40: ಮೊಹಮ್ಮದ್ ಸಿರಾಜ್ 27ಕ್ಕೆ 3, ಹರ್ಷಲ್ ಪಟೇಲ್ 47ಕ್ಕೆ 3). ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 181 ರನ್ (ವಿರಾಟ್ ಕೊಹ್ಲಿ ಅಜೇಯ 72, ದೇವದತ್ ಪಡಿಕ್ಕಲ್ ಅಜೇಯ 101).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RYie9V