ಮೊಹಮ್ಮದ್‌ ನಲಪಾಡ್‌ ಗ್ಯಾಂಗ್‌ನಿಂದ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆಗೆ ಕಿರುಕುಳ; ದೂರು ದಾಖಲು

ಬೆಂಗಳೂರು: ಸದಾ ಒಂದಲ್ಲೊಂದು ವಿವಾದಗಳಿಂದ ಕುಖ್ಯಾತಿ ಗಳಿಸಿರುವ ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಕೆ.ಆರ್‌.ಭವ್ಯಾ ದೂರು ನೀಡಿದ್ದಾರೆ. ಕೋವಿಡ್‌ನಿಂದ ಬಳಲುತ್ತಿರುವ ಜನರಿಗೆ ಔಷಧ, ಬೆಡ್‌, ಪ್ಲಾಸ್ಮಾಗೆ ನೆರವಾಗಲು ರಾಜ್ಯ ಯುವ ಕಾಂಗ್ರೆಸ್‌ ವತಿಯಿಂದ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಏ.21ರಂದು ಕಚೇರಿಯಲ್ಲಿ ವಾರ್‌ರೂಮ್‌ ಸ್ಥಾಪಿಸುತ್ತಿದ್ದಾಗ ನುಗ್ಗಿದ ಮೊಹಮ್ಮದ್‌ ನಲಪಾಡ್‌, ಭಾಸ್ಕರ್‌, ಗೋವರ್ಧನ್‌ ಸೇರಿದಂತೆ ಇನ್ನಿತರ ಸುಮಾರು 15 ಜನರು ಬೈದು ಹಲ್ಲೆ ಮಾಡುವವರಂತೆ ಕೈ ತೋರಿಸಿ ಬೆದರಿಕೆ ಹಾಕಿದ್ದಾರೆ. ‘ಇದೆಲ್ಲಾ ನೀವು ಹೇಗೆ ಮಾಡುತ್ತೀರಿ, ನಾನೂ ನೋಡುತ್ತೇನೆ’ ಎಂದು ಏಕವಚನದಲ್ಲಿ ಮಾತನಾಡಿ ನಿಂದಿಸಿದ್ದಾರೆ ಎಂದು ಭವ್ಯಾ ಆರೋಪಿಸಿದ್ದಾರೆ. ಅಲ್ಲದೇ ಅವರು ಹೋದ ಬಳಿಕ ಮತ್ತೆ ಕೆಲವರು ಬಂದು ಬೆದರಿಕೆ ಹಾಕಿದ್ದಾರೆ ಎಂದಿರುವ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಭವ್ಯಾ, 'ನಾನು ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದೇನೆ ಎಂದು ಅವಹೇಳನಕಾರಿಯಾಗಿ ನಡತೆ ಕುರಿತು ಕೆಟ್ಟ ಮಾತನಾಡಿದ್ದಾರೆ ಎಂದು ಭವ್ಯಾ ಆರೋಪಿಸಿದ್ದಾರೆ. ಇನ್ನು ‘ಈ ಹಿಂದೆ ಉಪ ಚುನಾವಣೆ ಸಂದರ್ಭದಲ್ಲಿ ಮತ್ತು ದಿಲ್ಲಿಯಲ್ಲಿ ನನ್ನ ಸಹೋದ್ಯೋಗಿಗಳ ಮುಂದೆ ಕೆಲಸ ಮಾಡಲು ಬಿಡುವುದಿಲ್ಲವೆಂದು ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಭವ್ಯಾ ಆರೋಪಿಸಿದ್ದಾರೆ. ಅಲ್ಲದೇ ನಲಪಾಡ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ನನಗೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/3vi6Jsh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...