ಕ್ರಿಸ್‌ ಗೇಲ್‌ ಬರೀ ವಿನಾಶಕಾರಿ ಬ್ಯಾಟ್ಸ್‌ಮನ್‌ ಅಲ್ಲವೇ ಅಲ್ಲ ಎಂದ ರಾಹುಲ್‌!

ಚೆನ್ನೈ: ಟಿ20 ಇನಿಂಗ್ಸ್ ಅನ್ನು ಹೇಗೆ ಬೆಳೆಸಬೇಕು ಹಾಗೂ ಯಾವ ಬೌಲರ್‌ ಅನ್ನು ಗುರಿಯಾಗಿಸಬೇಕು ಎಂಬ ಬಗ್ಗೆ ಕ್ರಿಸ್‌ ಗೇಲ್‌ಗೆ ಚೆನ್ನಾಗಿ ಗೊತ್ತಿದೆ ಹಾಗೂ ತಂಡದ ಪ್ರದರ್ಶನದದಿಂದ ತುಂಬಾ ಸಂತೊಷವಾಗಿದೆ ಎಂದು ಪಂಜಾಬ್‌ ಕಿಂಗ್ಸ್ ತಂಡದ ನಾಯಕ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿದ ಬಳಿಕ ಹೇಳಿದರು. ಚೆನ್ನೈ ಎಂಎ ಚಿದಂಬರಂ ಕ್ರೀಡಾಮಗಣದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 132 ರನ್‌ಗಳ ಗುರಿಯನ್ನು ಪಂಜಾಬ್‌ ಕಿಂಗ್ಸ್ 17.4 ಓವರ್‌ಗಳಿಗೆ ಮುಟ್ಟಿತು. ಅದ್ಭುತ ಬ್ಯಾಟಿಂಗ್‌ ಮಾಡಿದ ಕೆ.ಎಲ್‌ ರಾಹುಲ್‌ 52 ಎಸೆತಗಳಲ್ಲಿ ಅಜೇಯ 60 ರನ್ ಹಾಗೂ ಇವರಿಗೆ ಸಾಥ್‌ ನೀಡಿದ 35 ಎಸೆತಗಳಲ್ಲಿ ಅಜೇಯ 43 ರನ್‌ ಗಳಿಸಿದರು. ಮತ್ತೊಬ್ಬ ಓಪನರ್‌ ಮಯಾಂಕ್‌ ಅಗರ್ವಾಲ್‌ ಕೂಡ 20 ಎಸೆತಗಳಲ್ಲಿ ನಿರ್ಣಾಯಕ 25 ರನ್‌ಗಳನ್ನು ಗಳಿಸಿದರು. ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇನಷನ್‌ನಲ್ಲಿ ಕ್ರಿಸ್‌ ಗೇಲ್‌ ಜೊತೆಗಿನ ಜೊತೆಯಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, "ಒಣಗಿರುವ ಬಾಲ್‌ ಹಿಡಿತಕ್ಕೆ ಸಿಕ್ಕ ಬಳಿಕ ಚೆನ್ನಾಗಿ ತಿರುಗುತ್ತದೆ ಎಂದು ನಮಗೆ ಗೊತ್ತಿತ್ತು. ಈ ಅವಧಿಯಲ್ಲಿ ಕ್ರಿಸ್‌ ಗೇಲ್‌ ಚೆನ್ನಾಗಿ ಸ್ಪಿನ್ನರ್‌ಗಳನ್ನು ನಿರ್ವಹಿಸಿದರು. ಯಾವ ಬೌಲರ್‌ಗೆ ಟಾರ್ಗೆಟ್‌ ಮಾಡಬೇಕೆಂಬುದು ಅವರಿಗೆ ಗೊತ್ತು. ಗೇಲ್‌ ಬರೀ ವಿನಾಶಕಾರಿ ಬ್ಯಾಟ್ಸ್‌ಮನ್‌ ಅಲ್ಲ, ಟಿ20 ಅನುಭವಿ ಆಟಗಾರ" ಎಂದು ಹೇಳಿದರು. ಟೂರ್ನಿಯ ಮೊದಲನೇ ಪಂದ್ಯ ಗೆದ್ದ ಬಳಿಕ ಹ್ಯಾಟ್ರಿಕ್‌ ಸೋಲು ಅನುಭವಿಸಿದ್ದ ಪಂಜಾಬ್‌ ಕಿಂಗ್ಸ್ ಶುಕ್ರವಾರ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಈ ಬಗ್ಗೆ ನಾಯಕ ಕೆ.