ಚೆನ್ನೈ: ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ಗಳ ಸೋಲು ಅನುಭವಿಸಿದ ಬಳಿಕ ಬೇಸರ ವ್ಯಕ್ತಪಡಿಸಿದ ಮುಂಬೈ ಇಂಡಿಯನ್ಸ್ ನಾಯಕ , ತಮ್ಮ ತಂಡದ ಬ್ಯಾಟ್ಸ್ಮನ್ಗಳು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿದರು. ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 132 ರನ್ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ 17.4 ಓವರ್ಗಳಿಗೆ ಮುಟ್ಟಿತು. ಇಲ್ಲಿನ ಪಿಚ್ ಅಷ್ಟೊಂದು ಕೆಟ್ಟದಾಗಿ ಇರಲಿಲ್ಲ. ಮೊದಲನೇ ಇನಿಂಗ್ಸ್ನಲ್ಲಿ ನಾವು ಗಳಿಸಿದ ರನ್ಗಳು ಸಾಕಾಗಲಿಲ್ಲ ಎಂಬುದನ್ನು ರೋಹಿತ್ ಒತ್ತಿ ಹೇಳಿದರು. "ನಾವು ಗಳಿಸಿದ ರನ್ಗಳು ಸಾಲಲಿಲ್ಲ. ಬ್ಯಾಟಿಂಗ್ ಮಾಡಲು ಇಲ್ಲಿನ ವಿಕೆಟ್ ಅಷ್ಟೊಂದು ಕೆಟ್ಟದಾಗಿ ಇಲ್ಲ ಎಂಬ ಭಾವನೆ ನನಗೆ ಉಂಟಾಗುತ್ತಿದೆ. ಪಂಜಾಬ್ ಕಿಂಗ್ಸ್ ಹೇಗೆ ಬ್ಯಾಟಿಂಗ್ ಮಾಡಿತು ಹಾಗೂ 9 ವಿಕೆಟ್ಗಳಿಂದ ಗೆಲುವು ಪಡೆದಿದ್ದನ್ನು ನೀವು ನೋಡಬಹುದು. ಆದರೆ, ನಮ್ಮ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಅಪ್ಲಿಕೇಷನ್ ಮಿಸ್ ಆಗಿದೆ. ಒಂದು ವೇಳೆ 150 ರಿಂದ 160 ರನ್ ಗಳಿಸಿದರೆ ಇನ್ನಷ್ಟು ಸ್ಪರ್ಧೆ ಇರುತ್ತಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಇದು ನಮಗೆ ಮಿಸ್ ಆಗಿದೆ," ಎಂದು ರೋಹಿತ್ ಪಂದ್ಯದ ಬಳಿಕ ತಿಳಿಸಿದರು. ಪಂಜಾಬ್ ಕಿಂಗ್ಸ್ ಬೌಲರ್ಗಳನ್ನು ಗುಣಗಾನ ಮಾಡಿದ ರೋಹಿತ್ ಶರ್ಮಾ, ಪವರ್ಪ್ಲೇನಲ್ಲಿ ನಾನು ಮತ್ತು ಇಶಾನ್ ಕಿಶನ್ ಹೆಚ್ಚಿನ ರನ್ಗಳನ್ನು ಕಲೆ ಹಾಕಲು ಸಾಧ್ಯವಾಗಿಲ್ಲ ಎಂದರು. "ಬೇರೆ ದಿನಗಳಲ್ಲಿ ನೀವು ನೋಡಬಹುದು, ಪಂಜಾಬ್ ಕಿಂಗ್ಸ್ ಬೌಲರ್ಗಳು ಪವರ್ಪ್ಲೇನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಇಶಾನ್ ಕಿಶನ್ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಅವರಿಂದ ಸಾಧ್ಯವಾಗಲಿಲ್ಲ ಹಾಗೂ ಪವರ್ಪ್ಲೇನಲ್ಲಿ ನನ್ನಿಂದ ಕೂಡ ಸಾಧ್ಯವಾಗಲಿಲ್ಲ. ಈ ಹಿಂದಿನ ಪಂದ್ಯಗಳಲ್ಲಿ ನಾವು ಪವರ್ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದೆವು ಆದರೆ, ಇಂದು(ಶುಕ್ರವಾರ) ವಿಫಲರಾಗಿದ್ದೇವೆ. ನಮ್ಮ ಬ್ಯಾಟಿಂಗ್ ಲೈನ್ಅಪ್ನಲ್ಲಿ ಏನೋ ಮಿಸ್ ಆಗಿದೆ. ನಾವು ಅಂದುಕೊಂಡ ಹಾದಿಯಲ್ಲಿ 20 ಓವರ್ಗಳಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಬೇಕು," ಎಂದರು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ 2021ರ ಆವೃತ್ತಿಯ ಐಪಿಎಲ್ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೇರಿತು. ಜತೆಗೆ ಆರೆಂಜ್ ಕ್ಯಾಪ್ ಲಿಸ್ಟ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿರುದ್ಧ ಸೋಲಿನ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನದಲ್ಲಿಯೇ ಉಳಿದಿದೆ. ಮುಂಬೈ ಇಂಡಿಯನ್ಸ್ ತಂಡ ಏ.29 ರಂದು ದಿಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂದಿನ ಪಂದ್ಯವಾಡಲಿದೆ. ಇನ್ನು ಕೆ.ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ, ಏ.26 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tP6Lrh