ಎಲ್‌ ರಾಹುಲ್‌ ಹೆಚ್ಚಾಗಿ ಚಿಂತಿಸುವುದನ್ನು ನಿರಾಕರಿಸಿದ್ದಾರೆ. "ನಾವು ನಮ್ಮಿಂದ ಹೆಚ್ಚು ಮುಂದೆ ಬರಲು ಬಯಸುವುದಿಲ್ಲ, ನಾವು ನಿಧಾನವಾಗಿ ತಂಡವಾಗಿ ಒಟ್ಟಿಗೆ ಬರುತ್ತಿದ್ದೇವೆ. ಟೂರ್ನಿಯ ಮೊದಲನೇ ಪಂದ್ಯದ ಬಳಿಕ ನಾನು ಇದನ್ನೆ ಹೇಳಿದ್ದೆ. ಪ್ರತಿ ವರ್ಷ ನಾವು ಹೊಸ ಹೆಸರುಗಳನ್ನು ಸೇರಿಸುತ್ತೇವೆ. ಹಾಗಾಗಿ ತಾಳ್ಮೆಯಿಂದ ಇರಬೇಕು. ಹೂಡಾ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಶಾರೂಖ್‌ ಖಾನ್‌ ಕೂಡ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಇಂದು ರವಿ ಬಿಷ್ಣೋಯ್‌ ಕೂಡ," ಎಂದು ತಿಳಿಸಿದರು. ಇಲ್ಲಿನ ಚೆಪಾಕ್‌ ಅಂಗಣದಲ್ಲಿ ಚೇಸ್‌ ಮಾಡುವುದು ತುಂಬಾ ಕಷ್ಟ. ಪರಿಸ್ಥಿತಿ ಹೀಗಿರುವಾಗ ಕೆ.ಎಲ್‌ ರಾಹುಲ್‌ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು. ಆದರೆ, ನಮ್ಮ ತಂಡ ಯೋಜನೆಯನ್ನು ಹೊಂದಿದೆ ಎಂಬುದನ್ನು ರಾಹುಲ್‌ ಹೆಳಿದ್ದರು. "ಚೇಸಿಂಗ್‌ ಮಾಡುವ ಬಗ್ಗೆ ನಾನು ಹಾಗೂ ಕೋಚ್‌ ಅನಿಲ್‌ ಕುಂಬ್ಳೆ ಜಾಸ್ತಿ ಚರ್ಚೆ ನಡೆಸಿದ್ದೆವು. ಇಲ್ಲಿನ ವಿಕೆಟ್‌ ಜಿಗುಟಾಗಿದೆ ಹಾಗೂ ಆರಂಭಿಕ ಹಲವು ಪಂದ್ಯಗಳನ್ನು ನಾವು ಇಲ್ಲಿ ಆಡಿದ್ದೇವೆ. ಹಾಗಾಗಿ ಬೌಲರ್‌ಗಳು ಇಲ್ಲಿ ಬೌಲಿಂಗ್‌ ಮಾಡಲು ಒತ್ತಡದಲ್ಲಿರುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಬೌಲಿಂಗ್‌ ಮಾಡುವುದು ಬೌಲರ್‌ಗಳಿಗೆ ತುಂಬಾ ಮುಖ್ಯ. ಇಲ್ಲಿ ಮಂಜು ಜಾಸ್ತಿ ಇರಬಹುದು ಎಂಬುದನ್ನು ಕೇಳಿದ್ದೇನೆ. ಹಗಾಗಿ ಚೇಸಿಂಗ್‌ ಆಯ್ಕೆ ಮಾಡಿಕೊಂಡೆ. ಆದರೆ, ನಾವು ಅಂದುಕೊಂಡ ರೀತಿ ಮಂಜು ಇರಲಿಲ್ಲ," ಎಂದು ತಿಳಿಸಿದರು. ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು 131 ರನ್‌ಗಳಿಗೆ ನಿಯಂತ್ರಿಸುವಲ್ಲಿ ತಂಡಕ್ಕೆ ನೆರವಾಗಿದ್ದ ರವಿ ಬಿಷ್ಣೋಯ್‌ ಅವರನ್ನು ಕೆ.ಎಲ್‌ ರಾಹುಲ್ ಮುಕ್ತಕಂಠದಿಂದ ಗುಣಗಾನ ಮಾಡಿದರು. "ಅವರು (ಬಿಷ್ಣೋಯ್‌) ಅನಿರೀಕ್ಷಿತವಾಗಿ ಆರಂಭಿಕ ಕೆಲ ಪಂದ್ಯಗಳಿಗೆ ವಂಚಿತರಾಗಿದ್ದರು. ಅವರು ಅನಿಲ್‌ ಭಾಯ್‌ ಜೊತೆ ತುಂಬಾ ಕೆಲಸ ಮಾಡಿದ್ದಾರೆ ಹಾಗೂ ಯುವ ಸ್ಪಿನ್ನರ್‌ ಧೈರ್ಯಶಾಲಿ. ಬಿಷ್ಣೋಯ್‌ ನಮಗೆ ಹಿಡಿತವನ್ನು ತಂದುಕೊಟ್ಟಿದ್ದಾರೆ," ಎಂದು ಕೆ.ಎಲ್‌ ರಾಹುಲ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dJHOb5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...